ಆ್ಯಪ್ನಗರ

ಮಹಿಳೆಯರ ಸಂಕಷ್ಟಗಳು ದೂರ:ಸಿ.ಸಿ.ಪಾಟೀಲ

ನರಗುಂದ :ಮಹಿಳೆ ಅಡುಗೆ ಮನೆಯಲ್ಲಿ ಒಲೆ ಮುಂದೆ ಕುಳಿತು ಅಡುಗೆ ಮಾಡಲು ಇನ್ನಿಲ್ಲದ ನೋವು ಅನುಭವಿಸುತ್ತಿರುವುದನ್ನು ದೂರ ಮಾಡಿ ಅವರ ಸಂಕಷ್ಟ ನಿವಾರಿಸಲು ಅಡುಗೆ ಅನಿಲ ವಿತರಿಸುವ ಉಜ್ವಲ ಯೋಜನೆ ಜಾರಿಗೆ ತರಲಾಗಿದೆ ಎಂದು ಶಾಸಕ ಸಿ.ಸಿ.ಪಾಟೀಲ ನುಡಿದರು.

Vijaya Karnataka 8 Feb 2019, 5:00 am
ನರಗುಂದ :ಮಹಿಳೆ ಅಡುಗೆ ಮನೆಯಲ್ಲಿ ಒಲೆ ಮುಂದೆ ಕುಳಿತು ಅಡುಗೆ ಮಾಡಲು ಇನ್ನಿಲ್ಲದ ನೋವು ಅನುಭವಿಸುತ್ತಿರುವುದನ್ನು ದೂರ ಮಾಡಿ ಅವರ ಸಂಕಷ್ಟ ನಿವಾರಿಸಲು ಅಡುಗೆ ಅನಿಲ ವಿತರಿಸುವ ಉಜ್ವಲ ಯೋಜನೆ ಜಾರಿಗೆ ತರಲಾಗಿದೆ ಎಂದು ಶಾಸಕ ಸಿ.ಸಿ.ಪಾಟೀಲ ನುಡಿದರು.
Vijaya Karnataka Web womens hardship distance cc patil
ಮಹಿಳೆಯರ ಸಂಕಷ್ಟಗಳು ದೂರ:ಸಿ.ಸಿ.ಪಾಟೀಲ


ಇಲ್ಲಿನ ಪುರಸಭೆ ಆವರಣದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸಿ ಮಾತನಾಡಿದ ಅವರು, ಬಡ ಕುಟುಂಬದಲ್ಲಿ ಜನಿಸಿದ ಮಹಿಳೆಯರ ಸಂಕಷ್ಟಗಳು ದೂರವಾಗಲಿವೆ ಎಂದರು.

ನಗರದ 400 ಬಿಪಿಎಲ್‌ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್‌ ಒಲೆಗಳ ವಿತರಣೆಗೆ ಚಾಲನೆ ನೀಡಲಾಗಿದ್ದು, ದೇಶದ 125 ಕೋಟಿ ಜನಸಂಖ್ಯೆಯಲ್ಲಿ ಬಿಪಿಎಲ್‌ ಹೊಂದಿದ 8ಕೋಟಿ ಕುಟುಂಬಗಳಿಗೆ ಸಿಲಿಂಡರ್‌ ವಿತರಿಸಲಾಗಿದೆ. ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಿ ಆಯುಷ್ಮಾನ ಕಾರ್ಡ್‌ಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ನಡೆದಿದೆ. ಇನ್ನೂ ಕೆಲ ಕುಟುಂಬಗಳಿಗೆ ಕಾರ್ಡ್‌ ಬಾರದೆ ಇರುವುದು ಕೇಳಿ ಬಂದಿದ್ದು ಅಂತಹ ಕುಟುಂಬಗಳು ಬಿಪಿಎಲ್‌ ಕಾರ್ಡ್‌ನೊಂದಿಗೆ ಸ್ಥಳೀಯ ಪುರಸಭೆಯಲ್ಲಿ ತೆರೆದ ಕೌಂಟರ್‌ನಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು. ಪುರಸಭೆ ಅಧ್ಯಕ್ಷ ಚಂದ್ರು ಪವಾರ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಬಸವಣ್ಣೆವ್ವ ಪಿಡ್ನಾಯ್ಕರ, ಮುಖಂಡರಾದ ಎ.ಎಂ.ಹುಡೇದ, ಅಡಿವೆಪ್ಪ ಕೊರಿ, ಸದಸ್ಯರಾದ ಪ್ರಕಾಶ ಪಟ್ಟಣಶೆಟ್ಟಿ, ಶಿವಾನಂದ ಮುತವಾಡ, ಸುರೇಶ ಸವದತ್ತಿ, ಉಮೇಶ ಕುಡೇನವರ, ಎಪಿಎಂಸಿ ಅಧ್ಯಕ್ಷ ಹನುಮಂತ ಹಗದಲ್ಲ, ಇಂಡಿಯನ್‌ ಆಯಿಲ್‌ ಅಭಿವೃದ್ದಿ ಅಧಿಕಾರಿ ಶಬ್ಬೀರ ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷ ಕ ಕೆಂಚನಗೌಡ್ರ ನಿರೂಪಿಸಿದರು. ಮುಖ್ಯಾಧಿಕಾರಿ ನಾರಾಯಣ ಪೇಂಡಸೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ