ಆ್ಯಪ್ನಗರ

ಮಹಿಳೆಯರ ಸುರಕ್ಷ ತಾ ಜಾಗೃತಿ ಅಭಿಯಾನ

ನರಗುಂದ: ನಗರದ ಲಯನ್ಸ ಆಂಗ್ಲ ಮಾಧ್ಯಮ ಶಾಲೆ ಹಾಗೂ ಲಯನ್ಸ ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ಪೊಲೀಸ್‌ ಉಪ ವಿಭಾಗ ಪೊಲೀಸ್‌ ಠಾಣೆ ಆಶ್ರಯದಲ್ಲಿ ಮಹಿಳೆಯರ ಸುರಕ್ಷ ತಾ ಜಾಗೃತಿ ಅಭಿಯಾನ ನಡೆಯಿತು.

Vijaya Karnataka 14 Jun 2019, 5:00 am
ನರಗುಂದ: ನಗರದ ಲಯನ್ಸ ಆಂಗ್ಲ ಮಾಧ್ಯಮ ಶಾಲೆ ಹಾಗೂ ಲಯನ್ಸ ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ಪೊಲೀಸ್‌ ಉಪ ವಿಭಾಗ ಪೊಲೀಸ್‌ ಠಾಣೆ ಆಶ್ರಯದಲ್ಲಿ ಮಹಿಳೆಯರ ಸುರಕ್ಷ ತಾ ಜಾಗೃತಿ ಅಭಿಯಾನ ನಡೆಯಿತು.
Vijaya Karnataka Web womens safety awareness campaign
ಮಹಿಳೆಯರ ಸುರಕ್ಷ ತಾ ಜಾಗೃತಿ ಅಭಿಯಾನ


ಮುಖ್ಯ ಅತಿಥಿ ಸಿಪಿಐ ಸುಧೀರ ಬೆಂಕಿ ಮಾತನಾಡಿ, ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಎಚ್ಚರಿಕೆಯಿಂದ ಇರಬೇಕು. ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರ ಗಮನಕ್ಕೆ ತರಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಇರುವ ಕಾಯ್ದೆ ಹಾಗೂ ರಸ್ತೆ ಅಪಘಾತ ನಿಯಂತ್ರಿಸಲು ಅನುಸರಿಸಬೇಕಾದ ಕಾನೂನುಗಳ ಬಗ್ಗೆ ವಿವರಿಸಿದರು.

ಬೇಕಾಬಿಟ್ಟಿಯಾಗಿ ದ್ವಿಚಕ್ರ ವಾಹನ ಓಡಿಸಿ ಪ್ರಾಣಕ್ಕೆ ಕಂಟಕ ತಂದುಕೊಳ್ಳಬಾರದು, ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಪ್ರಾಣಾಪಾಯದಿಂದ ಪಾರಾಗಿ ಎಂದು ಸಲಹೆ ನೀಡಿದರು. ಗದಗ ಜಿಲ್ಲಾ ಚನ್ನಮ್ಮಾ ಮಹಿಳಾ ಪೊಲೀಸ್‌ ಪಡೆಯ ನೀಲಮ್ಮ ಬಡ್ಡಿಯವರ, ಬಸಮ್ಮ ಪಾಟೀಲ, ಶೈಲಜಾ ಶಾಂತಪ್ಪನವರ, ಕೀರ್ತಿ ಲಕ್ಕುಂಡಿ, ಹನಮವ್ವ ತಳವಾರ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಹಿಳೆಯರ ಕಿರಕುಳ, ಅತ್ಯಾಚಾರ ಕೃತ್ಯ ಎಸಗುತ್ತಿರುವ ಪುರುಷರ ಕಪಿ ಮುಷ್ಠಿಯಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದನ್ನು ಕರಾಟೆಯಂತಹ ತಂತ್ರಗಾರಿಕೆ ಮೂಲಕ ರಕ್ಷಿಸಿಕೊಳ್ಳಲು ಇರುವ ಉಪಾಯಗಳ ಕುರಿತು ನಾಟಕದ ಮೂಲಕ ಜಾಗೃತಿ ಮೂಡಿಸಿದರು.

ಅಧ್ಯಕ್ಷ ತೆ ವಹಿಸಿದ್ದ ಲಯನ್ಸ ಶಿಕ್ಷ ಣ ಸಂಸ್ಥೆಯ ಕಾರ್ಯದರ್ಶಿ ಜಿ.ಟಿ.ಗುಡಿಸಾಗರ ಮಾತನಾಡಿ, ಮಹಿಳೆ ಅಬಲೆಯಲ್ಲ ಸಬಲೆ, ಅವಳು ತನ್ನ ರಕ್ಷ ಣೆಯನ್ನು ತಾನೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಳಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್‌.ಜಿ.ಜಕ್ಕಲಿ, ಮುಖ್ಯ ಶಿಕ್ಷ ಕ ಜಿ.ಬಿ.ಹಿರೇಮಠ, ಶಿಕ್ಷ ಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷ ಕ ಬಿ.ಎ.ಕಳ್ಳಿಮನಿ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ