ಆ್ಯಪ್ನಗರ

ಹದಗೆಟ್ಟ ಜಗಾಪುರ ಒಳ ರಸ್ತೆ

ನರಗುಂದ: ಅಂಬೇಡ್ಕರ ನಗರ ಪಕ್ಕದ ಸವದತ್ತಿ ರಸ್ತೆಯಿಂದ ದಂಡಾಪುರ ರುದ್ರಭೂಮಿ ಮಾರ್ಗವಾಗಿ ಹೋಗುವ ಜಗಾಪುರ ಒಳ ರಸ್ತೆ ಸಂಪೂರ್ಣ ಕೆಟ್ಟು ಹೊಗಿದೆ. ರೈತರು ಕಾಲಿಟ್ಟರೆ ರಾಡಿಯಲ್ಲಿಸಿಕ್ಕಿಕೊಳ್ಳುವ ಸ್ಥಿತಿ. ಇನ್ನೂ ಟ್ರ್ಯಾಕ್ಟರ್‌, ಎತ್ತಿನಚಕ್ಕಡಿ ಸಂಚರಿಸುವುದು ಅಸಾಧ್ಯವಾಗಿದ್ದು ರೈತರು ಬೆಳೆದ ಹುಟ್ಟುವಳಿಯನ್ನು ಮನೆಗೆ ತೆಗೆದುಕೊಂಡು ಹೋಗಲು ಇನ್ನಿಲ್ಲದ ಸಾಹಸ ಪಡುವಂತಾಗಿದೆ.

Vijaya Karnataka 19 Oct 2019, 5:00 am
ನರಗುಂದ: ಅಂಬೇಡ್ಕರ ನಗರ ಪಕ್ಕದ ಸವದತ್ತಿ ರಸ್ತೆಯಿಂದ ದಂಡಾಪುರ ರುದ್ರಭೂಮಿ ಮಾರ್ಗವಾಗಿ ಹೋಗುವ ಜಗಾಪುರ ಒಳ ರಸ್ತೆ ಸಂಪೂರ್ಣ ಕೆಟ್ಟು ಹೊಗಿದೆ. ರೈತರು ಕಾಲಿಟ್ಟರೆ ರಾಡಿಯಲ್ಲಿಸಿಕ್ಕಿಕೊಳ್ಳುವ ಸ್ಥಿತಿ. ಇನ್ನೂ ಟ್ರ್ಯಾಕ್ಟರ್‌, ಎತ್ತಿನಚಕ್ಕಡಿ ಸಂಚರಿಸುವುದು ಅಸಾಧ್ಯವಾಗಿದ್ದು ರೈತರು ಬೆಳೆದ ಹುಟ್ಟುವಳಿಯನ್ನು ಮನೆಗೆ ತೆಗೆದುಕೊಂಡು ಹೋಗಲು ಇನ್ನಿಲ್ಲದ ಸಾಹಸ ಪಡುವಂತಾಗಿದೆ.
Vijaya Karnataka Web worsened jagapur inner road
ಹದಗೆಟ್ಟ ಜಗಾಪುರ ಒಳ ರಸ್ತೆ


ಸವದತ್ತಿ ರಸ್ತೆಯಿಂದ ದಂಡಾಪುರ ರುದ್ರಭೂಮಿವರೆಗೆ ರಸ್ತೆ ದುರಸ್ತಿ ಕಾರ್ಯ ನಡೆದಿದೆ. ಆದರೆ ರುದ್ರಭೂಮಿಯಿಂದ ಹೊಲಕ್ಕೆ ಹೋಗುವ ಜಗಾಪುರ ರಸ್ತೆ ಎರಡು ದಶಕವಾದರೂ ದುರಸ್ತಿ ಕಂಡಿಲ್ಲ. ಮಳೆಯಿಂದ ರಸ್ತೆ ಕೊರಕಲು ಬಿದ್ದು ನಡೆದು ಹೋಗುವುದೆ ಕಷ್ಟವಾಗಿದೆ. ಇನ್ನೂ ರೈತರು ತಮ್ಮ ಹೊಲಗಳಿಗೆ ಎತ್ತಿನ ಚಕ್ಕಡಿ ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಟ್ರ್ಯಾಕ್ಟರ್‌ ಹೊರಟರೆ ರಾಡಿಯಲ್ಲಿಸಿಲುಕುವ ಸ್ಥಿತಿಯಾಗಿದ್ದರಿಂದ ಅಲ್ಲಿನ ರೈತರು ತೊಂದರೆಯಾಗಿದೆ.

ರೈತರು ಜೋಳ, ಗೋಧಿ, ಕಡಲೆ, ಬಿತ್ತನೆಗೆ ಮುಂದಾಗಿದ್ದಾರೆ. ಆದರೆ ಬಿತ್ತನೆಗೆ ಟ್ರ್ಯಾಕ್ಟರ್‌ ಆಗಲಿ, ರೈತರಾಗಲಿ ಹೋಗಲು ಇನ್ನಿಲ್ಲದ ತೊಂದರೆಗೆ ಸಿಲುಕುವಂತಿದ್ದುಕೂಡಲೆ ರೈತರ ಅನುಕೂಲಕ್ಕಾಗಿ, ಎತ್ತು ಚಕ್ಕಡಿ, ಟ್ರ್ಯಾಕ್ಟರ್‌ ಸಂಚರಿಸಲು ದುರಸ್ತಿ ಮಾಡಬೇಕು ಎಂದು ಎಂ.ಕೆ.ಅಲ್ಲಿಬಾಯಿ, ಸಂಗನಗೌಡ ಮಲ್ಲನಗೌಡ್ರ, ಅಹ್ಮದ ಪಠಾಣ, ರುದ್ರಗೌಡ ನಾಯ್ಕರ, ಕಡ್ಯಾಸಾಬ ಪಠಾಣ ಹಾಗೂ ಹಿರೇಮಠ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ