ಗದಗ: ಬಿಜೆಪಿ ವಿಭಿನ್ನವಾಗಿ ಬೆಳೆದು ಬಂದಿದೆ. ಉನ್ನತ ಗುರಿ ಹಾಗೂ ಪರಿವರ್ತನೆಯ ಚಿಂತನೆ ಹೊಂದಿದೆ. ಅಧಿಕಾರಕ್ಕೆ ಅಂಟಿಕೊಳ್ಳದೆ ರಾಷ್ಟ್ರಕ್ಕಾಗಿ ಸಮರ್ಪಣಾ ಮನೋಭಾವದಿಂದ ದುಡಿಯುತ್ತಿರುವ ಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನಕುಮಾರ ಕಟೀಲ ಹೇಳಿದರು.
ಬಿಜೆಪಿ ಜಿಲ್ಲಾಘಟಕದಿಂದ ನಗರದ ಶ್ರೀನಿವಾಸ ಭವನದಲ್ಲಿನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿನ ಸರಕಾರ ಮೂರು ವರ್ಷಗಳ ಕಾಲ ಅಧಿಕಾರ ನಡೆಸುತ್ತಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಜನಸಂಘದಿಂದ ಹುಟ್ಟಿಕೊಂಡಿರುವ ಬಿಜೆಪಿ ಇಂದಿಗೂ ರಾಷ್ಟ್ರೀಯತೆಗೆ ಬದ್ಧವಾಗಿದೆ ಎಂಬುದಕ್ಕೆ ಕಾಶ್ಮೀರ ವಿಚಾರವನ್ನು ಕೇಂದ್ರ ಸರಕಾರ ಕೈಗೊಂಡಿರುವ ದೃಢ ನಿರ್ಧಾರವೇ ಸಾಕ್ಷಿಯಾಗಿದೆ. ಬಿಜೆಪಿಗೆ ಅಧಿಕಾರಕ್ಕಿಂತ ಭಾರತ ಮಾತೆಯ ಆರಾಧನೆ ಮುಖ್ಯ. ಜತೆಗೆ ವ್ಯಕ್ತಿಗಿಂತ ಪಕ್ಷ ಶ್ರೇಷ್ಠ. ಪಕ್ಷಕ್ಕಿಂತ ರಾಷ್ಟ್ರ ಶ್ರೇಷ್ಠವಾಗಿದೆ. ಬಿಜೆಪಿ ಇತಿಹಾಸದುದ್ದಕ್ಕೂ ರಾಷ್ಟ್ರಕ್ಕಾಗಿ ಸಮರ್ಪಿಸಿಕೊಂಡಿದೆ ಎಂದರು.
ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಸಾಮಾನ್ಯ ಕಾರ್ಯಕರ್ತನೂ ಕೂಡ ಉನ್ನತ ಹುದ್ದೆ ಅಲಂಕರಿಸುವಂತೆ ಮಾಡುವ ಏಕೈಕ ಪಕ್ಷ ಎಂದರೆ ಬಿಜೆಪಿಯಲ್ಲಿಮಾತ್ರ ಸಾಧ್ಯವಾಗುತ್ತಿದೆ. ಸಂಘ ಪರಿವಾರ, ಎಬಿವಿಪಿಯಲ್ಲಿಸಕ್ರಿಯ ಕಾರ್ಯಕರ್ತನಾಗಿ ಬೆಳೆದು ಸಂಸದರಾಗಿದ್ದು, ಸಧ್ಯ ರಾಜ್ಯಘಟಕದ ಅಧ್ಯಕ್ಷರಾಗಿರುವ ನಳೀನಕುಮಾರ ಕಟೀಲ ಅವರೇ ಇದಕ್ಕೆ ಸಾಕ್ಷಿ ಆಗಿದ್ದಾರೆ. ಮುಂಬರುವ ದಿನಗಳಲ್ಲಿನಡೆಯುವ ಗದಗ-ಬೆಗಟೇರಿ ನಗರಸಭೆಯನ್ನು ಬಿಜೆಪಿ ವಶಕ್ಕೆ ಪಡೆದುಕೊಳ್ಳುತ್ತೇವೆ. ಸದಸ್ಯತ್ವ ಅಭಿಯಾನ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಪ್ರವಾಹದ ಕಾರಣದಿಂದ ಸ್ವಲ್ಪ ವಿಳಂಬವಾಗಿದೆ. ನಂತರದ ದಿನಗಳಲ್ಲಿಸಕ್ರಿಯವಾಗಿ ಸದಸ್ಯತ್ವ ಕಾರ್ಯಕ್ರಮ ಜರುಗಿಸಿ ಹೆಚ್ಚಿನ ಪ್ರಮಾಣದಲ್ಲಿಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ ಎಂದರು.
ಜಿಲ್ಲೆಯ ಎಲ್ಲಪುರಸಭೆ ಹಾಗೂ ಪಿಎಲ್ಡಿ ಬ್ಯಾಂಕ್ಗಳು ಬಿಜೆಪಿ ವಶದಲ್ಲಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿನಾಲ್ಕು ಕ್ಷೇತ್ರಗಳಲ್ಲಿಮೂರರಲ್ಲಿಜಯಗಳಿಸಿದ್ದು, ಗದಗ ಕ್ಷೇತ್ರವು ಕೂದಲೆಳೆ ಅಂತರದಲ್ಲಿಸೋಲುಂಟಾಗಿದೆ. ಮುಂಬರುವ ದಿನಗಳಲ್ಲಿಗದಗ ಕ್ಷೇತ್ರದಲ್ಲಿಗೆಲುವು ಸಾಧಿಸಲಿದ್ದೇವೆ ಎಂದರು.
ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸಚಿವ ಸಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಪ್ರಧಾನಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ಶ್ರೀಪತಿ ಉಡುಪಿ, ರಾಜು ಕುರಡಗಿ, ಮುಖಂಡರಾದ ಅನಿಲ ಮೆಣಸಿನಕಾಯಿ, ಎಂ.ಎಸ್. ಕರಿಗೌಡ್ರ, ಕಾಂತಿಲಾಲ… ಬನ್ಸಾಲಿ, ಅಶ್ವಿನಿ ಜಗತಾಪ, ಜಗನ್ನಾಥಸಾ ಭಾಂಡಗೆ ಇದ್ದರು.
ಬಿಜೆಪಿ ಜಿಲ್ಲಾಘಟಕದಿಂದ ನಗರದ ಶ್ರೀನಿವಾಸ ಭವನದಲ್ಲಿನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿನ ಸರಕಾರ ಮೂರು ವರ್ಷಗಳ ಕಾಲ ಅಧಿಕಾರ ನಡೆಸುತ್ತಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಜನಸಂಘದಿಂದ ಹುಟ್ಟಿಕೊಂಡಿರುವ ಬಿಜೆಪಿ ಇಂದಿಗೂ ರಾಷ್ಟ್ರೀಯತೆಗೆ ಬದ್ಧವಾಗಿದೆ ಎಂಬುದಕ್ಕೆ ಕಾಶ್ಮೀರ ವಿಚಾರವನ್ನು ಕೇಂದ್ರ ಸರಕಾರ ಕೈಗೊಂಡಿರುವ ದೃಢ ನಿರ್ಧಾರವೇ ಸಾಕ್ಷಿಯಾಗಿದೆ. ಬಿಜೆಪಿಗೆ ಅಧಿಕಾರಕ್ಕಿಂತ ಭಾರತ ಮಾತೆಯ ಆರಾಧನೆ ಮುಖ್ಯ. ಜತೆಗೆ ವ್ಯಕ್ತಿಗಿಂತ ಪಕ್ಷ ಶ್ರೇಷ್ಠ. ಪಕ್ಷಕ್ಕಿಂತ ರಾಷ್ಟ್ರ ಶ್ರೇಷ್ಠವಾಗಿದೆ. ಬಿಜೆಪಿ ಇತಿಹಾಸದುದ್ದಕ್ಕೂ ರಾಷ್ಟ್ರಕ್ಕಾಗಿ ಸಮರ್ಪಿಸಿಕೊಂಡಿದೆ ಎಂದರು.
ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಸಾಮಾನ್ಯ ಕಾರ್ಯಕರ್ತನೂ ಕೂಡ ಉನ್ನತ ಹುದ್ದೆ ಅಲಂಕರಿಸುವಂತೆ ಮಾಡುವ ಏಕೈಕ ಪಕ್ಷ ಎಂದರೆ ಬಿಜೆಪಿಯಲ್ಲಿಮಾತ್ರ ಸಾಧ್ಯವಾಗುತ್ತಿದೆ. ಸಂಘ ಪರಿವಾರ, ಎಬಿವಿಪಿಯಲ್ಲಿಸಕ್ರಿಯ ಕಾರ್ಯಕರ್ತನಾಗಿ ಬೆಳೆದು ಸಂಸದರಾಗಿದ್ದು, ಸಧ್ಯ ರಾಜ್ಯಘಟಕದ ಅಧ್ಯಕ್ಷರಾಗಿರುವ ನಳೀನಕುಮಾರ ಕಟೀಲ ಅವರೇ ಇದಕ್ಕೆ ಸಾಕ್ಷಿ ಆಗಿದ್ದಾರೆ. ಮುಂಬರುವ ದಿನಗಳಲ್ಲಿನಡೆಯುವ ಗದಗ-ಬೆಗಟೇರಿ ನಗರಸಭೆಯನ್ನು ಬಿಜೆಪಿ ವಶಕ್ಕೆ ಪಡೆದುಕೊಳ್ಳುತ್ತೇವೆ. ಸದಸ್ಯತ್ವ ಅಭಿಯಾನ ಪರಿಣಾಮಕಾರಿಯಾಗಿ ನಡೆಯುತ್ತಿದೆ. ಪ್ರವಾಹದ ಕಾರಣದಿಂದ ಸ್ವಲ್ಪ ವಿಳಂಬವಾಗಿದೆ. ನಂತರದ ದಿನಗಳಲ್ಲಿಸಕ್ರಿಯವಾಗಿ ಸದಸ್ಯತ್ವ ಕಾರ್ಯಕ್ರಮ ಜರುಗಿಸಿ ಹೆಚ್ಚಿನ ಪ್ರಮಾಣದಲ್ಲಿಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ ಎಂದರು.
ಜಿಲ್ಲೆಯ ಎಲ್ಲಪುರಸಭೆ ಹಾಗೂ ಪಿಎಲ್ಡಿ ಬ್ಯಾಂಕ್ಗಳು ಬಿಜೆಪಿ ವಶದಲ್ಲಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿನಾಲ್ಕು ಕ್ಷೇತ್ರಗಳಲ್ಲಿಮೂರರಲ್ಲಿಜಯಗಳಿಸಿದ್ದು, ಗದಗ ಕ್ಷೇತ್ರವು ಕೂದಲೆಳೆ ಅಂತರದಲ್ಲಿಸೋಲುಂಟಾಗಿದೆ. ಮುಂಬರುವ ದಿನಗಳಲ್ಲಿಗದಗ ಕ್ಷೇತ್ರದಲ್ಲಿಗೆಲುವು ಸಾಧಿಸಲಿದ್ದೇವೆ ಎಂದರು.
ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸಚಿವ ಸಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಪ್ರಧಾನಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ಶ್ರೀಪತಿ ಉಡುಪಿ, ರಾಜು ಕುರಡಗಿ, ಮುಖಂಡರಾದ ಅನಿಲ ಮೆಣಸಿನಕಾಯಿ, ಎಂ.ಎಸ್. ಕರಿಗೌಡ್ರ, ಕಾಂತಿಲಾಲ… ಬನ್ಸಾಲಿ, ಅಶ್ವಿನಿ ಜಗತಾಪ, ಜಗನ್ನಾಥಸಾ ಭಾಂಡಗೆ ಇದ್ದರು.