ಆ್ಯಪ್ನಗರ

ವಾಲ್ಮೀಕಿ ಸಮುದಾಯ ಭವನ ಭೂಮಿ ಪೂಜೆ

ಮುಂಡರಗಿ : ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಭೂಮಿ ಪೂಜೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ 18 ಲಕ್ಷ ರೂ.ಅನುದಾನ ನೀಡಿದ ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಉಪಕಾರ ಸ್ಮರಣೆ ಕಾರ್ಯಕ್ರಮ ಆ.19 ರಂದು ಬೆಳಗ್ಗೆ 10.30 ಕ್ಕೆ ಪಟ್ಟಣದ ರಾಮೇನಹಳ್ಳಿ ರಸ್ತೆಯ

Vijaya Karnataka 18 Aug 2019, 5:00 am
ಮುಂಡರಗಿ : ಮಹರ್ಷಿ ವಾಲ್ಮೀಕಿ ಸಮುದಾಯ ಭವನ ಭೂಮಿ ಪೂಜೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ 18 ಲಕ್ಷ ರೂ.ಅನುದಾನ ನೀಡಿದ ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಉಪಕಾರ ಸ್ಮರಣೆ ಕಾರ್ಯಕ್ರಮ ಆ.19 ರಂದು ಬೆಳಗ್ಗೆ 10.30 ಕ್ಕೆ ಪಟ್ಟಣದ ರಾಮೇನಹಳ್ಳಿ ರಸ್ತೆಯ ವಾಲ್ಮೀಕಿ ಭವನ ಬಳಿ ಕಾರ್ಯಕ್ರಮ ಜರುಗಲಿದೆ ಎಂದು ವಾಲ್ಮೀಕಿ ನಾಯಕ ಸಂಘದ ಕಾರ್ಯದರ್ಶಿ ಪ್ರೊ.ಬಿ.ಎಫ್‌.ಈಟಿ ಹೇಳಿದರು.
Vijaya Karnataka Web worship of valmiki community house bhoomi
ವಾಲ್ಮೀಕಿ ಸಮುದಾಯ ಭವನ ಭೂಮಿ ಪೂಜೆ


ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಕಾರ್ಯಕ್ರಮ ಸಾನ್ನಿಧ್ಯವನ್ನು ರಾಜೇನಹಳ್ಳಿ ಗುರುಪೀಠದ ಪ್ರಸನ್ನಾನಂದ ಸ್ವಾಮಿಗಳು ವಹಿಸುವರು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಭೂಮಿ ಪೂಜೆ ನೆರವೇರಿಸುವರು. ತಾಲೂಕು ವಾಲ್ಮೀಕಿ ನಾಯಕ ಸಂಘದ ಮೈಲಾರಪ್ಪ ಕಲಕೇರಿ ಅಧ್ಯಕ್ಷ ತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಖಾಸಗಿ ಶಿಕ್ಷ ಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರ.ಕಾರ್ಯದರ್ಶಿ ಬಸವರಾಜ ಧಾರವಾಡ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಬಸವರಾಜ ಬೆಳದಡಿ, ಹಾಗೂ ರಾಜ್ಯ ಕುರಿ ಮತ್ತು ಉಣ್ಣೆ ನಿಗಮ ಮಾಜಿ ಅಧ್ಯಕ್ಷ ವೈ.ಎನ್‌.ಗೌಡರ ಪಾಲ್ಗೊಳ್ಳುವರು.

ವಾಲ್ಮೀಕಿ ನಾಯಕ ಸಮಾಜದವರ ಶಿಕ್ಷ ಣ ಉದ್ದೇಶಕ್ಕಾಗಿ ಈಗಾಗಲೇ ಬಿ.ಶ್ರೀರಾಮುಲು ಅವರ ಅನುದಾನದಲ್ಲಿ 2 ಲಕ್ಷ ದಲ್ಲಿ ಹಳೆ ಸಮುದಾಯ ಭವನ ಇದೆ. ವಿವಿಧ ಉದ್ದೇಶಗಳಿಗಾಗಿ ನೂತನ ವಾಲ್ಮೀಕಿ ಭವನಕ್ಕೆ ಬಸವರಾಜ ಹೊರಟ್ಟಿ 18 ಲಕ್ಷ ರೂ.ಅನುದಾನ ನೀಡಿದ್ದಾರೆ. ಹೀಗಾಗಿ ವಾಲ್ಮೀಕಿ ಸಮಾಜದವರ ಬಗ್ಗೆ ಕಾಳಜಿ ಹೊಂದಿದ ಹೊರಟ್ಟಿ ವರನ್ನು ಸ್ಮರಿಸುವುದಕ್ಕಾಗಿ ಈ ಕಾರ್ಯಕ್ರಮ ಏರ್ಪಡಿಸಿದೆ ಎಂದರು.

ಗರುಡಪ್ಪ ಜಂತ್ಲಿ, ಶೇಖಣ್ಣ ಪೂಜಾರ, ವಿಜಯಕುಮಾರ ರಾಟಿ, ಫಕ್ಕೀರಪ್ಪ ರಾರ‍ಯವಣಕಿ, ವೀರಣ್ಣ ಜೆಲ್ಲಿಗೇರಿ, ದೇವಣ್ಣ ಇದ್ಲಿ, ಉಮೇಶ ಚೂರಿ, ಬನ್ನೆಪ್ಪ ಚೂರಿ, ಚನ್ನಪ್ಪ ಹಳ್ಳಿ, ಕೃಷ್ಣಪ್ಪ ಕಲಕೇರಿ, ಹುಲಗಪ್ಪ ಚೂರಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ