ಆ್ಯಪ್ನಗರ

ಭೂತಾಯಿಗೆ ರೈತರಿಂದ ಪೂಜೆ

ಲಕ್ಷ್ಮೇಶ್ವರ : ಭಾರತೀಯ ಸಂಸ್ಕೃತಿ, ಪರಂಪರೆ ಹೊಂದಿದ್ದು ಭಾರತೀಯರ ಪ್ರಕಾರ ಯುಗಾದಿ ಹಬ್ಬವು ಹೊಸ ವರ್ಷವಾಗಿರುವುದರಿಂದ ರೈತರು ತಮ್ಮ ಜಮೀನುಗಳ ಪೂಜೆಗಳನ್ನು ಮಾಡಿ ಭೂತಾಯಿಗೆ ನಮನ ಸಲ್ಲಿಸಿ ಕೃಷಿ ಚಟುವಟಿಕೆ ಪ್ರಾರಂಭ ಮಾಡುತ್ತಾರೆ.

Vijaya Karnataka 10 Apr 2019, 5:00 am
ಲಕ್ಷ್ಮೇಶ್ವರ : ಭಾರತೀಯ ಸಂಸ್ಕೃತಿ, ಪರಂಪರೆ ಹೊಂದಿದ್ದು ಭಾರತೀಯರ ಪ್ರಕಾರ ಯುಗಾದಿ ಹಬ್ಬವು ಹೊಸ ವರ್ಷವಾಗಿರುವುದರಿಂದ ರೈತರು ತಮ್ಮ ಜಮೀನುಗಳ ಪೂಜೆಗಳನ್ನು ಮಾಡಿ ಭೂತಾಯಿಗೆ ನಮನ ಸಲ್ಲಿಸಿ ಕೃಷಿ ಚಟುವಟಿಕೆ ಪ್ರಾರಂಭ ಮಾಡುತ್ತಾರೆ.
Vijaya Karnataka Web GDG-08LXR03
ಲಕ್ಷ್ಮೇಶ್ವರದಲ್ಲಿ ಸಿಂಗರಿಸಿ ಎತ್ತಿನ ಬಂಡಿಯಲ್ಲಿ ಜಮೀನಿಗೆ ಹೋಗುತ್ತಿರುವ ರೈತ.


ರೈತರು ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ಬೆಳಗಾಗುವುದರ ಒಳಗೆ ಸಿಂಗರಿಸಿದ ಎತ್ತಿನ ಬಂಡಿ ಹೂಡೆದುಕೊಂಡು ಜಮೀನಿಗೆ ಹೋಗುತ್ತಾರೆ. ಸಮೃದ್ಧ ಮಳೆ ಬೆಳೆ ಬರಲಿ ಎಂದು ಭೂತಾಯಿ ಒಡಲಿಗೆ ಹಾಲು, ತುಪ್ಪ, ಹಣ್ಣು, ಕಾಯಿಗಳನ್ನು ಸಮರ್ಪಿಸಿ ಜಮೀನುಗಳನ್ನು ಹರಗುವುದರೊಂದಿಗೆ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುತ್ತಾರೆ.

ಇದರೊಂದಿಗೆ ಮುಂಗಾರು ಪೂರ್ವದಲ್ಲಿಯೇ ತಮ್ಮ ಜಮೀನುಗಳನ್ನು ಹಸನ ಮಾಡಿ ಮುಂಗಾರಿ ಬಿತ್ತನೆಗೆ ಸಿದ್ಧಗೊಳಿಸುತ್ತಾರೆ. ಕಳೆದ 5 ವರ್ಷಗಳಿಂದಲೂ ಸತತ ಬರಗಾಲದಿಂದ ತತ್ತರಿಸಿರುವ ರೈತ ಸಮುದಾಯ ಪ್ರಸಕ್ತ ಹಂಗಾಮಿನಲ್ಲಿಯಾದರೂ ಮಳೆಯಾಗಲಿ ಎನ್ನುವುದು ಅವರ ಆಶಯವಾಗಿರುತ್ತದೆ.

ಪವಿತ್ರ ಯುಗಾದಿ ದಿನದಂದು ಎಣ್ಣೆ ಸ್ನಾನ ಮಾಡಿ ಬೇವು-ಬೆಲ್ಲವನ್ನು ಸವಿದು ಹೊಸ ಬಟ್ಟೆ ಧರಿಸಿ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ