ಆ್ಯಪ್ನಗರ

ಉತ್ತಮ ಆರೋಗ್ಯಕ್ಕಾಗಿ ಯೋಗ

ಲಕ್ಷ್ಮೇಶ್ವರ: ಪ್ರತಿದಿನ ಯೋಗ ಮಾಡುವುದರಿಂದ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ಬಿಸಿಎನ್‌ ವಿದ್ಯಾ ಸಂಸ್ಥೆಯ ನಿರ್ದೇಶಕ ಡಾ.ರೇವತಿ ನೆಲವಗಿ ಹೇಳಿದರು.

Vijaya Karnataka 22 Jun 2019, 5:00 am
ಲಕ್ಷ್ಮೇಶ್ವರ: ಪ್ರತಿದಿನ ಯೋಗ ಮಾಡುವುದರಿಂದ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ಬಿಸಿಎನ್‌ ವಿದ್ಯಾ ಸಂಸ್ಥೆಯ ನಿರ್ದೇಶಕ ಡಾ.ರೇವತಿ ನೆಲವಗಿ ಹೇಳಿದರು.
Vijaya Karnataka Web GDG-21RUDRAGOUD11
ಲಕ್ಷ್ಮೇಶ್ವರ ಪಟ್ಟಣದ ಬಿಸಿಎನ್‌ ವಿದ್ಯಾ ಸಂಸ್ಥೆಯ ಶಾಲಾ ಮೈದಾನದಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಂದ ವಿವಿಧ ಭಂಗಿಯಲ್ಲಿ ಯೋಗ ಮಾಡಲಾಯಿತು.


ಪಟ್ಟಣದ ಬಿಸಿಎನ್‌ ವಿದ್ಯಾ ಸಂಸ್ಥೆಯ ಶಾಲಾ ಮೈದಾನದಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯೋಪಾಧ್ಯಾಯ ಕೆ.ಎಸ್‌.ಕೋಷ್ಠಿ ಮಾತನಾಡಿ, ಯೋಗ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು. ಏಕೆಂದರೆ ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯ ಮಾಡಿದ್ದು ನಮ್ಮ ಭಾರತ. ವಿಶ್ವದ ಸನಾತನ ಪರಂಪರೆಯಾದ ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಗುವಂತೆ ಮಾಡಿದ್ದು ನಮ್ಮ ನೆಚ್ಚಿನ ಪ್ರಧಾನಮಂತ್ರಿಗಳು ಎಂದು ತಿಳಿಸಿದರು. ಶಿಕ್ಷ ಕಿ ಕ್ಷ ಮಾ ಮುಂಜಿ ಮಾತನಾಡಿ, ಜೀವನದಲ್ಲಿ ಆರೋಗ್ಯ, ಸುಖ, ಶಾಂತಿ, ನೆಮ್ಮದಿ, ಶಿಸ್ತು ದೊರೆಯಲು ಮುಖ್ಯ ಕಾರಣ ಯೋಗ ಎಂದು ತಿಳಿಸಿದರು.

ಸಿ.ಎಫ್‌.ಪಾಟೀಲ ಮಾತನಾಡಿ, ಯೋಗ ಮಾಡುವದರಿಂದ ರೋಗ ದೂರ ಎಂಬಂತೆ ಪ್ರತಿನಿತ್ಯ ಯೋಗ ಮಾಡಿ ಮಾನಸಿಕ, ದೈಹಿಕ ಸಾಮರ್ಥ್ಯ‌ ಹೊಂದಬೇಕು ಎಂದು ಸಲಹೆ ನೀಡಿದರು.

ದೈಹಿಕ ಶಿಕ್ಷ ಕ ಬಿ.ಎ.ಚೌರಿ ಮಕ್ಕಳಿಗೆ ಯೋಗಾಸನದ ಆಯಾಮಗಳನ್ನು ತಿಳಿಸಿದರು. ಎಲ್ಲ ಶಿಕ್ಷ ಕ ವೃಂದ, ವಿದ್ಯಾರ್ಥಿ ವೃಂದ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ