ಆ್ಯಪ್ನಗರ

ಆರೋಗ್ಯದ ಸಮತೋಲನಕ್ಕೆ ಯೋಗ ಅವಶ್ಯ

ಗದಗ : ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ನಿತ್ಯ ಬದುಕಿನಲ್ಲಿ ಯೋಗ ಅವಶ್ಯ ಮತ್ತು ಅನಿವಾರ್ಯವಾಗಿದೆ ಎಂದು ಗದಗ ಜೆ.ಟಿ.ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಈಶಣ್ಣ ಮುನವಳ್ಳಿ ಅಭಿಪ್ರಾಯಪಟ್ಟರು.

Vijaya Karnataka 23 Jun 2019, 5:00 am
ಗದಗ : ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ನಿತ್ಯ ಬದುಕಿನಲ್ಲಿ ಯೋಗ ಅವಶ್ಯ ಮತ್ತು ಅನಿವಾರ್ಯವಾಗಿದೆ ಎಂದು ಗದಗ ಜೆ.ಟಿ.ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಈಶಣ್ಣ ಮುನವಳ್ಳಿ ಅಭಿಪ್ರಾಯಪಟ್ಟರು.
Vijaya Karnataka Web GDG-22RUDRAGOUD3
ಗದಗ ಜೆ.ಟಿ.ಕಾಲೇಜಿನ ಮೈದಾನದಲ್ಲಿ ವಾಯು ವಿಹಾರ ಬಳಗ ಏರ್ಪಡಿಸಿದ್ದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗಾಸನ ಮಾಡುವ ಮೂಲಕ ಚಾಲನೆ ನೀಡಿ ಈಶಣ್ಣ ಮುನವಳ್ಳಿ ಮಾತನಾಡಿದರು.


ನಗರದ ಜೆ.ಟಿ.ಕಾಲೇಜಿನ ಮೈದಾನದಲ್ಲಿ ವಾಯು ವಿಹಾರ ಬಳಗ ಏರ್ಪಡಿಸಿದ್ದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗಾಸನ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಯೋಗ ಸಾಧನೆಯಿಂದ ಆರೋಗ್ಯದಲ್ಲಿ ಸದೃಢತೆ, ಆತ್ಮವಿಶ್ವಾಸ ಬಲವರ್ಧನೆ, ಧೀರ್ಘಾಯುಷ್ಯದ ನೆಲೆಯನ್ನು ಕಂಡುಕೊಂಡ ಭಾರತೀಯರ ಯೋಗದ ಮಹಿಮೆಯನ್ನು ಇದೀಗ ವಿದೇಶಿಯರೂ ಯೋಗದೆಡೆಗೆ ಆಕರ್ಷಿತರಾಗಿದ್ದಾರೆ. ರೋಗ ಮುಕ್ತಿಗೆ ಯೋಗದ ಅವಶ್ಯಕತೆಯನ್ನು ಮನಗಂಡಿದ್ದಾರೆ ಎಂದರು.

ನಿವೃತ್ತ ಪ್ರಾಚಾರ್ಯ ಪ್ರೊ.ಎಂ.ಸಿ.ವಗ್ಗಿ ಹಾಗೂ ಗಿರೀಶ ಕಬಾಡಿ ಅವರು ವಾಯು ವಿಹಾರ ಬಳಗಕ್ಕೆ ಯೋಗದ ಪ್ರಾತ್ಯಕ್ಷಿಕೆಯನ್ನು ಸಾಧರಪಡಿಸಿದರು.

ವಾಯು ವಿಹಾರ ಬಳಗದ ರಮೇಶ ಮುಧೋಳ, ಸತೀಶ ಮುದಗಲ್ಲ ಮಾತನಾಡಿ ಬಹು ವರ್ಷಗಳಿಂದ ಜೆ.ಟಿ.ಕಾಲೇಜ ಮೈದಾನದಲ್ಲಿ ವಾಯು ವಿಹಾರಿಗಳಿಗೆ ವಾಯು ವಿಹಾರಕ್ಕೆ ಅವಕಾಶ ನೀಡಿ ಸಹಕರಿಸಿದ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರಿಗೆ ಕೃತಜ್ಞತೆ ಸಲ್ಲಿಸಿ ವಾಯು ವಿಹಾರಿಗಳು ಮೈದಾನದಲ್ಲಿ ಶಿಸ್ತು ಮತ್ತು ಸಮಯ ಪಾಲನೆಯನ್ನು ಕಾಯ್ದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು.

ಪ್ರೊ.ಆರ್‌.ಎಸ್‌.ಕುಂದಗೋಳ ಯೋಗ ನಡೆದು ಬಂದ ದಾರಿ, ಯೋಗದಿಂದಾಗುವ ಲಾಭವನ್ನು ವಿಶ್ಲೇಷಿಸಿ ಮಾತನಾಡಿದರು. ವೈ.ಕೆ.ಪಿಡಗಣ್ಣವರ, ಬಿ.ಬಿ.ಶಿಗ್ಗಾವಿ ಹಾಗೂ ಎ.ಎಸ್‌.ಕೊಡಗಲಿ ನಿತ್ಯ ಜೀವನದಲ್ಲಿ ಯೋಗದ ಅವಶ್ಯಕತೆ ಕುರಿತು ಮಾತನಾಡಿದರು.

ಚನ್ನಪ್ಪ ಗೌಡರ, ಬಿ.ವಿ.ಮಾಲಗಿತ್ತಿ, ಸೊಲಬಣ್ಣವರ, ಎಂ.ಬಿ.ಕರಬಿಷ್ಠಿ, ಈಶಣ್ಣ ದೇಸಾಯಿ, ಸಿದ್ದಣ್ಣ ಪಟ್ಟಣಶೆಟ್ಟಿ, ಪರಶುರಾಮ ನವಲೆ, ಬಾಗಮಾರ, ಪವಾರ, ವಾರದ, ಕಲಕುಂಬಿ, ಅಂಗಡಿ, ತೋಟದ, ಚಿಗರಿ, ದೇಶಪಾಂಡೆ, ದೊಣ್ಣಿ, ಮಳ್ಳೂರ ಸೇರಿದಂತೆ ಎಲ್ಲ ವಾಯು ವಿಹಾರ ಬಳಗದ ಸದಸ್ಯರು ಪಾಲ್ಗೋಂಡಿದ್ದರು.

ಗಂಗಾ ಕುಲಕರ್ಣಿ, ಸಾವಂತ್ರವ್ವ ಪಿಳ್ಳಿ ವಿಜಯಾ ನವಲೆ ಪ್ರಾರ್ಥಿಸಿದರು. ಅನಂತಮೋಹನ ಭಟ್‌ ಸ್ವಾಗತಿಸಿದರು. ಸಿದ್ರಾಮಪ್ಪ ಉಮಚಗಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ