ನರಗುಂದ: ತಾಲೂಕಿನ ಭೈರನಹಟ್ಟಿಯಲ್ಲಿ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ ಕೋಶ ಕವಿವಿ ಧಾರವಾಡ ಇವುಗಳ ಆಶ್ರಯದಲ್ಲಿಮಹಾತ್ಮ ಗಾಂಧೀಜಿಯ 150ನೇ ಜನ್ಮದಿನ ನಿಮಿತ್ತ 'ಯುವ ಸಮಾವೇಶ' ಮತ್ತು '303ನೇ ಶಿವಾನುಭವ' ಆಯೋಜಿಸಲಾಗಿದೆ.
ಇದೆ ಸಂದರ್ಭದಲ್ಲಿಡಾ.ಪಾಟೀಲ ಪುಟ್ಟಪ್ಪ ಅವರ 101ನೆ ಹುಟ್ಟುಹಬ್ಬದ ನಿಮಿತ್ತ ಅವರ ಕುರಿತು ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಬರೆದ 'ಶಕಪುರುಷ' ಕೃತಿ ಬಿಡುಗಡೆ ಮತ್ತು ಕನ್ನಡೋತ್ಸವ-2019 ಜರುಗಲಿದೆ. ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು, ದೊರೆಸ್ವಾಮಿ ಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಅಧ್ಯಕ್ಷತೆ ವಹಿಸುವರು.
ಸಚಿವ ಸಿ.ಸಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಶಕ ಪುರುಷ ಕೃತಿ ಬಿಡುಗಡೆ ಮಾಡುವರು. ಎನ್ಎಸ್ಎಸ್ ಸಂಯೋಜಕ ಡಾ.ಮಹಾದೇವ ದಳಪತಿ ಅವರಿಂದ ವಿಶೇಷ ಉಪನ್ಯಾಸ, ಸಾಹಿತಿ ಸಿದ್ದು ಯಾಪಲಪರವಿ ಕೃತಿ ಕುರಿತು ಮಾತನಾಡಲಿದ್ದಾರೆ. ನಾನಾ ಕ್ಷೇತ್ರಗಳಲ್ಲಿಸಾಧನೆ ಮಾಡಿರುವ ಜಗದೀಶ ಗೊಂಡಬಾಳ, ಡಾ. ಮಂಗಳಾ ಇಟಗಿ, ಡಾ.ವೈದೃತಿ ಕೋರಿಶೆಟ್ಟರ, ಡಾ.ಅಭಿಷೇಕ ಚೆನ್ನಬಸಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಗುತ್ತದೆ.
ಮುಖ್ಯ ಅತಿಥಿಯಾಗಿ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ಬಿ.ಆರ್.ಯಾವಗಲ್, ಜಿಪಂ ಅಧ್ಯಕ್ಷ ಎಸ್.ಎಚ್.ಪಾಟೀಲ, ಜಿಪಂ ಸದಸ್ಯರಾದ ರಾಜುಗೌಡ ಕೆಂಚನಗೌಡ್ರ, ರೇಣುಕಾ ಅವರಾದಿ, ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಪ್ರಕಾಶಗೌಡ ತಿರುಕನಗೌಡ್ರ, ಎಸ್.ಪಿ.ಶಿರಿಯಪ್ಪಗೌಡ್ರ, ಶಂಕ್ರಪ್ಪ ಮುದ್ದನಗೌಡ್ರ, ವಿ.ಎಚ್.ಕೊಳ್ಳಿ, ಡಾ.ಪಿ.ಎಂ. ಹೊನಕೇರಿ, ಡಾ.ಸಂಗಮೇಶ ಕೊಳ್ಳಿಯವರ, ಬಸವರಾಜ ಮಂಗಳೂರ ಭಾಗವಹಿಸುವರು.
ಇದೆ ಸಂದರ್ಭದಲ್ಲಿಡಾ.ಪಾಟೀಲ ಪುಟ್ಟಪ್ಪ ಅವರ 101ನೆ ಹುಟ್ಟುಹಬ್ಬದ ನಿಮಿತ್ತ ಅವರ ಕುರಿತು ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಬರೆದ 'ಶಕಪುರುಷ' ಕೃತಿ ಬಿಡುಗಡೆ ಮತ್ತು ಕನ್ನಡೋತ್ಸವ-2019 ಜರುಗಲಿದೆ. ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು, ದೊರೆಸ್ವಾಮಿ ಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದು ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಅಧ್ಯಕ್ಷತೆ ವಹಿಸುವರು.
ಸಚಿವ ಸಿ.ಸಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಶಕ ಪುರುಷ ಕೃತಿ ಬಿಡುಗಡೆ ಮಾಡುವರು. ಎನ್ಎಸ್ಎಸ್ ಸಂಯೋಜಕ ಡಾ.ಮಹಾದೇವ ದಳಪತಿ ಅವರಿಂದ ವಿಶೇಷ ಉಪನ್ಯಾಸ, ಸಾಹಿತಿ ಸಿದ್ದು ಯಾಪಲಪರವಿ ಕೃತಿ ಕುರಿತು ಮಾತನಾಡಲಿದ್ದಾರೆ. ನಾನಾ ಕ್ಷೇತ್ರಗಳಲ್ಲಿಸಾಧನೆ ಮಾಡಿರುವ ಜಗದೀಶ ಗೊಂಡಬಾಳ, ಡಾ. ಮಂಗಳಾ ಇಟಗಿ, ಡಾ.ವೈದೃತಿ ಕೋರಿಶೆಟ್ಟರ, ಡಾ.ಅಭಿಷೇಕ ಚೆನ್ನಬಸಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಗುತ್ತದೆ.
ಮುಖ್ಯ ಅತಿಥಿಯಾಗಿ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ಬಿ.ಆರ್.ಯಾವಗಲ್, ಜಿಪಂ ಅಧ್ಯಕ್ಷ ಎಸ್.ಎಚ್.ಪಾಟೀಲ, ಜಿಪಂ ಸದಸ್ಯರಾದ ರಾಜುಗೌಡ ಕೆಂಚನಗೌಡ್ರ, ರೇಣುಕಾ ಅವರಾದಿ, ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಪ್ರಕಾಶಗೌಡ ತಿರುಕನಗೌಡ್ರ, ಎಸ್.ಪಿ.ಶಿರಿಯಪ್ಪಗೌಡ್ರ, ಶಂಕ್ರಪ್ಪ ಮುದ್ದನಗೌಡ್ರ, ವಿ.ಎಚ್.ಕೊಳ್ಳಿ, ಡಾ.ಪಿ.ಎಂ. ಹೊನಕೇರಿ, ಡಾ.ಸಂಗಮೇಶ ಕೊಳ್ಳಿಯವರ, ಬಸವರಾಜ ಮಂಗಳೂರ ಭಾಗವಹಿಸುವರು.