ಆ್ಯಪ್ನಗರ

ಸಂಚಾರಕ್ಕೆ ತೊಡಕಾಗಿದ್ದ ಮರಗಳ ತೆರವು

ಭೈರಾಪುರ-ಮಗ್ಗೆ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗಿ ಅಪಘಾತಗಳಿಗೆ ಕಾರಣವಾಗಿದ್ದ ಕಾಡು ಜಾತಿ ಮರಗಳನ್ನು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಹಕಾರದೊಂದಿಗೆ ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ.

ವಿಕ ಸುದ್ದಿಲೋಕ 28 Feb 2016, 5:58 am
ಆಲೂರು: ಭೈರಾಪುರ-ಮಗ್ಗೆ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗಿ ಅಪಘಾತಗಳಿಗೆ ಕಾರಣವಾಗಿದ್ದ ಕಾಡು ಜಾತಿ ಮರಗಳನ್ನು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಹಕಾರದೊಂದಿಗೆ ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ.
Vijaya Karnataka Web
ಸಂಚಾರಕ್ಕೆ ತೊಡಕಾಗಿದ್ದ ಮರಗಳ ತೆರವು


ಸದ್ಯಕ್ಕೆ ರಸ್ತೆಗೆ ಬಾಗಿಕೊಂಡಿರುವ, ತಿರುವು ರಸ್ತೆಯಲ್ಲಿ ನೋಟಕ್ಕೆ ತೊಡಕಾಗಿರುವ 10 ಮರಗಳನ್ನು ತೆರವು ಗೊಳಿಸಲಾಗುವುದು. ಇಂದಿನಿಂದಲೇ ಸಂಚಾರಕ್ಕೆ ತೊಡಕಾಗಿರುವ ಮರಗಳನ್ನು ಗುರುತಿಸಿ ನಂಬರ್ ಹಾಕಲಾಗುವುದು. ಇಲಾಖೆಯಿಂದ ಅನುಮತಿ ದೊರಕಿದ ನಂತರ ಗುರುತಿಸಿರುವ ಮರಗಳನ್ನು ತೆರವುಗೊಳಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಹೇಮಂತಕುಮಾರ್ ತಿಳಿಸಿದರು.

ಸ್ಥಳದಲ್ಲಿ ಪಿಐ ಮಂಜೇಗೌಡ ಸಿಬ್ಬಂದಿಯೊಂದಿಗೆ ಹಾಜರಿದ್ದು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ಮರಗಳ ಬುಡ ರಸ್ತೆಯಿಂದ ದೂರವಿದ್ದರೂ, ಮೇಲೇರಿವ ಮರದ ಕೊಂಬೆಗಳು ರಸ್ತೆಗೆ ಬಾಗಿ ಕೊಂಡಿರುವುದರಿಂದ ಬಾರಿ ವಾಹನಗಳ ಮೇಲ್ಭಾಗಕ್ಕೆ ತಾಗುತ್ತವೆ. ಒಂದು ವರ್ಷದ ಹಿಂದೆ ಲಾರಿಯ ಮೇಲ್ಭಾಗ ಮರದ ಕೊಂಬೆಗೆ ತಗಲುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಸರಣಿ ಅಪಘಾತವಾಗಿತ್ತು. ಚಾಲಕರು ವಾಹನಗಳನ್ನು ಚಾಲನೆ ಮಾಡುವ ಸಂದರ್ಭದಲ್ಲಿ ತೀವ್ರ ನಿಗಾವಹಿಸಿ ಚಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ನಿನ್ನೆ ಸಾರಿಗೆ ಬಸ್ಸೊಂದು ಮುಂದೆ ಬರುತ್ತಿದ್ದ ವಾಹನಕ್ಕೆ ದಾರಿ ಬಿಟ್ಟುಕೊಡುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಅಪಘಾತವಾದ ತಕ್ಷಣ ಸ್ಥಳೀಯ ಗ್ರಾಮಸ್ಥರು ಸಂಚಾರಕ್ಕೆ ತೊಡಕಾಗಿರುವ ಮರಗಳನ್ನು ತೆರವುಗೊಳಿಸಬೇಕು ಎಂದು ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಿದ್ದರು.

ಇದೇ ಮಾರ್ಗದಲ್ಲಿ ಕಾರಿಗನಹಳ್ಳಿ ಕೂಡಿಗೆ ಬಳಿ ಇರುವ ಬಹತ್ ಆಲದಮರವನ್ನು ತಕ್ಷಣ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ