ಹಾಸನ: ದುಷ್ಕರ್ಮಿಗಳು ಅಪರಿಚಿತ ಮಹಿಳೆಯನ್ನು ಹತ್ಯೆಮಾಡಿ ಶವವನ್ನು ಬಿಳಿಚೀಲದಲ್ಲಿ ತುಂಬಿ ತಾಲೂಕಿನ ಕೌಶಿಕ ಶೆಟ್ಟಿಹಳ್ಳಿ ಬಳಿಯ ಹೊರವಲಯದ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದಾರೆ.
ಕೆಂಪು ರೇಷ್ಮೆ ಸೀರೆ ಧರಿಸಿರುವ 30 ರಿಂದ 35 ವರ್ಷದ ಮಹಿಳೆ ಶವ ಸೋಮವಾರ ರಾತ್ರಿ ಪತ್ತೆಯಾಗಿದ್ದು, ಮುಖ ಕೊಳೆತ ಸ್ಥಿತಿಯಲ್ಲಿದೆ ಎಂದು ಗ್ರಾಮಾಂತರ ಠಾಣೆ ಎಸ್ಐ ಕೆ.ಎನ್.ಹರೀಶ್ ತಿಳಿಸಿದ್ದಾರೆ. ಶವವನ್ನು ನಗರದ ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಇರಿಸಿದ್ದು, ವಾರಸುದಾರರ ಇದ್ದಲ್ಲಿ ಪೊಲೀಸ್ ಕಂಟ್ರೋಲ್ ರೂಂ ಅಥವಾ ಗ್ರಾಮಾಂತರ ಠಾಣೆ ಪೊಲೀಸರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.