ಆ್ಯಪ್ನಗರ

ಶಿರಾಡಿ ಘಾಟ್ ತಿರುವಿನಲ್ಲಿ ಅಪಘಾತ: ಮೂವರ ಸಾವು

ದಿಬ್ಬಣಕ್ಕೆ ಹೊರಟ ಟೆಂಪೊ ಟ್ರಾವೆಲರ್‌ವೊಂದು ಗುರುವಾರ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಶಿರಾಡಿ ಘಾಟ್ ಟಬಲ್ ಟರ್ನ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟರು.

ವಿಕ ಸುದ್ದಿಲೋಕ 24 Mar 2017, 9:00 am
ಸಕಲೇಶಪುರ: ದಿಬ್ಬಣಕ್ಕೆ ಹೊರಟ ಟೆಂಪೊ ಟ್ರಾವೆಲರ್‌ವೊಂದು ಗುರುವಾರ ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಶಿರಾಡಿ ಘಾಟ್ ಟಬಲ್ ಟರ್ನ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟರು.
Vijaya Karnataka Web
ಶಿರಾಡಿ ಘಾಟ್ ತಿರುವಿನಲ್ಲಿ ಅಪಘಾತ: ಮೂವರ ಸಾವು


18 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತುಮಕೂರು ತಾಲೂಕು ಹೆಬ್ಬೂರು ಹೋಬಳಿ ಶಾಂತಪುರದ ಸೇನಮ್ಮ(55), ನಂಜಪ್ಪ(60) ಮತ್ತು ಬಾಗೇನಹಳ್ಳಿಯ ರಾಜಮ್ಮ(45) ಮತರು. ಟೆಂಪೋ ಟ್ರಾವೆಲರ್ಸ್‌ನಲ್ಲಿ ಒಟ್ಟು 21 ಮಂದಿ ತುಮಕೂರಿನಿಂದ ಧರ್ಮಸ್ಥಳಕ್ಕೆ ದಿಬ್ಬಣ ಹೊರಟಿದ್ದರು. ವಾಹನ ಶಿರಾಡಿಘಾಟ್ ಕೆಂಪುಹೊಳೆ ಸಮೀಪ ಡಬಲ್ ಟರ್ನ್ ಬಳಿ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಉರುಳಿ ಬಿದ್ದುಘಿ, ಮೂವರು ಸ್ಥಳದಲ್ಲಿಯೇ ಕೊನೆಯುಸಿರೆಳೆದರು.

ಉಳಿದಂತೆ ಶಾಂತಪುರ ಗ್ರಾಮದ ಸಿದ್ದಗಂಗಯ್ಯ, ನಿಂಗಯ್ಯ, ಗಂಗಮ್ಮ, ಹೊನ್ನಮ್ಮ, ಲಲಿತಾ, ಭೈರೇಗೌಡ, ಜಯಮ್ಮ, ಮೂರು ವರ್ಷದ ಶರತ್, ನಂದೀಪುರ ಗ್ರಾಮದ ಶಾರದಮ್ಮಘಿ, ಗೋವಿಂದರಾಜು ಅವರುಗಳನ್ನು ಪಟ್ಟಣದ ಕ್ರಾರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಚಾಲಕ ಸೇರಿದಂತೆ ಉಳಿದ 9 ಮಂದಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಪಟ್ಟಣದ ಆಸ್ಪತ್ರೆಯಲ್ಲಿ ಗಾಯಾಳುಗಳು ನೋವಿನಿಂದ ಚೀರಾಡುತ್ತಿದ್ದರು. ಮೂರು ವರ್ಷದ ಮಗು ಶರತ್‌ನ ಕೈ, ಕಾಲುಗಳಿಗೆ ಪೆಟ್ಟು ಬಿದ್ದಿದ್ದು, ಆತನ ತಂದೆ-ತಾಯಿ ಚೀರಾಟ ಮನ ಕಲಕುವಂತಿತ್ತು. ಮತ ದೇಹಗಳನು ಕ್ರಾರ್ಡ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ