ಆ್ಯಪ್ನಗರ

ನಾಯಿಗೆ ವಾಹನ ಡಿಕ್ಕಿ ವಿವಾದ ಕೊಲೆಯಲ್ಲಿಅಂತ್ಯ

ಆಲೂರು ತಾಲೂಕಿನ ಕಸಬಾ ಹೋಬಳಿಯಲ್ಲಿ ಸಾಕು ನಾಯಿಗೆ ಗೂಡ್ಸ್‌ ವಾಹನ ಡಿಕ್ಕಿ ಹೊಡೆದ ಪ್ರಕರಣ ಒಬ್ಬನ ಹತ್ಯೆಯೊಂದಿಗೆ ಅಂತ್ಯವಾಗಿದ್ದಲ್ಲದೆ, ಕೊಲೆ ಆರೋಪಿಯ ಮನೆಗೆ ಬೆಂಕಿ ಹಚ್ಚಿ ಸುಡಲಾಗಿದೆ. ​​ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

Vijaya Karnataka 17 Nov 2019, 9:50 pm
ಹಾಸನ: ಆಲೂರು ತಾಲೂಕಿನ ಕಸಬಾ ಹೋಬಳಿಯಲ್ಲಿ ಸಾಕು ನಾಯಿಗೆ ಗೂಡ್ಸ್‌ ವಾಹನ ಡಿಕ್ಕಿ ಹೊಡೆದ ಪ್ರಕರಣ ಒಬ್ಬನ ಹತ್ಯೆಯೊಂದಿಗೆ ಅಂತ್ಯವಾಗಿದ್ದಲ್ಲದೆ, ಕೊಲೆ ಆರೋಪಿಯ ಮನೆಗೆ ಬೆಂಕಿ ಹಚ್ಚಿ ಸುಡಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
Vijaya Karnataka Web
ನಾಯಿಗೆ ವಾಹನ ಡಿಕ್ಕಿ ವಿವಾದ ಕೊಲೆಯಲ್ಲಿಅಂತ್ಯ


ನಾಯಿಗೆ ವಾಹನ ಡಿಕ್ಕಿ ಹೊಡೆದ ವಿಚಾರವಾಗಿ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಆಲೂರು ತಾಲೂಕು ಕಸಬಾ ಹೋಬಳಿ ಬಸವೇಶಪುರ ಬ್ಯಾಬ ಕಾವಲು ಗ್ರಾಮದ ನಿವಾಸಿ ರಾಮು (40)ಮೃತರು.

ರಾಮು ಶುಕ್ರವಾರ ಸಂಜೆ 6.30ಕ್ಕೆ ಬಸವೇಶಪುರ ಬ್ಯಾಬ ಕಾವಲು ಗ್ರಾಮದ ನಿವಾಸಿ ಅಣ್ಣಪ್ಪ ನೊಂದಿಗೆ ಜಮೀನಿಗೆ ಕಡೆಗೆ ಬೈಕ್‌ನಲ್ಲಿಹೊರಟಿದ್ದರು. ಆದರೆ, ಹಾಂಜಿಹಳ್ಳಿ ಗ್ರಾಮದ ಕಾಂತರಾಜು ಎಂಬುವವರ ಮನೆ ಮುಂಭಾಗದ ಮಂಚೇನಹಳ್ಳಿ ಗ್ರಾಮಕ್ಕೆ ಹೋಗುವ ಅಜ್ಜಪ್ಪಸ್ವಾಮಿ ದೇವಸ್ಥಾನದ ರಸ್ತೆಯಲ್ಲಿಹೋಗುತ್ತಿದ್ದಾಗ ಧರ್ಮಪುರಿ ಗ್ರಾಮದ ಗಂಗಾಧರ ಮತ್ತು ಹಾಂಜಿಹಳ್ಳಿ ಗ್ರಾಮದ ಮಹೇಶ, ನಾಗೇಶ, ಮಲ್ಲೇಶ ಹಾಗೂ ಇತರರು ಬೆಳಗ್ಗೆ ನಾಯಿಗೆ ಡಿಕ್ಕಿ ಹೊಡೆದ ವಿಚಾರವಾಗಿ ಜಗಳವಾಡುತ್ತಿದ್ದರು. ಈ ವೇಳೆ ರಾಮು ತನ್ನ ಬೈಕ್‌ ನಿಲ್ಲಿಸಿ, ಏಕೆ ಜಗಳ ಮಾಡಿಕೊಳ್ಳುತ್ತಿದ್ದೀರಿ ಎಂದು ಬಿಡಿಸಲು ಹೋಗಿದ್ದರು. ಈ ವೇಳೆ ನಾಗೇಶ್‌, ಗಂಗಾಧರ ಅವರ ಕುತ್ತಿಗೆಯ ಭಾಗಕ್ಕೆ ಕಡಿಯಲು ಹೋದಾಗ ಅವರು ತಪ್ಪಿಸಿಕೊಂಡರು.

ಅದು ಆಕಸ್ಮಿಕವಾಗಿ ರಾಮು ಅವರ ಕತ್ತಿಗೆ ತಗುಲಿ ಮೃತಪಟ್ಟರು ಎಂದು ರಾಮು ಜತೆಗಿದ್ದ ಅಣ್ಣಪ್ಪ ಘಟನೆ ವಿವರಿಸಿದ್ದಾರೆ. ಈ ಸಂಬಂಧ ಮೃತರ ಪತ್ನಿ ಮಂಜುಳಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಮನೆಗೆ ಬೆಂಕಿ: ಘಟನೆ ಹಿನ್ನೆಲೆಯಲ್ಲಿಆಕ್ರೋಶಗೊಂಡ ಜನರು ಅಜ್ಜಪ್ಪಸ್ವಾಮಿ ದೇವಸ್ಥಾನದ ಹತ್ತಿರದ ರಸ್ತೆಯಲ್ಲಿರುವ ಆರೋಪಿ ಮಹೇಶ್‌ ಮನೆಗೆ ಸುಮಾರು 25 ರಿಂದ 30 ಮಂದಿ ನುಗ್ಗಿ ಕಲ್ಲುತೂರಾಟ ನಡೆಸಿದಲ್ಲದೆ, ಮನೆಗೆ ಬೆಂಕಿ ಹಚ್ಚಿದರು. ಸ್ಥಳದಲ್ಲೇ ಇದ್ದ ಒಂದು ಕಾರು ಮತ್ತು ಒಂದು ಬೈಕಿಗೆ ಬೆಂಕಿ ಹಚ್ಚಿ ಪರಾರಿಯಾದರು.

ಜನರ ಗುಂಪು ನೋಡಿ ಆಲೂರು ಠಾಣೆ ಪೊಲೀಸರು ಸ್ಧಳದಲ್ಲಿಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಪೊಲೀಸರನ್ನು ತಡೆದ ಗುಂಪು ಮನೆಗೆ ಬೆಂಕಿ ಹಚ್ಚಿದೆ. ಈ ಘಟನೆ ಸಂಬಂಧ ಆಲೂರು ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ನಿವಾಸ್‌ ಸೆಪಟ್‌, ಡಿವೈಎಸ್‌ಪಿ ಸಕಲೇಶಪುರ ಉಪ-ವಿಭಾಗದ ಎಂ.ಎನ್‌ ಶಶಿಧರ್‌, ಆಲೂರು ಠಾಣೆ ಪಿಎಸ್‌ಐ ರೇವಣ್ಣ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ