ಆ್ಯಪ್ನಗರ

ರಣಘಟ್ಟ ಒಡ್ಡು ಕಾಮಗಾರಿಗೆ 100 ಕೋಟಿ ಅನುದಾನ

ಬೇಲೂರು: ಬೇಲೂರು, ಹಳೇಬೀಡು ಪ್ರವಾಸಿ ಸ್ಥಳವನ್ನು ವಿಶೇಷವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಹಾಗೂ ಸಂಸದರಾದ ಎಚ್‌.ಡಿ.ದೇವೇಗೌಡರ ಕುಟುಂಬ ಉತ್ಸುಕತೆ ಹೊಂದಿದೆ ಎಂದು ರಾಜ್ಯ ಜೆಡಿಎಸ್‌ ಪ್ರಧಾನ ಕಾರ‍್ಯದರ್ಶಿ .ಪ್ರಜ್ವಲ್‌ರೇವಣ್ಣ ಹೇಳಿದರು.

Vijaya Karnataka 10 Feb 2019, 5:00 am
ಬೇಲೂರು: ಬೇಲೂರು, ಹಳೇಬೀಡು ಪ್ರವಾಸಿ ಸ್ಥಳವನ್ನು ವಿಶೇಷವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಹಾಗೂ ಸಂಸದರಾದ ಎಚ್‌.ಡಿ.ದೇವೇಗೌಡರ ಕುಟುಂಬ ಉತ್ಸುಕತೆ ಹೊಂದಿದೆ ಎಂದು ರಾಜ್ಯ ಜೆಡಿಎಸ್‌ ಪ್ರಧಾನ ಕಾರ‍್ಯದರ್ಶಿ .ಪ್ರಜ್ವಲ್‌ರೇವಣ್ಣ ಹೇಳಿದರು.
Vijaya Karnataka Web 100 core rupies sanction lift irrigation
ರಣಘಟ್ಟ ಒಡ್ಡು ಕಾಮಗಾರಿಗೆ 100 ಕೋಟಿ ಅನುದಾನ


100 ಕೋಟಿ ರೂ.ವೆಚ್ಚದಲ್ಲಿ ಯಗಚಿ ನದಿಯ ರಣಘಟ್ಟ ಪಿಕಪ್‌ನಿಂದ ನೀರು ಪಡೆದು ಬೇಲೂರು ಹೋಬಳಿಯ ದ್ವಾರಸಮುದ್ರ, ಕರಿಕಟ್ಟೆಹಳ್ಳ ಸೇರಿದಂತೆ ಇತರೆ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಸರಕಾರ ಬಜೆಟ್‌ನಲ್ಲಿ ಅನುದಾನ ಘೋಷಿಸಿರುವುದಕ್ಕೆ ಹಳೇಬೀಡಿನಲ್ಲಿ ಸ್ಥಳೀಯರೊಂದಿಗೆ ಸಂಭ್ರಮ ಆಚರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಣಘಟ್ಟ ಒಡ್ಡು ಕಾಮಗಾರಿಗಾಗಿ ಇಲ್ಲಿನ ರೈತರು, ಗ್ರಾಮಸ್ಥರು, ಪುಷ್ಪಗಿರಿ ಮಠದ ಸ್ವಾಮೀಜಿ, ಶಾಸಕ ಕೆ.ಎಸ್‌.ಲಿಂಗೇಶ್‌ ಹೆಚ್ಚಿನ ಶ್ರಮ ವಹಿಸಿದ್ದಾರೆ. ಸ್ಥಳೀಯವಾಗಿ ನೀರಾವರಿಗೆ ದೇವೇಗೌಡರ ಕುಟುಂಬ ಹೆಚ್ಚಿನ ಆಸಕ್ತಿ ವಹಿಸಿದೆ. ಇನ್ನು 6 ತಿಂಗಳಲ್ಲಿ ತಾಲೂಕಿನ ಅಭಿವೃದ್ಧಿಗೆ ಇನ್ನಷ್ಟು ಗಮನ ಹರಿಸಲಾಗುವುದು. ಪುಷ್ಪಗಿರಿ ಕ್ಷೇತ್ರಕ್ಕೆ 2 ಕೋಟಿ ರೂ. ನೀಡುವ ಉದ್ದೇಶವಿದೆ ಎಂದು ಹೇಳಿದರು.

ನೀರಾವರಿಗೆ 100 ಕೋಟಿ ರೂ. ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಅದಕ್ಕಾಗಿ ಶ್ರಮಿಸಿದ ಹೆಚ್‌.ಡಿ.ರೇವಣ್ಣ, ಸಂಸದರಾದ ಎಚ್‌.ಡಿ.ದೇವೇಗೌಡರ ಪರಿಶ್ರಮ ಮಹತ್ವದ್ದಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬೀಳುವ ಪ್ರಶ್ನೆಯೆ ಇಲ್ಲ. ಬಾಯಿ ಮಾತಿನ ಹೇಳಿಕೆಯಿಂದ ಕೆಲಸ ಆಗುವುದಿಲ್ಲ. ಅದು ಕಾರ‍್ಯಗತವಾಗಬೇಕು. ಅದನ್ನು ಎಚ್‌.ಡಿ.ಕುಮಾರಸ್ವಾಮಿ ಮಾಡಿ ತೋರಿಸಿದ್ದಾರೆ. ಬರದ ಬವಣೆಯಿಂದ ಈ ಭಾಗದ ಜನತೆ ದೂರವಾಗಲಿದ್ದಾರೆ ಎಂದು ಹೇಳಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮಾತನಾಡಿ, ಹಳೇಬೀಡು ಭಾಗಕ್ಕೆ ನೀರು ಕೊಡುವ ವಿಚಾರದಲ್ಲಿ ಎಚ್‌.ಡಿ.ದೇವೇಗೌಡರ ಕುಟುಂಬದ ಮೇಲೆ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದ ಆರೋಪಗಳು ಸತಕ್ಕೆ ದೂರವಾದದು ಎಂಬುದು ಇದೀಗ ಸಾಬೀತಾಗಿದೆ. ಬೇಲೂರು ಪ್ರವಾಸಿ ಕೇಂದ್ರ ಅಭಿವೃದ್ಧಿಯಲ್ಲಿ ದಾಪುಗಾಲು ಇಡುತ್ತಿದೆ ಎಂದರು.

ತಾಪಂ ಅಧ್ಯಕ್ಷ ರಂಗೇಗೌಡ ಮಾತನಾಡಿ, 100 ಕೋಟಿ ರೂ. ಬಿಡುಗಡೆ ವಿಚಾರದಲ್ಲಿ ಕೆ.ಎಸ್‌.ಲಿಂಗೇಶ್‌, ಎಚ್‌.ಡಿ.ರೇವಣ್ಣ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪಾತ್ರ ಹೆಚ್ಚಾಗಿದೆ ಎಂದರು. ಕೋಳಗುಂದದ ಸ್ವಾಮೀಜಿ, ಪ್ರಮುಖರಾದ ಸಂಗಮ್‌, ಲತಾ ದಿಲೀಪ್‌ ಕುಮಾರ್‌, ಸೋಮಶೇಖರ್‌ ಮಾತನಾಡಿದರು. ಪಟಾಕಿ ಸಿಡಿಸಿ ಸ್ಥಳೀಯರು ಸಂಭ್ರಮ ಆಚರಿಸಿದರು. ರೈತ ನಾಯಕರಾದ ಗಡಿಮಲ್ಲಿಕಣ್ಣ, ಹಾಲಪ್ಪ, ಪರಮೇಶ್‌, ಹುಲಿಗೌಡ, ಶಿವಣ್ಣ, ಹರೀಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ