ಆ್ಯಪ್ನಗರ

ಜಿಲ್ಲೆಯ 1,985 ಮತಗಟ್ಟೆಗಳಲ್ಲಿ 13 ನಕ್ಸಲ್‌ ಪೀಡಿತ

ಲೋಕಸಭೆ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತದಾನ ನಡೆಯುವ 1,985 ಮತಗಟ್ಟೆಗಳಲ್ಲಿ 408 ಸೂಕ್ಷ್ಮ, 1,562 ನಾನ್‌ ಕ್ರಿಟಿಕಲ್‌ ಮತಗಟ್ಟೆ ಹಾಗೂ 13 ನಕ್ಸಲ್‌ ಪೀಡಿತ ಪ್ರದೇಶ ಎಂದು ಪೊಲೀಸ್‌ ಇಲಾಖೆ ಗುರುತಿಸಿದೆ.

Vijaya Karnataka 13 Mar 2019, 5:00 am
ಹಾಸನ: ಲೋಕಸಭೆ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮತದಾನ ನಡೆಯುವ 1,985 ಮತಗಟ್ಟೆಗಳಲ್ಲಿ 408 ಸೂಕ್ಷ್ಮ, 1,562 ನಾನ್‌ ಕ್ರಿಟಿಕಲ್‌ ಮತಗಟ್ಟೆ ಹಾಗೂ 13 ನಕ್ಸಲ್‌ ಪೀಡಿತ ಪ್ರದೇಶ ಎಂದು ಪೊಲೀಸ್‌ ಇಲಾಖೆ ಗುರುತಿಸಿದೆ.
Vijaya Karnataka Web 13 electoral booth naxal affected out of 1985
ಜಿಲ್ಲೆಯ 1,985 ಮತಗಟ್ಟೆಗಳಲ್ಲಿ 13 ನಕ್ಸಲ್‌ ಪೀಡಿತ


ಸಕಲೇಶಪುರ ವಿಧಾನಸಭೆ ಕ್ಷೇತ್ರದಲ್ಲಿ 13 ನಕ್ಸಲ್‌ ಪೀಡಿತ ಪ್ರದೇಶ ಎಂದು ಗುರುತಿಸಿದ್ದು, ಮತದಾರರು ನಿರ್ಭೀತಿಯಿಂದ ಮತ ಚಲಾವಣೆ ಮಾಡಲು ಅರೆಸೇನಾ ಪಡೆಯನ್ನು ನಿಯೋಜಿಸಲಾಗುತ್ತಿದೆ. 408 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಮುಖ್ಯಪೇದೆ ಹಾಗೂ ಸಿಬ್ಬಂದಿ ಆಧಾರದ ಮೇಲೆ ಒಬ್ಬರು ಗೃಹರಕ್ಷಕ ದಳದ ಸಿಬ್ಬಂದಿ, 1,562 ನಾನ್‌ ಕ್ರಿಟಿಕಲ್‌ ಬೂತ್‌ಗೆ ಪೊಲೀಸ್‌ಪೇದೆ ನಿಯೋಜಿಸಲಾಗುವುದು ಎಂದು ಎಸ್‌ಪಿ ಡಾ.ಪ್ರಕಾಶ್‌ಗೌಡ ತಿಳಿಸಿದ್ದಾರೆ.

ಅರೆಸೇನಾ ಪಡೆ

ಕೇಂದ್ರ ಚುನಾವಣಾ ಆಯೋಗ ಜಿಲ್ಲೆಗೆ ಅರೆಸೇನಾಪಡೆ ನಿಯೋಜಿಸಲಿದ್ದು, ಅವರು ಬರುವ ಸಂಖ್ಯೆ ಆಧರಿಸಿ ಅತಿಸೂಕ್ಷ್ಮ ಮತಗಟ್ಟೆಗಳಿಗೆ ನಿಯೋಜಿಸಲಾಗುವುದು. ಚುನಾವಣೆ ವೇಳೆ ಭಯ ಸೃಷ್ಟಿಸಬಹುದು ಎಂಬ 50 ಜನರನ್ನು ಗುರುತಿಸಿ ಅವರ ವಿರುದ್ಧ ಈಗಾಗಲೇ ಸಿಆರ್‌ಪಿಸಿ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 1,737 ರೌಡಿಗಳು, 323 ಗೂಂಡಾಗಳ ವಿರುದ್ಧ ಸಿಆರ್ಪಿಸಿ ಕಾಯಿದೆಯಡಿ ಪ್ರಕರಣ ದಾಖಲು ಮಾಡಿ ಚುನಾವಣೆ ವೇಳೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ.

ಕಡ್ಡಾಯ ಗ್ರಾಮಸಭೆ

ಜಿಲ್ಲೆಯ ಎಲ್ಲಾ ಪೊಲೀಸ್‌ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಮಗಳಿಗೆ ಭೇಟಿನೀಡಿ ಗ್ರಾಮಸಭೆ ಮಾಡಿ, ಶಾಂತಿಯುತ ಮತದಾನ ಮಾಡುವ ಬಗ್ಗೆ ಸೂಕ್ತ ತಿಳುವಳಿಕೆ ನೀಡಲಾಗುತ್ತಿದ್ದು, ರಾಜಕೀಯ ವೈಷಮ್ಯಕ್ಕೆ ಒಳಗಾಗಿ ಅಶಾಂತಿ ಉಂಟುಮಾಡಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಗಡಿಪಾರುಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದರು.

ಚುನಾವಣಾ ಬಂದೋಬಸ್ತ್‌ಗಾಗಿ ಒಬ್ಬರು ಎಸ್‌ಪಿ, ಎಎಸ್‌ಪಿ, ಎಂಟು ಡಿಎಸ್‌ಪಿ,21 ಸಿಪಿಐ,54 ಪಿಎಸ್‌ಐ,182 ಎಎಸ್‌ಐ, 548 ಮುಖ್ಯಪೇದೆ, 732 ಪೇದೆ, 1,560 ಅವಶ್ಯವಿದ್ದು, ಹೊರ ಜಿಲ್ಲೆಯಿಂದ ನಾಲ್ಕು ಜನ ಡಿಎಸ್‌ಪಿ, ಒಂಬತ್ತು ಸಿಪಿಐ, 23 ಪಿಎಸ್‌ಐ, 43 ಎಎಸ್‌ಐ, 211 ಎಚ್‌ಸಿ, 165 ಪೇದೆಗಳನ್ನು ಕರೆಸುವ ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ 16,574 ಮೋಟಾರು ವಾಹನ ಕಾಯ್ದೆ ಪ್ರಕರಣ ದಾಖಲು ಮಾಡಿ, 17.95 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಜಿಲ್ಲಾದ್ಯಂತ 20 ಚೆಕ್‌ಪೋಸ್ಟ್‌ ತೆರೆದಿದ್ದು, ಸೆಕ್ಟರ್‌ ಅಧಿಕಾರಿಗಳೊಂದಿಗೆ , ಪ್ರತಿನಿತ್ಯ ಮೂರು ಪಾಳಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಿ,ವಾಹನ ತಪಾಸಣೆ ನಡೆಸಲಿದ್ದಾರೆ ಎಂದು ಎಸ್‌ಪಿ ಡಾ.ಎ.ಎನ್‌.ಪ್ರಕಾಶ್‌ಗೌಡ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ