ಆ್ಯಪ್ನಗರ

ವಿಷಪೂರಿತ ಆಹಾರ ಸೇವಿಸಿ 40 ಮಂದಿ ಅಸ್ವಸ್ಥ

ವಿಷಪೂರಿತ ಆಹಾರ ಸೇವಿಸಿ 40ಕ್ಕೂ ಹೆಚ್ಚು ಮಂದಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಮತ್ತೆ ಕೆಲವು ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Vijaya Karnataka Web 30 Nov 2019, 12:48 am
ಬೇಲೂರು: ವಿಷಪೂರಿತ ಆಹಾರ ಸೇವಿಸಿ 40ಕ್ಕೂ ಹೆಚ್ಚು ಮಂದಿ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಮತ್ತೆ ಕೆಲವು ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Vijaya Karnataka Web HSN 29BLRP-7 (C)_16
ಬೇಲೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು.


ಪಟ್ಟಣದ ಚನ್ನೇಗೌಡರ ಬೀದಿಯಲ್ಲಿರುವ ಕೆ.ಜಿ.ಪ್ರಮೋದಾ ಅವರ ಮನೆಯ ಗೃಹ ಪ್ರವೇಶಕ್ಕೆ ಆಗಮಿಸಿದ್ದ ಅತಿಥಿಗಳು ಮಧ್ಯಾಹ್ನ ಊಟ ಸೇವಿಸಿದ ಕೆಲವು ಗಂಟೆಗಳಲ್ಲೇ ಬಹುತೇಕರಿಗೆ ಹೊಟ್ಟೆನೋವಿನೊಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಕೆಲವರಿಗೆ 5ರಿಂದ 15 ಬಾರಿ ವಾಂತಿಯಾಗಿದೆ. ಸಂಜೆ 5 ಗಂಟೆ ನಂತರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಧಾವಿಸಿದ ರೋಗಿಗಳು ರಾತ್ರಿ 8 ಗಂಟೆಯಾದರೂ ಬರುತ್ತಿದ್ದ ದೃಶ್ಯ ಕಂಡುಬಂತು.

ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಾಧಿಕಾರಿ ಡಾ.ಪ್ರಮೋದ್ ಹಾಗೂ ನರಸೇಗೌಡ, ‘‘ಸಂಜೆ 5 ಗಂಟೆಯಿಂದ ವಾಂತಿ, ಭೇದಿ, ಹೊಟ್ಟೆನೋವು ಎಂದು ಸುಮಾರು 40ಕ್ಕೂ ಹೆಚ್ಚು ಮಂದಿ ದಾಖಲಾಗಿದ್ದಾರೆ. ಊಟವಾದ ಮೇಲೆ ಈ ರೀತಿ ಆಗಿದೆ ಎಂದು ಗೊತ್ತಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು ಗುಣ ಮುಖರಾಗುತ್ತಿದ್ದಾರೆ,’’ ಎಂದರು.

ಆಹಾರ ನಿರೀಕ್ಷಕ ನವೀನ್‌ಕುಮಾರ್ ಮಾತನಾಡಿ, ‘‘ವಿಷಯ ತಿಳಿದು ಗೃಹಪ್ರವೇಶ ಮನೆ ಬಳಿಗೆ ವೈದ್ಯಾಧಿಕಾರಿ ನರಸೇಗೌಡ ಅವರೊಂದಿಗೆ ತೆರಳಿ ಆಹಾರವನ್ನು ಪರೀಕ್ಷೆಗೆ ತರಲಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಾಗು ವುದು,’’ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ