ಆ್ಯಪ್ನಗರ

ಕಾರ್ಯಕರ್ತರ ಆಶೋತ್ತರಕ್ಕೆ ಸ್ಪಂದಿಸದ ಕೈ: ಎ.ಮಂಜು

''ಸಚಿವನಾಗಿ ಅಧಿಕಾರ ಕೊಟ್ಟ ಕಾಂಗ್ರೆಸ್‌ ಪಕ್ಷ ವನ್ನು ಎಲ್ಲರೂ ತಿಳಿದಿರುವಂತೆ ನಾನು ಬಿಡಲಿಲ್ಲ. ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರೋದು ಇದ್ಯಲ್ಲ. ಅದು ಅನೈತಿಕವಾದದ್ದು, ಮೇಲ್ಮಟ್ಟದವರಿಗೆ ಅನುಕೂಲವಾಗಿದೆಯಷ್ಟೆ. ಪಕ್ಷ ಕ್ಕೆ ದುಡಿದ ಬೇರುಮಟ್ಟದ ಕಾರ್ಯಕರ್ತರ ಆಶೋತ್ತರಕ್ಕೆ ಮೈತ್ರಿ ಮಾಡಿಕೊಂಡ ನಾಯಕರು ಎಳ್ಳಷ್ಟೂ ಸ್ಪಂದಿಸಲಿಲ್ಲ. ಇದರಿಂದ 6 ತಿಂಗಳು ಕಾದರೂ ಬದಲಾವಣೆ ಕಾಣದಿದ್ದರಿಂದ ಪಕ್ಷಾಂತರ ಅನಿವಾರ‍್ಯವಾಯಿತು'' ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಎ.ಮಂಜು ಹೇಳಿದರು.

Vijaya Karnataka 23 Mar 2019, 5:00 am
ಹೊಳೆನರಸೀಪುರ: ''ಸಚಿವನಾಗಿ ಅಧಿಕಾರ ಕೊಟ್ಟ ಕಾಂಗ್ರೆಸ್‌ ಪಕ್ಷ ವನ್ನು ಎಲ್ಲರೂ ತಿಳಿದಿರುವಂತೆ ನಾನು ಬಿಡಲಿಲ್ಲ. ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರೋದು ಇದ್ಯಲ್ಲ. ಅದು ಅನೈತಿಕವಾದದ್ದು, ಮೇಲ್ಮಟ್ಟದವರಿಗೆ ಅನುಕೂಲವಾಗಿದೆಯಷ್ಟೆ. ಪಕ್ಷ ಕ್ಕೆ ದುಡಿದ ಬೇರುಮಟ್ಟದ ಕಾರ್ಯಕರ್ತರ ಆಶೋತ್ತರಕ್ಕೆ ಮೈತ್ರಿ ಮಾಡಿಕೊಂಡ ನಾಯಕರು ಎಳ್ಳಷ್ಟೂ ಸ್ಪಂದಿಸಲಿಲ್ಲ. ಇದರಿಂದ 6 ತಿಂಗಳು ಕಾದರೂ ಬದಲಾವಣೆ ಕಾಣದಿದ್ದರಿಂದ ಪಕ್ಷಾಂತರ ಅನಿವಾರ‍್ಯವಾಯಿತು'' ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಎ.ಮಂಜು ಹೇಳಿದರು.
Vijaya Karnataka Web a hand that does not respond to the wishes of activists a manju
ಕಾರ್ಯಕರ್ತರ ಆಶೋತ್ತರಕ್ಕೆ ಸ್ಪಂದಿಸದ ಕೈ: ಎ.ಮಂಜು


ಪಟ್ಟಣದ ಬಸವಭವನದಲ್ಲಿ ಬೆಂಬಲಿಗರು ಮತ್ತು ಪಕ್ಷ ದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿ, ''ಮಂಡ್ಯ ಅಥವಾ ಹಾಸನ ಒಂದನ್ನಾದರೂ ಕಾಂಗ್ರೆಸ್‌ಗೆ ಬಿಟ್ಟು ಕೊಡಿ ಎಂದಿದ್ದೆ. ಅದನ್ನೂ ಕೇಳಲಿಲ್ಲ. ಕಾಂಗ್ರೆಸ್ಸಿಗರ ಮತ ನಮಗೆ ಬೇಡ ಎನ್ನುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ನಾನು ಚುನಾವಣೆಗೆ ಸ್ಪರ್ಧಿಸುವೆ ಎಂದಾದ ಮೇಲೆ ಕಾಂಗ್ರೆಸ್‌ನವರ ಬಳಿ ಮತಯಾಚನೆ ಮಾಡುತ್ತಿದ್ದಾರೆ'' ಎಂದರು.

''ರಾಷ್ಟ್ರ ಕಟ್ಟುವ ಒಬ್ಬ ಉತ್ತಮ ಪ್ರಧಾನಿಗೆ ಬೆಂಬಲ ಸೂಚಿಸಿ. ಕುಟುಂಬ ರಾಜಕಾರಣವನ್ನು ಆರ್ಥಿಕವಾಗಿ ಇನ್ನಷ್ಟು ಭದ್ರಗೊಳಿಸಲು ಮತ ಹಾಕದಿರಿ. ಕಳಪೆ ಕಾಮಗಾರಿ, ಇದ್ದ ಕಟ್ಟಡ ಒಡೆದು ಮತ್ತೆ ಕಟ್ಟಿ ಬಿಲ್‌ ಮಾಡಿಕೊಳ್ಳುವ ಹಾಸನ ಜಿಲ್ಲೆಯ ರಾಜಕಾರಣ ಬದಲಾಯಿಸಿ. ರಾಷ್ಟ್ರದಲ್ಲಿ ಕನಿಷ್ಠ 305 ಸ್ಥಾನ ಗೆಲ್ಲುವುದಾಗಿ ಬಿಜೆಪಿ ಪಕ್ಷ ದ ನಿರೀಕ್ಷೆ ಇದೆ. ಇದರಲ್ಲಿ ಹಾಸನ ಕ್ಷೇತ್ರವೂ ಒಂದಾಗಿರುತ್ತದೆ'' ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರೇಣುಕುಮಾರ್‌ ಮಾತನಾಡಿ, ''ಪ್ರಧಾನಿ ಮೋದಿಯವರ ಕಾರ್ಯಕ್ರಮ ಜನಪ್ರಿಯವಾಗಿದ್ದು, ರಾಷ್ಟ್ರದ ಹಿತ ಕಾಯುವ ಮೋದಿಗೆ ಬೆಂಬಲಿಸಿ'' ಎಂದು ಕೋರಿದರು.

ನಮ್ಮ ರಕ್ಷ ಣೆ ಜವಾಬ್ದಾರಿ ಯಾರು? ನಿಮ್ಮ ಬೆಂಬಲಕ್ಕಿಳಿದವರ ವಿರುದ್ಧ ಜೆಡಿಎಸ್‌ ದಬ್ಬಾಳಿಕೆ ಅಸಹನೀಯ ಎಂಬ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಿದ ಎ.ಮಂಜು ನಿಮ್ಮ ವಿರುದ್ಧ ಸುಳ್ಳು ಮೊಕದ್ದಮೆ, ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ, ಚಿಂತೆ ಬಿಡಿ ಎಂದು ಆತ್ಮಸ್ಥೈರ್ಯ ತುಂಬಿದರು.

ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜ್‌, ಮಾಜಿ ಅಧ್ಯಕ್ಷ ರವಿಕಮ್ಮರಗಿ, ಮುಖಂಡರಾದ ಮೋಹನ್‌, ಬಸವರಾಜ್‌ ಹಾಗೂ ಎಸ್ಸಿ ಮೋರ್ಚಾ ಅಧ್ಯಕ್ಷ ದಿವಾಕರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ