ಆ್ಯಪ್ನಗರ

ಜೇನುದಾಳಿಯಿಂದ ಪಾರಾಗಲು ಯತ್ನಿಸಿದ ವ್ಯಕ್ತಿಗೆ ಹೃದಯಾಘಾತ

ಜಮೀನು ಬಳಿ ಜೇನುದಾಳಿಯಿಂದ ಪಾರಾಗಲು ಯತ್ನಿಸಿದ ವ್ಯಕ್ತಿಯೊಬ್ಬರು ಹೃದ ಯಾಘಾತದಿಂದ ಮೃತ ಪಟ್ಟ ಘಟನೆ ತಾಲೂಕಿನ ಗೌಡಗೆರೆ ಬಳಿ ಸೋಮವಾರ ನಡೆದಿದೆ.

Vijaya Karnataka 12 Nov 2019, 5:00 am
ಹಾಸನ: ಜಮೀನು ಬಳಿ ಜೇನುದಾಳಿಯಿಂದ ಪಾರಾಗಲು ಯತ್ನಿಸಿದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಗೌಡಗೆರೆ ಬಳಿ ಸೋಮವಾರ ನಡೆದಿದೆ.
Vijaya Karnataka Web IMG-20191111-WA0045105332
ಹೃದಯಾಘಾತದಿಂದ ಮೃತಪಟ್ಟ ಜಗದೀಶ್.


ನಗರದ ಜಗದೀಶ್‌ (50) ಮೃತರು. ಪತ್ನಿ ಭಾರತಿಯೊಂದಿಗೆ ಬೆಳಗ್ಗೆ ಜಮೀನಿಗೆ ತೆರಳಿದ್ದ ವೇಳೆ ಜೇನು ದಾಳಿ ನಡೆಸಿದೆ. ಜೇನುದಾಳಿಯಿಂದ ಪಾರಾಗಲು ಜಗದೀಶ್‌ ಓಡುತ್ತಿದ್ದ ವೇಳೆ ತೀವ್ರ ಹೃದಯಾ ಘಾತವಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಭಾರತಿ ಅವರು ಜೇನುದಾಳಿಯಿಂದ ಅಸ್ವಸ್ಥಗೊಂಡಿ ದ್ದಾರೆ. ಸಮೀಪದಲ್ಲಿದ್ದವರು ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ಕರೆತಂದರಾದರೂ ಪರೀಕ್ಷಿಸಿದ ವೈದ್ಯರು ಜಗದೀಶ್‌ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಭಾರತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ