ಆ್ಯಪ್ನಗರ

ಹಾಸನ: ಕಿಡ್ನಾಪರ್ಸ್‌ಗಳಿಂದ ಸಿನಿಮೀಯ ಮಾದರಿಯಲ್ಲಿ ಯುವತಿ ರಕ್ಷಿಸಿದ ಯುವಕ..!

ಮದುವೆಯಾಗಲು ಒಪ್ಪದ ಯುವತಿಯನ್ನು ಬೆದರಿಸಿ ಕಿಡ್ನಾಪ್ ಮಾಡಿದ್ದ ತಂಡವನ್ನು ಯುವಕನೋರ್ವ ಸಿನಿಮೀಯ ಮಾದರಿಯಲ್ಲಿ ದಿಟ್ಟ ಸಾಹಸದಿಂದ ಎದುರಿಸಿ ಯುವತಿಯನ್ನು ರಕ್ಷಿಸಿದ ಘಟನೆ ಹಾಸನದಲ್ಲಿ ನಡೆದಿದೆ.

Vijaya Karnataka Web 4 Oct 2020, 5:35 pm
ಹಾಸನ: ಮದುವೆಯಾಗಲು ಒಪ್ಪದ ಯುವತಿಯನ್ನು ಬೆದರಿಸಿ ಸಿನಿಮೀಯ ಮಾದರಿಯಲ್ಲಿ ಕಿಡ್ನಾಪ್ ಮಾಡಿದ್ದ ತಂಡವನ್ನು ಯುವಕನೋರ್ವ ದಿಟ್ಟ ಸಾಹಸದಿಂದ ಎದುರಿಸಿ ಯುವತಿಯನ್ನು ರಕ್ಷಿಸಿದ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ.
Vijaya Karnataka Web a youth rescue women from kidnappers in cinematic style in hasana
ಹಾಸನ: ಕಿಡ್ನಾಪರ್ಸ್‌ಗಳಿಂದ ಸಿನಿಮೀಯ ಮಾದರಿಯಲ್ಲಿ ಯುವತಿ ರಕ್ಷಿಸಿದ ಯುವಕ..!


ತಾಲೂಕಿನ ರಂಗೇನಹಳ್ಳಿ ಗ್ರಾಮದ ಯುವತಿಯನ್ನು ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಸಮೀಪದ ಕಾಳೇನಹಳ್ಳಿ ಗ್ರಾಮದ ಚಿಕ್ಕೇಗೌಡರ ಪುತ್ರ ಪ್ರತಾಪ್ ಅಪಹರಿಸಿದ್ದ ಎನ್ನಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ಮದುವೆ ಪ್ರಸ್ತಾಪ ಇರಿಸಿದ್ದರು. ಯುವತಿ ಒಪ್ಪದಿದ್ದಾಗ ಸಿಟ್ಟಾಗಿ ತೆರಳಿದ್ದರು. ಅದೇ ರಂಗೇನಹಳ್ಳಿಯ ಯುವತಿಯ ಸೋದರ ಸಂಬಂಧಿಗಳ ಮೂಲಕ ಮದುವೆಗೆ ಮತ್ತೊಮ್ಮೆ ಬಲವಂತ ಪ್ರಸ್ತಾಪ ಇಟ್ಟಿದ್ದರು. ಇದಕ್ಕೂ ಸಹ ಯುವತಿ ಹಾಗೂ ಪೋಷಕರು ಒಪ್ಪಿರಲಿಲ್ಲ.

ಹಲವು ಬಾರಿ ಯುವತಿಗೆ ಕರೆ, ಮೆಸೇಜ್‌ ಮಾಡಿದ್ದ ಪ್ರತಾಪ್ ಮದುವೆಯಾಗುವಂತೆ ಪೀಡಿಸಿದ್ದ. ಸೆಪ್ಟೆಂಬರ್‌ 29ರಂದು ಯುವತಿಯ ಮಾವನ ಮಕ್ಕಳಾದ ಗಿರೀಶ್, ಹರೀಶ್‌, ಪದ್ಮಮ್ಮ ಹಾಗೂ ಚಿಕ್ಕೇಗೌಡರ ಸಹಾಯ ಪಡೆದು ಪ್ರತಾಪ್ ಮತ್ತು ಸಹಚರರು ಕಾರಿನಲ್ಲಿ ಯುವತಿಯನ್ನು ಬಲವಂತವಾಗಿ ಅಪಹರಿಸಿದ್ದರು. ಈ ವೇಳೆ ಯುವತಿಯ ರಕ್ಷಣೆಗೆ ಆಗಮಿಸಿದ ಆಕೆಯ ತಂಗಿ ಹಾಗೂ ಮಾವ ತಮ್ಮಯ್ಯನ ಮೇಲೂ ಅಪಹರಣಕಾರರು ಹಲ್ಲೆ ನಡೆಸಿದ್ದರು.

ಆಟೋ ಚಾಲಕರಿಗೆ ಟ್ರಾಫಿಕ್‌ ಸ್ಟಿಕ್ಕರ್‌, ಸ್ಮಾರ್ಟ್‌ ಡಿಸ್‌ಪ್ಲೇ ಕಾರ್ಡ್‌: ಅಂಗೈನಲ್ಲೇ ಚಾಲಕರ ಮಾಹಿತಿ!

ಈ ಬಗ್ಗೆ ಯುವತಿಯ ತಂದೆ ಲೋಕೇಶ್ ಹಳ್ಳಿ ಮೈಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಪಹರಣಕಾರರು ದೂರದ ಊರಿನ ಪರಿಚಯಸ್ಥರ ಮನೆಯಲ್ಲಿ ಯುವತಿಯನ್ನು ಕೂಡಿಹಾಕಿದ್ದರು. ಆದರೆ, ಉಪಾಯದಿಂದ ತಪ್ಪಿಸಿಕೊಂಡ ಯುವತಿ ಸಮೀಪದ ಯಾರದೋ ಮನೆಯಲ್ಲಿ ಆಶ್ರಯ ಪಡೆದು, ಸಹಾಯ ಕೋರಿದ್ದಾಳೆ . ಅಲ್ಲಿಗೂ ಹುಡುಕಿಕೊಂಡು ಬಂದ ಪ್ರತಾಪ್ ಚಾಕು ತೋರಿಸಿ ಬೆದರಿಸಿದ್ದಾನೆ. ಆ ಮನೆಯ ಯುವಕ ಧೃತಿಗೆಡದೆ ಪ್ರತಾಪ್‌ನಿಂದ ಯುವತಿಯನ್ನು ರಕ್ಷಿಸಿದ್ದಾನೆ.

ಹಾಸನ ಜಿಲ್ಲೆಯಾದ್ಯಂತ ಡ್ರಗ್ಸ್, ಬೆಟ್ಟಿಂಗ್ ದಂಧೆ ವಿರುದ್ಧ ಖಾಕಿ ಸಮರ: ಖದೀಮರಿಗೆ ಕೇರಳ ಲಿಂಕ್

ನಂತರ ಆ ಗ್ರಾಮದವರು ಭಾರೀ ಸಂಖ್ಯೆಯಲ್ಲಿ ಸೇರಿದಾಗ ಪ್ರತಾಪ್‌ ಮತ್ತು ತಂಡ ಕಾಲಿಗೆ ಬುದ್ದಿ ಹೇಳಿದ್ದು, ಬಲವಂತದ ಮದುವೆ ಹಾಗೂ ಕಿಡ್ನಾಪ್ ಪ್ರಯತ್ನ ವಿಫಲವಾಗಿದೆ.
ಆರೋಪಿ ಪ್ರತಾಪ್ ಸೇರಿ ಒಟ್ಟು 17 ಜನರ ಮೇಲೆ ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀನಿವಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಹಾಸನ: ಒಂದು ತಿಂಗಳಲ್ಲಿ ಕೊರೊನಾ ಅಬ್ಬರ ಜೋರು, ಎರಡೇ ದಿನದಲ್ಲಿ 20 ಜನರ ಸಾವು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ