ಆ್ಯಪ್ನಗರ

ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಏನು?

ಆಲೂರು: 60 ವರ್ಷದ ರಾಜಕೀಯ ಏಳು ಬೀಳುಗಳ ನೆನೆದು ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡರು ಕಣ್ಣೀರು ಹಾಕಿದರೆ ಹೊರತು ಜನರನ್ನು ಮೆಚ್ಚಿಸಲು ಅಲ್ಲ ಎಂದು ಸಚಿವ ಎಚ್‌.ಡಿ. ರೇವಣ್ಣ ಹೇಳಿದರು.

Vijaya Karnataka 18 Mar 2019, 5:00 am
ಆಲೂರು: 60 ವರ್ಷದ ರಾಜಕೀಯ ಏಳು ಬೀಳುಗಳ ನೆನೆದು ಮಾಜಿ ಪ್ರಧಾನಿ ಎಚ್‌.ಡಿ.ದೇವೆಗೌಡರು ಕಣ್ಣೀರು ಹಾಕಿದರೆ ಹೊರತು ಜನರನ್ನು ಮೆಚ್ಚಿಸಲು ಅಲ್ಲ ಎಂದು ಸಚಿವ ಎಚ್‌.ಡಿ. ರೇವಣ್ಣ ಹೇಳಿದರು.
Vijaya Karnataka Web aaluru jds workers meeting minister h d revanna
ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಕೊಡುಗೆ ಏನು?


ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ‍್ಯಕರ್ತರ ಸಭೆಯಲ್ಲಿ ಮಾತನಾಡಿ, ದೇವೆಗೌಡರು ಬಿಜೆಪಿಯವರಿಗೆ ಹೆದರಿ ಕಣ್ಣೀರು ಹಾಕಲಿಲ್ಲ. ತಮ್ಮ 60 ವರ್ಷದ ರಾಜಕೀಯ ಬೆಳವಣಿಗೆ ಅವಲೋಕಿಸಿಕೊಂಡು ಜಿಲ್ಲೆಯ ಜನತೆ ಪ್ರೀತಿಯನ್ನು ನೆನೆದು ಕಣ್ಣೀರಿಟ್ಟರು. ಬಿಜೆಪಿಯವರು ರಾಜ್ಯದ ಅಭಿವೃದ್ಧಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದನ್ನು ತಾಕತ್ತಿದ್ದರೆ ತಿಳಿಸಲಿ ಎಂದರು.

ಅಲ್ಪಸಂಖ್ಯಾತರ ಅಭಿವೃದ್ಧಿಗೆ 40 ಕೋಟಿ ರೂ., ವಿಶ್ವಕರ್ಮ ಜನಾಂಗದ ಅಭಿವೃದ್ಧಿಗಾಗಿ ನಿಗಮಕ್ಕೆ 38 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಹಾಸನ-ಆಲೂರು-ಬೇಲೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳಲು ರೈಲು ಮಾರ್ಗವಾಗಲಿದೆ. ಆಲೂರಿನಲ್ಲಿ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಎಚ್‌. ಡಿ. ದೇವೇಗೌಡರೆ ಹಾಸನ ಜಿಲ್ಲೆ ಪ್ರತಿನಿದಿಸಬೇಕೆಂದು ನಿನ್ನೆ ರಾತ್ರಿ ಅವರಿಗೆ ಒತ್ತಡ ಹಾಕಿದರೂ ಒಪ್ಪಲಿಲ್ಲ. ಪ್ರಜ್ವಲ್‌ ನನ್ನ ಜೊತೆ ಹೊಸದಿಲ್ಲಿಯಲ್ಲಿರಲಿ. ಅವನಿಗೆ ಜನಸೇವೆ ಕುರಿತು ಅರಿವು ಮೂಡಿಸುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಪ್ರಜ್ವಲ್‌ ಈ ಜಿಲ್ಲೆಯ ಎಲ್ಲರ ಮಗನೆಂದು ಭಾವಿಸಿಕೊಂಡು ಗೆಲುವು ತಂದುಕೊಡಬೇಕು ಎಂದು ಮನವಿ ಮಾಡಿಕೊಂಡರು.

ಶಾಸಕ ಎಚ್‌. ಕೆ. ಕುಮಾರಸ್ವಾಮಿಯವರು ಮಾತನಾಡಿ, ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷ ಗಳಲ್ಲಿ ಇಂದಿಗೂ ಏಳೆಂಟು ತಲೆಮಾರನವರು ರಾಜಕೀಯ ಪ್ರವೇಶ ಮಾಡಿಲ್ಲವೆ. ದೇವೇಗೌಡರ ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ. ಜನತೆ ತೀರ್ಮಾನ ಮುಖ್ಯವಾಗಿದೆ ಎಂದರು.

ಪ್ರಜ್ವಲ್‌ ರೇವಣ್ಣ ಮಾತನಾಡಿ, ಸುಮಾರು 8 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದೇನೆ. ಪಕ್ಷ , ಕುಟುಂಬ ಮತ್ತು ರಾಜ್ಯಕ್ಕೆ ಕೀರ್ತಿ ತರುವಂತಹ ಕೆಲಸ ಮಾಡುತ್ತೇನೆ. ಜನಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ಕೆ.ಎಸ್‌.ಮಂಜೇಗೌಡ, ಬೇಲೂರು ತಾಲೂಕು ಜೆಡಿಎಸ್‌ ಅಧ್ಯಕ್ಷ ತೊ.ಚ.ಅನಂತಸುಬ್ಬರಾವ್‌, ಜಿಪಂ ಸದಸ್ಯ ಲೋಕೇಶ್‌, ಬೇಲೂರು ಜಿಪಂ ಸದಸ್ಯ ಚಂದ್ರೇಗೌಡ, ಬೆಳಗೋಡು ಜಿಪಂ ಸದಸ್ಯೆ ಚಂಚಲ ಕುಮಾರಸ್ವಾಮಿ, ತಾಪಂ ಸದಸ್ಯರಾದ ನಟರಾಜ್‌, ಸಿ.ವಿ.ಲಿಂಗರಾಜು, ಮಾಜಿ ಉಪಾಧ್ಯಕ್ಷ ದಿನೇಶ್‌, ಪಪಂ ಅಧ್ಯಕ್ಷ ಎಚ್‌.ವಿ. ನಂದೀಶ್‌, ಉಪಾಧ್ಯಕ್ಷ ಮಂಜುನಾಥ್‌, ಕದಾಳು ರಾಜಪ್ಪಗೌಡ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ