ಆ್ಯಪ್ನಗರ

ಕುಂಚಿಟಿಗರನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ

ಸಾಮಾಜಿಕವಾಗಿ ಹಿಂದುಳಿದಿರುವ ಕುಂಚಿಟಿಗರ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಿ ಆರ್ಥಿಕವಾಗಿ ಸದಢಗೊಳಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದರು.

Vijaya Karnataka 12 Oct 2019, 9:22 pm
ಅರಕಲಗೂಡು: ಸಾಮಾಜಿಕವಾಗಿ ಹಿಂದುಳಿದಿರುವ ಕುಂಚಿಟಿಗರ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಿ ಆರ್ಥಿಕವಾಗಿ ಸದಢಗೊಳಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದರು.
Vijaya Karnataka Web HSN12ARK1_16


ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದ ಕುಂಚಿಟಿಗರ ಸಮಾವೇಶ ಹಾಗೂ ಪ್ರತಿಭಾಪುರಸ್ಕಾರ ಕಾರ‌್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘‘1996ರ ಹಿಂದೆ ಕುಂಚಿಟಿಗ ಸಮುದಾಯ ಒಬಿಸಿಗೆ ಸೇರ್ಪಡೆ ಗೊಂಡಿತ್ತು. ಬಳಿಕ ರಾಜಕೀಯ ದುರುದ್ದೇಶ ದಿಂದ ಸಮಾಜವನ್ನು ಸಾಮಾನ್ಯವರ್ಗಕ್ಕೆ ಸೇರ್ಪಡೆಗೊಳಿಸ ಲಾಗಿದೆ. ಇದರಿಂದ ಸಮಸ್ಯೆ ಎದುರಾಗಿದೆ.ಒಕ್ಕಲಿಗ ಸಮಾಜದ ಒಂದು ಭಾಗವಾಗಿರುವ ಈ ಸಮಾಜಕ್ಕೆ ಎಲ್ಲಾ ಸ್ಥಾನಮಾನಗಳು ಸಿಗಬೇಕಿದೆ. ಸಮಾಜದ ಮುಖಂಡರು ರಾಜ್ಯ ಸರಕಾರದ ಮೇಲೆ ಒತ್ತಡ ತರುವ ವೇಳೆ ನಾನು ಕೂಡ ಭಾಗಿಯಾಗಿ ಬೆಂಬಲ ನೀಡುತ್ತೇನೆ,’’ ಎಂದು ಹೇಳಿದರು.

‘‘ತಾಲೂಕು ಸೇರಿದಂತೆ ಇತರೆ ತಾಲೂಕಿನಿಂದ ಸಮಾಜದ ಪ್ರತಿಭಾವಂತ 70ಕ್ಕೂ ಅಧಿಕ ಮಕ್ಕಳನ್ನು ವೇದಿಕೆಯಲ್ಲಿ ಸನ್ಮಾನಿಸುತ್ತಿರುವುದು ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇದು ಇತರೆ ಮಕ್ಕಳಿಗೆ ಉತ್ತೇಜಿತವಾಗಿದೆ,’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೌಶಲಾಭಿವದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ‘‘ರಾಜ್ಯದಲ್ಲಿ 25ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕುಂಚಿಟಿಗ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಗಬೇಕಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಮಂದಿ ಜೀವನ ನಡೆಸುತ್ತಿರುವ ಪರಿಣಾಮ ಇನ್ನೂ ಕೂಡ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಈ ಹಿಂದೆ ಇದ್ದ ಹಿಂದುಳಿದ ವರ್ಗಕ್ಕೆ ಸಮಾಜವನ್ನು ಸೇರ್ಪಡೆಗೊಳಿ ಸಬೇಕು. ಈ ಕುರಿತು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ವರದಿ ನೀಡಿದೆ. ಇದಲ್ಲದೇ ರಾಜ್ಯಕ್ಯಾಬಿನೆಟ್‌ನಲ್ಲಿ ಅಂತಿಮ ತೀರ್ಮಾನಕೈಗೊಂಡು ಒಬಿಸಿಗೆ ಸೇರ್ಪಡೆ ಗೊಳಿಸಬೇಕು,’’ ಎಂದು ಆಗ್ರಹಿಸಿದರು.

ಕಾರ‌್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು.
ಹೊಸದುರ್ಗ ಕುಂಚಗಿರಿ ಸಂಸ್ಥಾನ ಮಠದ ಮಠಾಧೀಶರಾದ ಶ್ರೀಶಾಂತವೀರ ಸ್ವಾಮೀಜಿ, ಸಮಾಜದ ಮುಖಂಡರಾದ ಬಸವಾನಂದ,ಶಿವಭದ್ರಯ್ಯ,ಲಕ್ಷ್ಮೀಪತಯ್ಯ, ಕಾಳೇಗೌಡ,ಪಾಂಡುರಂಗ, ವಿರೂಪಾಕ್ಷ, ತಾಪಂ ಸದಸ್ಯ ನಿಂಗೇಗೌಡ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ