ಆ್ಯಪ್ನಗರ

ವೃದ್ಧಾಶ್ರಮಗಳಿಗೆ ಪಾಲಕರ ಸೇರಿಸುವುದು ದುರಂತ

ಕಾನೂನುಗಳ ಭಯ ಹುಟ್ಟಿಸಿ ಹಿರಿಯ ನಾಗರೀಕರನ್ನು ಪೋಷಣೆ ಮಾಡಿ ಎಂದು ಹೇಳಬೇಕಾಗಿ ಬಂದಿರುವುದು ಸಾಮಾಜಿಕ ದುರಂತವಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಯೋಗೇಶ್‌ ಅಭಿಪ್ರಾಯಪಟ್ಟರು.

Vijaya Karnataka 18 Oct 2019, 5:00 am
ಅರಕಲಗೂಡು: ಕಾನೂನುಗಳ ಭಯ ಹುಟ್ಟಿಸಿ ಹಿರಿಯ ನಾಗರೀಕರನ್ನು ಪೋಷಣೆ ಮಾಡಿ ಎಂದು ಹೇಳಬೇಕಾಗಿ ಬಂದಿರುವುದು ಸಾಮಾಜಿಕ ದುರಂತವಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಯೋಗೇಶ್‌ ಅಭಿಪ್ರಾಯಪಟ್ಟರು.
Vijaya Karnataka Web adding caregivers to old age homes is a disaster
ವೃದ್ಧಾಶ್ರಮಗಳಿಗೆ ಪಾಲಕರ ಸೇರಿಸುವುದು ದುರಂತ

ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿಪಟ್ಟಣದಲ್ಲಿನಡೆದ ಹಿರಿಯ ನಾಗರೀಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆಯಲ್ಲಿಇಂದು ಹಿರಿಯ ನಾಗರೀಕರ ಪರಿಸ್ಥಿತಿ ಗಂಭೀರವಾಗುತ್ತಿದೆ. ಅವರ ಪರಿಶ್ರಮದಿಂದ ನಾವು ಉನ್ನತಿ ಸಾಧಿಸಿದ್ದೇವೆ, ಮುಂದಿನ ದಿನಗಳಲ್ಲಿನಮಗೂ ವಯಸ್ಸಾಗಿ ನಾವೂ ಇದೇ ಪಾಡನ್ನು ಅನುಭವಿಸಬೇಕಾಗುತ್ತದೆ ಎಂಬ ಸಾಮಾನ್ಯ ಅರಿವು ಇಲ್ಲದಂತೆ ಪಾಲಕರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು ಮಾನವೀಯ ಮೌಲ್ಯಗಳು ಕುಸಿಯು ತ್ತಿರುವ ಸಂಕೇತವಾಗಿದೆ ಎಂದರು. ಹಿರಿಯ ನಾಗರೀಕರ ರಕ್ಷಣೆಗಾಗಿ ವಿಶೇಷ ಕಾನೂನುಗಳನ್ನು ರೂಪಿಸಲಾಗಿದೆ. ಕುಟುಂಬದ ಸದಸ್ಯರು ಸರಿಯಾಗಿ ಪೋಷಣೆ ಮಾಡದಿದ್ದಲ್ಲಿಸೆರೆಮನೆ ವಾಸದಂತಹ ಕಠಿಣ ಕ್ರಮ ಕೈಗೊಳ್ಳುವ ಸಂಗಡ ಸಂಬಂಧಿಸಿದವರಿಂದ ಜೀವನಾಂಶ ಕೊಡಿಸುವ, ಆಸ್ತಿಯನ್ನು ಮರಳಿ ಅವರ ಹೆಸರಿಗೆ ವರ್ಗಾಯಿಸಲೂ ಕಾನೂನಿನಲ್ಲಿಅವಕಾಶವಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್‌.ಆರ್‌. ನಾಗರಾಜ್‌ ಮಾತನಾಡಿ ಹಿರಿಯ ನಾಗರೀ ಕರ ರಕ್ಷಣೆ ಕುರಿತ ಅರಿವು ಪ್ರತಿಯೊಬ್ಬರಿಗೆ ಇದೆಯಾದರೂ ಆರಣೆಗೆ ಬರುತ್ತಿಲ್ಲ. ಸಿನಿಮಾ, ಧಾರಾವಾಹಿಗಳಲ್ಲಿಹಿರಿಯರಿಗೆ ನೀಡುವ ಕಿರುಕುಳದ ಬಗ್ಗೆ ಕನಿಕರದ ಮಾತನಾಡುವವರೆ ನಿಜ ಜೀವನದಲ್ಲಿಅವರನ್ನು ಕಡೆಗಣಿಸುತ್ತಿರುವುದು ಬೇಸರದ ಸಂಗತಿ. ಹಿರಿಯರನದ್ನು ಗೌರವಿಸುವ ಸಂಗಡ ಮಕ್ಕಳಲ್ಲೂಇದರ ಕುರಿತು ಅರಿವು ಮೂಡಿಸಿದರೆ ಭವಿಷ್ಯದ ನಮ್ಮ ಬದುಕು ಸಹನೀಯವಾಗಿರುತ್ತದೆ ಎಂಬ ಅರಿವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಿದೆ ಎಂದರು. ವಕೀಲ ಶಂಕರಯ್ಯ ಮಾತನಾಡಿ ಇತ್ತೀಚಿಗೆ ಹಿರಿಯ ನಾಗರೀಕರಿಗೆ ದೊರಕುವ ಸವಲತ್ತುಗಳು ಹಾಗೂ ಕಾನೂನು ರಕ್ಷಣೆ ಸಿಗುತ್ತಿಲ್ಲಎಂದೂ ಹೇಳಲಾಗುತ್ತಿದೆ.ಇವರ ಮಕ್ಕಳು,ಸಂಬಂಧಿಕರು ಈ ಬಗ್ಗೆ ಎಚ್ಚರಿಕೆ ವಹಿಸಿ ಸಕಾಲದಲ್ಲಿಸವಲತ್ತುಗಳು ಸಿಗುವಂತ್ತೆ ನೋಡಿಕೊಳ್ಳ ಬೇಕೆಂದು ಸಲಹೆ ಮಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಎಸ್‌.ಎನ್‌.ಶಿವಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುನರ್ವಸತಿ ಕಾರ್ಯಕರ್ತ ಚಂದ್ರಶೇಖರ್‌, ವಕೀಲರ ಸಂಘದ ಕಾರ್ಯದರ್ಶಿ ಪಿ.ಎಂ.ಮಹೇಶ್‌, ಸಿಡಿಪಿಒ ಕಚೇರಿ ಪ್ರಥಮ ದರ್ಜೆ ಸಹಾಯಕಿ ಜಿ.ಜೆ.ಆಶಾ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ