ಗೋಹತ್ಯೆ ನಿಷೇಧ ಎಫೆಕ್ಟ್! ವಯಸ್ಸಾದ ಜಾನುವಾರು, ಗಂಡುಕರುಗಳನ್ನು ಸಾಕಲಾಗದೆ ಬೀದಿ ಪಾಲು!
ಗೋಹತ್ಯೆ ನಿಷೇಧ ಕಾಯಿದೆ ಜಾರಿ ಮುಂಚೆ ಗಂಡು ಕರುಗಳನ್ನು ಆರೈಕೆ ಮಾಡದೆ ವ್ಯಾಪಾರಸ್ಥರಿಗೆ ಮಾರುತ್ತಿದ್ದರು. ಗೋಹತ್ಯೆ ನಿಷೇಧ ಕಾಯಿದೆ ಜಾರಿ ಬಂದ ಮೇಲೆ ನವಜಾತ ಹೋರಿ ಕರುಗಳು ಹಾಗೂ ವಯಸ್ಸಾದ ಜಾನುವಾರುಗಳನ್ನು ಖರೀದಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಜಾನುವಾರು ಸಾಕಾಣೆದಾರರು ಇಂತಹ ಜಾನುವಾರುಗಳನ್ನು ಸಾಕಲೂ ಆಗದೆ ಮಾರಾಟ ಮಾಡಲೂ ಆಗದೆ ಪೊದೆಗಳ ಬದಿಯಲ್ಲಿ ಬಿಟ್ಟು ಹೋಗುತ್ತಿದ್ದಾರೆ.
Vijaya Karnataka Web 19 Apr 2021, 7:12 am
ಹೈಲೈಟ್ಸ್:
- ಗೋಹತ್ಯೆ ನಿಷೇಧ ಕಾಯ್ದೆ ಜಾರಿ ನಂತರ ಗಂಡು ಕರುಗಳನ್ನು ಕೇಳೋರೇ ಇಲ್ಲ
- ಸಾಕಲೂ ಆಗದೇ, ಮಾರಲೂ ಆಗದೆ ರಸ್ತೆ ಬದಿ, ಗುಡ್ಡಗಾಡಿಗೆ ಅಟ್ಟುತ್ತಿದ್ದಾರೆ ರೈತರು
- ಗೋಹತ್ಯೆ ನಿಷೇಧ ಮಾಡಿದ್ದ ಸರ್ಕಾರ ಇನ್ನೂ ಗೋಶಾಲೆಗಳನ್ನು ತೆರೆದಿಲ್ಲ
- ಮೂಕ ಪ್ರಾಣಿಗಳಾದ ವಯಸ್ಸಾದ ಜಾನುವಾರು, ಗಂಡುಕರುಗಳ ವೇದನೆ ಕೇಳುವವರೇ ಇಲ್ಲ!
ಹಾಸನ: ಜಾವಗಲ್ ಹೋಬಳಿ ಬಂದೂರು ಗ್ರಾಮದಲ್ಲಿ ನವಜಾತ ಸಿಂದಿ ಗಂಡು ಕರುಗಳನ್ನು ಜಾನುವಾರು ಮಾಲೀಕರು ರಸ್ತೆಬದಿ ಪೊದೆಗಳಲ್ಲಿ, ಬೇಲಿ ಸಾಲುಗಳಲ್ಲಿ ಬಿಟ್ಟು ಹೋಗುತ್ತಿರುವ ಘಟನೆ ಮರುಕಳಿಸುತ್ತಲೇ ಇದೆ. ಜಾವಗಲ್ ಬಂದೂರು ಗ್ರಾಮದಲ್ಲಿ ಭಾನುವಾರ ಕೂಡ ಗಂಡು ಕರುವೊಂದನ್ನು ಯಾರೋ ರಸ್ತೆ ಬದಿ ಪೊದೆಯಲ್ಲಿ ಬಿಟ್ಟು ಹೋಗಿದ್ದಾರೆ. ಸಿಂದಿ ಹಸುಗಳಿಗೆ ಹೆಣ್ಣು ಕರುವಿಗೆ ಜನ್ಮ ನೀಡಿದರೆ ಮುತುವರ್ಜಿ ವಹಿಸಿ ಸಾಕುತ್ತಾರೆ. ಆದರೆ, ಅದೇ ಹಸು ಗಂಡು ಕರುಗಳಿಗೆ ಜನ್ಮ ನೀಡಿದರೆ ರಾತ್ರಿ ವೇಳೆ ರಸ್ತೆ ಬದಿ ಪೊದೆಗಳಲ್ಲಿ ಇಲ್ಲವೇ ಬೇಲಿ ಬದಿಯಲ್ಲಿ ಬಿಟ್ಟು ಹೋಗುತ್ತಾರೆ. ಕಳೆದ ಕೆಲವು ದಿನಗಳಿಂದ ಈ ರೀತಿಯ ಕೃತ್ಯಗಳು ನಡೆಯುತ್ತಲೇ ಇದೆ. ಕಳೆದ ವಾರ ಸಿಂದಿ ವಯಸ್ಸಾದ ಹಸು ಹಾಗೂ ಗಂಡು ಕರುವೊಂದನ್ನು ಬಿಟ್ಟು ಹೋಗಿದ್ದು, ಅದು ನಿತ್ರಾಣಗೊಂಡು ಸತ್ತು ಹೋಗಿದ್ದವು. ಇದನ್ನು ನೋಡಿದ ಗ್ರಾಮಸ್ಥರೇ ಅವುಗಳನ್ನು ಮಣ್ಣಿನಲ್ಲಿ ಹೂತು ಹಾಕಿದ್ದರು.
ಕೆಲವು ಸಂದರ್ಭದಲ್ಲಿ ಎಳೆಕರುಗಳು ಬೀದಿ ನಾಯಿಗಳ ಪಾಲಾಗುತ್ತಿವೆ. ಈ ರೀತಿ ಪದೇಪದೆ ಇದೇ ಎಳೆ ಗಂಡು ಕರುಗಳನ್ನು ಬಿಟ್ಟು ಹೋಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಗೋ ಕಾಯಿದೆ ಜಾರಿ ಮುಂಚೆ ಗಂಡು ಕರುಗಳನ್ನು ಆರೈಕೆ ಮಾಡದೆ ವ್ಯಾಪಾರಸ್ಥರಿಗೆ ಮಾರುತ್ತಿದ್ದರು. ಗೋಹತ್ಯೆ ನಿಷೇಧ ಕಾಯಿದೆ ಜಾರಿ ಬಂದ ಮೇಲೆ ನವಜಾತ ಹೋರಿ ಕರುಗಳು ಹಾಗೂ ವಯಸ್ಸಾದ ಜಾನುವಾರುಗಳನ್ನು ಖರೀದಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಜಾನುವಾರು ಸಾಕಾಣೆದಾರರು ಇಂತಹ ಜಾನುವಾರುಗಳನ್ನು ಸಾಕಲೂ ಆಗದೆ ಮಾರಾಟ ಮಾಡಲೂ ಆಗದೆ ಪೊದೆಗಳ ಬದಿಯಲ್ಲಿ ಬಿಟ್ಟು ಹೋಗುತ್ತಿದ್ದಾರೆ.
ಮೇವಿನ ಅಭಾವವಿರುವುದರಿಂದ ಆರೈಕೆ ಮಾಡುವುದು ದುಸ್ತರವಾಗುತ್ತಿದೆ. ಹಿಂದೆಯೆಲ್ಲ ಗ್ರಾಮದಲ್ಲಿ ನಾಟಿ ತಳಿಗಳೆ ಹೆಚ್ಚಾಗಿದ್ದು ಗಂಡು ಅಥವಾ ಹೆಣ್ಣು ಕರುಗಳಿಗೆ ಜನ್ಮ ನೀಡಿದಲ್ಲಿ ಇಂತಹ ಸಮಸ್ಯೆ ಉದ್ಬವಿಸುತ್ತಿರಲಿಲ್ಲ. ನಾಟಿ ತಳಿಗಳಾದ್ದರಿಂದ ಮನೆಯಲ್ಲಿಯೇ ಆರೈಕೆ ಮಾಡಿ ಬೆಳೆಸಿ ವ್ಯವಸಾಯ ಹಾಗೂ ಹೈನುಗಾರಿಕೆ ನಡೆಸುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸುತ್ತಾರೆ. ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳಲ್ಲಿ ಗೋಶಾಲೆಗಳನ್ನು ತೆರೆಯುವುದಾಗಿ ತಿಳಿಸಿದ್ದ ಸರಕಾರ ಇದುವರೆಗೆ ಗೋಶಾಲೆಗಳ ವ್ಯವಸ್ಥೆ ಮಾಡಿಲ್ಲ. ಇದರಿಂದ ಮೂಕ ಪ್ರಾಣಿಗಳ ತಮ್ಮ ವೇದನೆಯನ್ನು ಕೇಳುವವರೇ ಇಲ್ಲವೆಂಬಂತಾಗಿದೆ.
ಇತ್ತೀಚಿನ ದಿನಗಳಲ್ಲಿ ವಾರದಲ್ಲಿ 2-3 ಇಂತಹ ಘಟನೆಗಳು ಗ್ರಾಮದಲ್ಲಿ ನಡೆಯುತ್ತಿದ್ದು, ಮೂಕ ಪ್ರಾಣಿಗಳನ್ನು ಗೋಶಾಲೆಗೆ ಬಿಟ್ಟು ಬರಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರಕಾರ ಈ ಬಗ್ಗೆ ಗಮನಹರಿಸಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಗೋಶಾಲೆಗಳನ್ನು ನಿರ್ಮಿಸಬೇಕು ಎಂದು ಬಂದೂರು ಗ್ರಾಮದ ವಿವೇಕನಂದ ಯುವಕ ಸಂಘದ ಅಧ್ಯಕ್ಷ ಬಿ.ಎಸ್ ಮಹೇಶ್ ಒತ್ತಾಯಿಸಿದ್ದಾರೆ.
ಕೆಲವು ಸಂದರ್ಭದಲ್ಲಿ ಎಳೆಕರುಗಳು ಬೀದಿ ನಾಯಿಗಳ ಪಾಲಾಗುತ್ತಿವೆ. ಈ ರೀತಿ ಪದೇಪದೆ ಇದೇ ಎಳೆ ಗಂಡು ಕರುಗಳನ್ನು ಬಿಟ್ಟು ಹೋಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಗೋ ಕಾಯಿದೆ ಜಾರಿ ಮುಂಚೆ ಗಂಡು ಕರುಗಳನ್ನು ಆರೈಕೆ ಮಾಡದೆ ವ್ಯಾಪಾರಸ್ಥರಿಗೆ ಮಾರುತ್ತಿದ್ದರು. ಗೋಹತ್ಯೆ ನಿಷೇಧ ಕಾಯಿದೆ ಜಾರಿ ಬಂದ ಮೇಲೆ ನವಜಾತ ಹೋರಿ ಕರುಗಳು ಹಾಗೂ ವಯಸ್ಸಾದ ಜಾನುವಾರುಗಳನ್ನು ಖರೀದಿ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಜಾನುವಾರು ಸಾಕಾಣೆದಾರರು ಇಂತಹ ಜಾನುವಾರುಗಳನ್ನು ಸಾಕಲೂ ಆಗದೆ ಮಾರಾಟ ಮಾಡಲೂ ಆಗದೆ ಪೊದೆಗಳ ಬದಿಯಲ್ಲಿ ಬಿಟ್ಟು ಹೋಗುತ್ತಿದ್ದಾರೆ.
ಮೇವಿನ ಅಭಾವವಿರುವುದರಿಂದ ಆರೈಕೆ ಮಾಡುವುದು ದುಸ್ತರವಾಗುತ್ತಿದೆ. ಹಿಂದೆಯೆಲ್ಲ ಗ್ರಾಮದಲ್ಲಿ ನಾಟಿ ತಳಿಗಳೆ ಹೆಚ್ಚಾಗಿದ್ದು ಗಂಡು ಅಥವಾ ಹೆಣ್ಣು ಕರುಗಳಿಗೆ ಜನ್ಮ ನೀಡಿದಲ್ಲಿ ಇಂತಹ ಸಮಸ್ಯೆ ಉದ್ಬವಿಸುತ್ತಿರಲಿಲ್ಲ. ನಾಟಿ ತಳಿಗಳಾದ್ದರಿಂದ ಮನೆಯಲ್ಲಿಯೇ ಆರೈಕೆ ಮಾಡಿ ಬೆಳೆಸಿ ವ್ಯವಸಾಯ ಹಾಗೂ ಹೈನುಗಾರಿಕೆ ನಡೆಸುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸುತ್ತಾರೆ. ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳಲ್ಲಿ ಗೋಶಾಲೆಗಳನ್ನು ತೆರೆಯುವುದಾಗಿ ತಿಳಿಸಿದ್ದ ಸರಕಾರ ಇದುವರೆಗೆ ಗೋಶಾಲೆಗಳ ವ್ಯವಸ್ಥೆ ಮಾಡಿಲ್ಲ. ಇದರಿಂದ ಮೂಕ ಪ್ರಾಣಿಗಳ ತಮ್ಮ ವೇದನೆಯನ್ನು ಕೇಳುವವರೇ ಇಲ್ಲವೆಂಬಂತಾಗಿದೆ.
ಇತ್ತೀಚಿನ ದಿನಗಳಲ್ಲಿ ವಾರದಲ್ಲಿ 2-3 ಇಂತಹ ಘಟನೆಗಳು ಗ್ರಾಮದಲ್ಲಿ ನಡೆಯುತ್ತಿದ್ದು, ಮೂಕ ಪ್ರಾಣಿಗಳನ್ನು ಗೋಶಾಲೆಗೆ ಬಿಟ್ಟು ಬರಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರಕಾರ ಈ ಬಗ್ಗೆ ಗಮನಹರಿಸಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಗೋಶಾಲೆಗಳನ್ನು ನಿರ್ಮಿಸಬೇಕು ಎಂದು ಬಂದೂರು ಗ್ರಾಮದ ವಿವೇಕನಂದ ಯುವಕ ಸಂಘದ ಅಧ್ಯಕ್ಷ ಬಿ.ಎಸ್ ಮಹೇಶ್ ಒತ್ತಾಯಿಸಿದ್ದಾರೆ.