ಹಾಸನ: ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದುತ್ತಿದ್ದಂತೆಯೇ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜಿಲ್ಲೆಯ ನಾನಾ ಇಲಾಖೆಯ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಧಿಕಾರಿಗಳಲ್ಲಿ ಇದೀಗ ತಳಮಳ ಸೃಷ್ಟಿಯಾಗಿದೆ.
ಬುಧವಾರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಧಿಕಾರ ಸ್ವೀಕರಿಸುತ್ತಿದ್ದಂತೆ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಚ್.ಡಿ.ರೇವಣ್ಣ ಅಧಿಧಿಕಾರ ಹಿಡಿಯುವುದು ನಿಶ್ಚಿತ. ಈ ಪ್ರಕ್ರಿಯೆ ಮುಗಿದ ಕೆಲ ದಿನದಲ್ಲೇ ಜಿಲ್ಲಾಧಿಧಿಕಾರಿ, ಎಸ್ಪಿಯಿಂದ ಹಿಡಿದು ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಯುವುದು ಖಚಿತ ಎಂಬ ಲೆಕ್ಕಾಚಾರ ಈಗಾಗಲೇ ಪ್ರಾರಂಭಗೊಂಡಿದೆ.
ಜಿಲ್ಲಾಧಿಧಿಕಾರಿಯಾಗಿ ಡಾ.ಪಿ.ಸಿ.ಜಾಫರ್ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಗೆ ಬಂದಿದ್ದು, ಪ್ರವಾಸಿ ಮಂದಿರದಲ್ಲೇ ತಂಗಿದ್ದಾರೆ. ಅವರನ್ನು ಜಿಲ್ಲೆಯಲ್ಲಿ ಮುಂದುವರಿಸುವ ಸಾಧ್ಯತೆ ಕಡಿಮೆ. ಯಾವುದೇ ಸಂದರ್ಭದಲ್ಲಿಯಾಗಲಿ ವರ್ಗಾವಣೆಗೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಡಿಸಿ ತಮ್ಮ ಕುಟುಂಬ ವರ್ಗವನ್ನು ಇಲ್ಲಿಗೆ ಬರಮಾಡಿಕೊಂಡಿಲ್ಲ.
ಪೊಲೀಸ್ ವರಿಷ್ಠಾಧಿಧಿಕಾರಿ ರಾಹುಲ್ಕುಮಾರ್ ಶಹಪುರವಾಡ್ ಮೂರು ವರ್ಷ ಪೂರೈಸಿದ್ದು, ರೇವಣ್ಣ ಹಾಗೂ ದೇವೇಗೌಡರೊಂದಿಗೆ ಆತ್ಮೀಯತೆಯಿಂದ ಇದ್ದರೂ ಅವಧಿಧಿ ಪೂರ್ಣಗೊಂಡಿರುವ ಕಾರಣ ನೀಡಿ ವರ್ಗಾವಣೆ ಮಾಡುವುದು ನಿಶ್ಚಿತ ಎನ್ನಲಾಗುತ್ತಿದೆ.
ವಿಧಾನಸಭೆ ಚುನಾವಣೆ ವೇಳೆಯಲ್ಲೇ ಅಧಿಕಾರಿ ಡಿಸಿ ವಿರುದ್ಧ ವಾಗ್ದಾಳಿ ನಡೆಸಿದ್ದ ರೇವಣ್ಣ ಸಚಿವರಾಗಿ ಬಂದ ಬಳಿಕ ಈ ಅಧಿಧಿಕಾರಿಯನ್ನು ಎತ್ತಂಗಡಿ ಮಾಡದೆ ಬಿಡಲಾರರು ಎಂಬ ಸಂಗತಿ ಇಲಾಖೆಯಲ್ಲಿ ಚರ್ಚಿತವಾಗುತ್ತಿದೆ.
ತನ್ನ ಹಿಡಿತದ ಲೋಕೋಪಯೋಗಿ ಇಲಾಖೆಯಲ್ಲೂ ಸಾಕಷ್ಟು ಬದಲಾವಣೆ ತರುವ ಮೂಲಕ ಹಲವು ಎಂಜಿನಿಯರ್ಗಳು ಎತ್ತಂಗಡಿಯಾಗಲಿದ್ದು, ಈ ಹಿಂದೆ ಜೆಡಿಎಸ್ ಅಧಿಧಿಕಾರವಧಿಧಿಯಲ್ಲಿ ಇಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡು ಹೊರ ಜಿಲ್ಲೆಗೆ ಹೋದವರು ಪುನಃ ಜಿಲ್ಲೆಗೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಆರ್ಟಿಒ
ಕೆಲ ವರ್ಷದಿಂದ ಪ್ರಭಾರಿ ಆರ್ಟಿಒ ಅವರನ್ನೇ ಪ್ರತಿಷ್ಠಾಪಿಸಿಕೊಂಡು, ಹಿರಿಯ ಇನ್ಸ್ಪೆಕ್ಟರ್ ಅಗಿದ್ದ ಬಾಗೂರು ಮಂಜೇಗೌಡರೇ ಇಲಾಖೆ ನಿಯಂತ್ರಿಸುತ್ತಿದ್ದಾರೆ ಎಂಬ ಆಕ್ರೋಶ, ಅಸಮಾಧಾನವನ್ನು ಹಲವು ಬಾರಿ ರೇವಣ್ಣ ಹೊರ ಹಾಕಿದ್ದರು. ಇದೀಗ ಮಂಜೇಗೌಡರು ಇಲಾಖೆಯಲ್ಲಿ ಇಲ್ಲವಾದರೂ, ಆರ್ಟಿಒ, ಇನ್ಸ್ಪೆಕ್ಟರ್ಗಳ ಸಾಮೂಹಿಕ ವರ್ಗಾವಣೆ ಆಗುವುದಂತೂ ಕಟ್ಟಿಟ್ಟಬುತ್ತಿ ಎಂಬುದು ಹಲವರ ಲೆಕ್ಕಾಚಾರ.
ಇನ್ನು ತಾಲೂಕು ತಹಸೀಲ್ದಾರ್, ಉಪವಿಭಾಗಾಧಿಧಿಕಾರಿ ಹುದ್ದೆಗಳಿಗೆ ಇತ್ತೀಚೆಗಷ್ಟೇ ಹೊಸ ಅಧಿಧಿಕಾರಿಗಳು ಬಂದು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೂ ವರ್ಗಾವಣೆಯ ಭೀತಿ ಸೃಷ್ಟಿಯಾಗಿದೆ. ನಗರಸಭೆ ಆಯುಕ್ತರು, ಪುರಸಭೆ ಸೇರಿದಂತೆ ಪ್ರಮುಖ ಇಲಾಖೆಯ ಎಲ್ಲ ಹಿರಿಯ ಅಧಿಧಿಕಾರಿಗಳು ತಮ್ಮ ಮಕ್ಕಳನ್ನು ಶಾಲೆ, ಕಾಲೇಜಿಗೆ ಇಲ್ಲಿಯೇ ದಾಖಲಿಸುವುದೇ ಅಥವಾ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದಾರೆ.
ಇದೂ ಒಂದು ಕಾರಣ
ಸರಕಾರ ಯಾವುದೇ ಬರಲಿ, ಸರಕಾರಿ ಅಧಿಧಿಕಾರಿಗಳು ಎಲ್ಲಿ ಹೋದರೂ ಕೆಲಸ ಮಾಡಬೇಕು ಎಂಬ ವಾದ ಸರಿಯಾಗಿದ್ದರೂ, ನಾಲ್ಕೈದು ವರ್ಷದಿಂದ ಇಲ್ಲೇ ಇರುವ ಅಧಿಧಿಕಾರಿಗಳನ್ನು ವರ್ಗ ಮಾಡಲಿ. ಆರು ತಿಂಗಳು, ವರ್ಷದ ಹಿಂದೆ ಬಂದವರನ್ನು ವರ್ಗ ಮಾಡಿದರೆ ಹೇಗೆ ಎಂಬ ವಾದವೂ ಕೇಳಿ ಬರುತ್ತಿದೆ. ಅದೇನೆ ಇರಲಿ ಸರಕಾರ ಬದಲಾದಂತೆ, ಜಿಲ್ಲಾ ಉಸ್ತುವಾರಿ ಸಚಿವರುಗಳು ಬದಲಾದಂತೆ ತಮ್ಮ ಆಡಳಿತಕ್ಕೆ ತಕ್ಕಂತೆ ಅಧಿಧಿಕಾರಿಗಳನ್ನು ಬದಲಿಸುವುದು, ತಮಗೆ ಆತ್ಮೀಯವಾಗಿರುವ ಅಧಿಧಿಕಾರಿಗಳನ್ನು ನಿಯೋಜಿಸಿಕೊಳ್ಳುವುದು ಒಂದು ರೀತಿ ಸಂಪ್ರದಾಯದಂತೆ ಆಗಿಬಿಟ್ಟಿದೆ. ಅದೇ ರೀತಿ ಹಿರಿಯ ಅಧಿಧಿಕಾರಿಗಳ ವರ್ಗಾವಣೆ ಆಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಅಲ್ಲೂ , ಇಲ್ಲೂ ಸಲ್ಲುವರು
ಕೆಲ ಹಿರಿಯ ಅಧಿಧಿಕಾರಿಗಳು ಕಾಂಗ್ರೆಸ್ ಬರಲಿ, ಜೆಡಿಎಸ್ ಬರಲಿ, ಅವೆರಡನ್ನು ಬಿಟ್ಟು ಬಿಜೆಪಿ ಸರಕಾರವೇ ಬರಲಿ. ಎಲ್ಲರ ಜತೆ ಪ್ರೀತಿಪಾತ್ರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಜಾಣ್ಮೆಯಿಂದಲೇ ಅನುಕೂಲ ಆಗುವ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಂಡು ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.
ಗಂಟುಮೂಟೆ
ಅಧಿಧಿಕಾರಿಗಳಲ್ಲಿ ವಿಶೇಷವಾದ ವರ್ಗವೊಂದಿಗೆ ಅದು ಎಲ್ಲಿಗೆ ವರ್ಗಾವಣೆ ಮಾಡಿದರೂ, ತಲೆ ಕೆಡಿಸಿಕೊಳ್ಳದಂತೆ ಗಂಟು, ಮೂಟೆ ಕಟ್ಟಿಕೊಂಡು ಹೊರಟು ಬಿಡುತ್ತಾರೆ. ಪ್ರಮುಖ ಇಲಾಖೆಯಲ್ಲಿದ್ದು, ವರ್ಗಾವಣೆ ಆದ ಇಲಾಖೆಯನ್ನು ಕೇಳುವವರು ಇಲ್ಲವೆಂದಾಗಲೂ ಬೇಸರಪಟ್ಟುಕೊಂಡಾದರೂ ಮರು ಮಾತನಾಡದೆ ತೆರಳುತ್ತಾರೆ.
ಆತಂಕ
ಹಾಸನ ಜಿಲ್ಲೆಗೆ ಬರುವುದೆಂದರೆ ಅಧಿಧಿಕಾರಿ ವಲಯದಲ್ಲಿ ಅದೇನೋ ಒಂದು ರೀತಿ ಆತಂಕ. ರಾಜಕೀಯವಾಗಿ ಪ್ರಾಬಲ್ಯದ ಜಿಲ್ಲೆಯಲ್ಲಿ ಕೆಲಸ ಮಾಡುವುದು ಹೇಗೆ ಎಂದೇ ಇಲ್ಲಿಗೆ ಬರುತ್ತಾರೆ. ಕೆಲ ಅಧಿಧಿಕಾರಿಗಳು ಜಾಣ್ಮೆಯಿಂದ ರಾಜಕಾರಣಿಗಳು, ಜನರಿಗೆ ಪ್ರೀತಿಪಾತ್ರವಾಗಿ ಉಳಿದು ಬಿಡುತ್ತಾರೆ, ಬರುವಾಗ ಆತಂಕ ಪಡುವವರು ಹೋಗುವಾಗ ಒಲ್ಲದ ಮನಸ್ಸಿನಿಂದಲೇ ನಿರ್ಗಮಿಸಿದ ಉದಾಹರಣೆಯೂ ಇದೆ.
ಬುಧವಾರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಧಿಕಾರ ಸ್ವೀಕರಿಸುತ್ತಿದ್ದಂತೆ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಚ್.ಡಿ.ರೇವಣ್ಣ ಅಧಿಧಿಕಾರ ಹಿಡಿಯುವುದು ನಿಶ್ಚಿತ. ಈ ಪ್ರಕ್ರಿಯೆ ಮುಗಿದ ಕೆಲ ದಿನದಲ್ಲೇ ಜಿಲ್ಲಾಧಿಧಿಕಾರಿ, ಎಸ್ಪಿಯಿಂದ ಹಿಡಿದು ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಯುವುದು ಖಚಿತ ಎಂಬ ಲೆಕ್ಕಾಚಾರ ಈಗಾಗಲೇ ಪ್ರಾರಂಭಗೊಂಡಿದೆ.
ಜಿಲ್ಲಾಧಿಧಿಕಾರಿಯಾಗಿ ಡಾ.ಪಿ.ಸಿ.ಜಾಫರ್ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಗೆ ಬಂದಿದ್ದು, ಪ್ರವಾಸಿ ಮಂದಿರದಲ್ಲೇ ತಂಗಿದ್ದಾರೆ. ಅವರನ್ನು ಜಿಲ್ಲೆಯಲ್ಲಿ ಮುಂದುವರಿಸುವ ಸಾಧ್ಯತೆ ಕಡಿಮೆ. ಯಾವುದೇ ಸಂದರ್ಭದಲ್ಲಿಯಾಗಲಿ ವರ್ಗಾವಣೆಗೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಡಿಸಿ ತಮ್ಮ ಕುಟುಂಬ ವರ್ಗವನ್ನು ಇಲ್ಲಿಗೆ ಬರಮಾಡಿಕೊಂಡಿಲ್ಲ.
ಪೊಲೀಸ್ ವರಿಷ್ಠಾಧಿಧಿಕಾರಿ ರಾಹುಲ್ಕುಮಾರ್ ಶಹಪುರವಾಡ್ ಮೂರು ವರ್ಷ ಪೂರೈಸಿದ್ದು, ರೇವಣ್ಣ ಹಾಗೂ ದೇವೇಗೌಡರೊಂದಿಗೆ ಆತ್ಮೀಯತೆಯಿಂದ ಇದ್ದರೂ ಅವಧಿಧಿ ಪೂರ್ಣಗೊಂಡಿರುವ ಕಾರಣ ನೀಡಿ ವರ್ಗಾವಣೆ ಮಾಡುವುದು ನಿಶ್ಚಿತ ಎನ್ನಲಾಗುತ್ತಿದೆ.
ವಿಧಾನಸಭೆ ಚುನಾವಣೆ ವೇಳೆಯಲ್ಲೇ ಅಧಿಕಾರಿ ಡಿಸಿ ವಿರುದ್ಧ ವಾಗ್ದಾಳಿ ನಡೆಸಿದ್ದ ರೇವಣ್ಣ ಸಚಿವರಾಗಿ ಬಂದ ಬಳಿಕ ಈ ಅಧಿಧಿಕಾರಿಯನ್ನು ಎತ್ತಂಗಡಿ ಮಾಡದೆ ಬಿಡಲಾರರು ಎಂಬ ಸಂಗತಿ ಇಲಾಖೆಯಲ್ಲಿ ಚರ್ಚಿತವಾಗುತ್ತಿದೆ.
ತನ್ನ ಹಿಡಿತದ ಲೋಕೋಪಯೋಗಿ ಇಲಾಖೆಯಲ್ಲೂ ಸಾಕಷ್ಟು ಬದಲಾವಣೆ ತರುವ ಮೂಲಕ ಹಲವು ಎಂಜಿನಿಯರ್ಗಳು ಎತ್ತಂಗಡಿಯಾಗಲಿದ್ದು, ಈ ಹಿಂದೆ ಜೆಡಿಎಸ್ ಅಧಿಧಿಕಾರವಧಿಧಿಯಲ್ಲಿ ಇಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡು ಹೊರ ಜಿಲ್ಲೆಗೆ ಹೋದವರು ಪುನಃ ಜಿಲ್ಲೆಗೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಆರ್ಟಿಒ
ಕೆಲ ವರ್ಷದಿಂದ ಪ್ರಭಾರಿ ಆರ್ಟಿಒ ಅವರನ್ನೇ ಪ್ರತಿಷ್ಠಾಪಿಸಿಕೊಂಡು, ಹಿರಿಯ ಇನ್ಸ್ಪೆಕ್ಟರ್ ಅಗಿದ್ದ ಬಾಗೂರು ಮಂಜೇಗೌಡರೇ ಇಲಾಖೆ ನಿಯಂತ್ರಿಸುತ್ತಿದ್ದಾರೆ ಎಂಬ ಆಕ್ರೋಶ, ಅಸಮಾಧಾನವನ್ನು ಹಲವು ಬಾರಿ ರೇವಣ್ಣ ಹೊರ ಹಾಕಿದ್ದರು. ಇದೀಗ ಮಂಜೇಗೌಡರು ಇಲಾಖೆಯಲ್ಲಿ ಇಲ್ಲವಾದರೂ, ಆರ್ಟಿಒ, ಇನ್ಸ್ಪೆಕ್ಟರ್ಗಳ ಸಾಮೂಹಿಕ ವರ್ಗಾವಣೆ ಆಗುವುದಂತೂ ಕಟ್ಟಿಟ್ಟಬುತ್ತಿ ಎಂಬುದು ಹಲವರ ಲೆಕ್ಕಾಚಾರ.
ಇನ್ನು ತಾಲೂಕು ತಹಸೀಲ್ದಾರ್, ಉಪವಿಭಾಗಾಧಿಧಿಕಾರಿ ಹುದ್ದೆಗಳಿಗೆ ಇತ್ತೀಚೆಗಷ್ಟೇ ಹೊಸ ಅಧಿಧಿಕಾರಿಗಳು ಬಂದು ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೂ ವರ್ಗಾವಣೆಯ ಭೀತಿ ಸೃಷ್ಟಿಯಾಗಿದೆ. ನಗರಸಭೆ ಆಯುಕ್ತರು, ಪುರಸಭೆ ಸೇರಿದಂತೆ ಪ್ರಮುಖ ಇಲಾಖೆಯ ಎಲ್ಲ ಹಿರಿಯ ಅಧಿಧಿಕಾರಿಗಳು ತಮ್ಮ ಮಕ್ಕಳನ್ನು ಶಾಲೆ, ಕಾಲೇಜಿಗೆ ಇಲ್ಲಿಯೇ ದಾಖಲಿಸುವುದೇ ಅಥವಾ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದಾರೆ.
ಇದೂ ಒಂದು ಕಾರಣ
ಸರಕಾರ ಯಾವುದೇ ಬರಲಿ, ಸರಕಾರಿ ಅಧಿಧಿಕಾರಿಗಳು ಎಲ್ಲಿ ಹೋದರೂ ಕೆಲಸ ಮಾಡಬೇಕು ಎಂಬ ವಾದ ಸರಿಯಾಗಿದ್ದರೂ, ನಾಲ್ಕೈದು ವರ್ಷದಿಂದ ಇಲ್ಲೇ ಇರುವ ಅಧಿಧಿಕಾರಿಗಳನ್ನು ವರ್ಗ ಮಾಡಲಿ. ಆರು ತಿಂಗಳು, ವರ್ಷದ ಹಿಂದೆ ಬಂದವರನ್ನು ವರ್ಗ ಮಾಡಿದರೆ ಹೇಗೆ ಎಂಬ ವಾದವೂ ಕೇಳಿ ಬರುತ್ತಿದೆ. ಅದೇನೆ ಇರಲಿ ಸರಕಾರ ಬದಲಾದಂತೆ, ಜಿಲ್ಲಾ ಉಸ್ತುವಾರಿ ಸಚಿವರುಗಳು ಬದಲಾದಂತೆ ತಮ್ಮ ಆಡಳಿತಕ್ಕೆ ತಕ್ಕಂತೆ ಅಧಿಧಿಕಾರಿಗಳನ್ನು ಬದಲಿಸುವುದು, ತಮಗೆ ಆತ್ಮೀಯವಾಗಿರುವ ಅಧಿಧಿಕಾರಿಗಳನ್ನು ನಿಯೋಜಿಸಿಕೊಳ್ಳುವುದು ಒಂದು ರೀತಿ ಸಂಪ್ರದಾಯದಂತೆ ಆಗಿಬಿಟ್ಟಿದೆ. ಅದೇ ರೀತಿ ಹಿರಿಯ ಅಧಿಧಿಕಾರಿಗಳ ವರ್ಗಾವಣೆ ಆಗುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಅಲ್ಲೂ , ಇಲ್ಲೂ ಸಲ್ಲುವರು
ಕೆಲ ಹಿರಿಯ ಅಧಿಧಿಕಾರಿಗಳು ಕಾಂಗ್ರೆಸ್ ಬರಲಿ, ಜೆಡಿಎಸ್ ಬರಲಿ, ಅವೆರಡನ್ನು ಬಿಟ್ಟು ಬಿಜೆಪಿ ಸರಕಾರವೇ ಬರಲಿ. ಎಲ್ಲರ ಜತೆ ಪ್ರೀತಿಪಾತ್ರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಜಾಣ್ಮೆಯಿಂದಲೇ ಅನುಕೂಲ ಆಗುವ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಂಡು ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.
ಗಂಟುಮೂಟೆ
ಅಧಿಧಿಕಾರಿಗಳಲ್ಲಿ ವಿಶೇಷವಾದ ವರ್ಗವೊಂದಿಗೆ ಅದು ಎಲ್ಲಿಗೆ ವರ್ಗಾವಣೆ ಮಾಡಿದರೂ, ತಲೆ ಕೆಡಿಸಿಕೊಳ್ಳದಂತೆ ಗಂಟು, ಮೂಟೆ ಕಟ್ಟಿಕೊಂಡು ಹೊರಟು ಬಿಡುತ್ತಾರೆ. ಪ್ರಮುಖ ಇಲಾಖೆಯಲ್ಲಿದ್ದು, ವರ್ಗಾವಣೆ ಆದ ಇಲಾಖೆಯನ್ನು ಕೇಳುವವರು ಇಲ್ಲವೆಂದಾಗಲೂ ಬೇಸರಪಟ್ಟುಕೊಂಡಾದರೂ ಮರು ಮಾತನಾಡದೆ ತೆರಳುತ್ತಾರೆ.
ಆತಂಕ
ಹಾಸನ ಜಿಲ್ಲೆಗೆ ಬರುವುದೆಂದರೆ ಅಧಿಧಿಕಾರಿ ವಲಯದಲ್ಲಿ ಅದೇನೋ ಒಂದು ರೀತಿ ಆತಂಕ. ರಾಜಕೀಯವಾಗಿ ಪ್ರಾಬಲ್ಯದ ಜಿಲ್ಲೆಯಲ್ಲಿ ಕೆಲಸ ಮಾಡುವುದು ಹೇಗೆ ಎಂದೇ ಇಲ್ಲಿಗೆ ಬರುತ್ತಾರೆ. ಕೆಲ ಅಧಿಧಿಕಾರಿಗಳು ಜಾಣ್ಮೆಯಿಂದ ರಾಜಕಾರಣಿಗಳು, ಜನರಿಗೆ ಪ್ರೀತಿಪಾತ್ರವಾಗಿ ಉಳಿದು ಬಿಡುತ್ತಾರೆ, ಬರುವಾಗ ಆತಂಕ ಪಡುವವರು ಹೋಗುವಾಗ ಒಲ್ಲದ ಮನಸ್ಸಿನಿಂದಲೇ ನಿರ್ಗಮಿಸಿದ ಉದಾಹರಣೆಯೂ ಇದೆ.