ಆ್ಯಪ್ನಗರ

ಮುಂದಿನ ಪೀಳಿಗೆಗೆ ಜಲ ಮೂಲ ಉಳಿಸಿ

ಅರಕಲಗೂಡು: ಭೂಮಿ ಮೇಲೆ ಜೀವಿಸುತ್ತಿರುವ ಸಕಲ ಜೀವಿಗಳಿಗೂ ನೀರಿನ ಅವಶ್ಯಕತೆ ಇದ್ದು ಮುಂದಿನ ಪೀಳಿಗೆಯನ್ನು ನೆನಪಿನಲ್ಲಿಟ್ಟುಕೊಂಡು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ತಾಪಂ ಇಒ ಡಾ.ಯಶ್ವಂತ್‌ ತಿಳಿಸಿದರು.

Vijaya Karnataka 23 Mar 2019, 5:00 am
ಅರಕಲಗೂಡು: ಭೂಮಿ ಮೇಲೆ ಜೀವಿಸುತ್ತಿರುವ ಸಕಲ ಜೀವಿಗಳಿಗೂ ನೀರಿನ ಅವಶ್ಯಕತೆ ಇದ್ದು ಮುಂದಿನ ಪೀಳಿಗೆಯನ್ನು ನೆನಪಿನಲ್ಲಿಟ್ಟುಕೊಂಡು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ತಾಪಂ ಇಒ ಡಾ.ಯಶ್ವಂತ್‌ ತಿಳಿಸಿದರು.
Vijaya Karnataka Web arakalgudu world water day taluk panchayat
ಮುಂದಿನ ಪೀಳಿಗೆಗೆ ಜಲ ಮೂಲ ಉಳಿಸಿ


ಪಟ್ಟಣದ ತಾಪಂ ಆವರಣದಲ್ಲಿ ಶುಕ್ರವಾರ ವಿಶ್ವ ಜಲ ದಿನಾಚರಣೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಎರಡು ನದಿಗಳು ಹರಿಯುತ್ತಿದ್ದು ನಿರೀಕ್ಷಿತ ಮಳೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಒಂದರೆಡು ಗ್ರಾಮಗಳನ್ನು ಹೊರತುಪಡಿಸಿದರೆ ಕುರಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ದೂರದ ಜಿಲ್ಲೆಗಳಲ್ಲಿ ಕಂಡು ಬರುವ ನೀರಿನ ತೊಂದರೆಯನ್ನು ಮನಗಂಡು ಸ್ವಾಭಾವಿಕವಾಗಿ ಸಿಗುತ್ತಿರುವ ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ತಾಲೂಕಿನಲ್ಲಿ ಗಿಡನೆಡುವ ಕಾರ್ಯಕ್ರಮ ಮುಂದುವರಿದಿದ್ದು ಸಾರ್ವಜನಿಕ ಸ್ಥಳದಲ್ಲಿ ನೆಟ್ಟಿರುವ ಗಿಡಕ್ಕೆ ನೀರು ಹಾಕಿ ಪೋಷಣೆ ಮಾಡುವ ನಿಟ್ಟಿನಲ್ಲಿ ಜನರು ಮುಂದಾಗಬೇಕಿದೆ. ಅಲ್ಲದೆ ಕೃಷಿ ಜಮೀನು,ಮನೆ ಬಳಿ ಹಣ್ಣು ಹಂಪಲು ಗಿಡಗಳನ್ನು ನೆಟ್ಟು ಪಕ್ಷಿಗಳಿಗೆ ಆಹಾರ ಸಿಗುವಂತೆ ನೆರವಾಗಬೇಕು ಎಂದು ಹೇಳಿದರು.

ಸಿಡಿಪಿಒ ಶಿವಕುಮಾರ್‌ ಮಾತನಾಡಿ, ಇಂದು ವಿಶ್ವ ಜಲ ದಿನದ ಅಂಗವಾಗಿ ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ ನೀರಿನ ಬಳಕೆ,ರಕ್ಷ ಣೆ ಕುರಿತು ಸಿಬ್ಬಂದಿ ಜಾಗೃತಿ ಕಾರ‍್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.

ತಾಪಂ ಅಧಿಕಾರಿಗಳು, ಸಿಬ್ಬಂದಿಗೆ ನೀರಿನ ರಕ್ಷ ಣೆ, ಬಳಕೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ