ಅರಸೀಕೆರೆ: ದೇವೇಗೌಡರ ಸಿದ್ಧಾಂತದಡಿ ಅಭಿವೃದ್ಧಿಗೆ ಶ್ರಮಿಸುವೆ
ಅರಸೀಕೆರೆ: ಮಾಜಿ ಪ್ರಧಾನಿ ದೇವೇಗೌಡರ ಸಿದ್ಧಾಂತದ ಅಡಿಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಆಗಮಿಸಿರುವ ನಾನು ಹಿರಿಯ ಮಾರ್ಗದರ್ಶನದಲ್ಲಿ ಜಿಲ್ಲೆಯ ಜನರ ವಿಶ್ವಾಸಗಳಿಸಿಕೊಳ್ಳುವ ಮೂಲಕ ಸಮಾಜ ಸೇವೆ ಮಾಡಲು ಸದಾ ಸಿದ್ಧನಾಗಿದ್ದೇನೆ
Vijaya Karnataka 22 Mar 2019, 5:00 am
ಅರಸೀಕೆರೆ: ಮಾಜಿ ಪ್ರಧಾನಿ ದೇವೇಗೌಡರ ಸಿದ್ಧಾಂತದ ಅಡಿಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಆಗಮಿಸಿರುವ ನಾನು ಹಿರಿಯ ಮಾರ್ಗದರ್ಶನದಲ್ಲಿ ಜಿಲ್ಲೆಯ ಜನರ ವಿಶ್ವಾಸಗಳಿಸಿಕೊಳ್ಳುವ ಮೂಲಕ ಸಮಾಜ ಸೇವೆ ಮಾಡಲು ಸದಾ ಸಿದ್ಧನಾಗಿದ್ದೇನೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದರು.
ನಗರದ ಜೇನುಕಲ್ಲು ರಸ್ತೆಯಲ್ಲಿರುವ ಸಿಂಧೂ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮ 60 ವರ್ಷಗಳ ರಾಜಕೀಯ ಕ್ಷೇತ್ರವನ್ನು ನನಗೆ ಧಾರೆ ಎರೆದುಕೊಡುವ ಮೂಲಕ ನನ್ನ ತಾತ ದೇವೇಗೌಡರು ಆಶೀರ್ವದಿಸಿ ಕಳುಹಿಸಿದ್ದಾರೆ. ಅವರಂತೆ ಜಿಲ್ಲೆಯ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಸದಾ ಸಿದ್ಧನಿದ್ದು ನಿಮ್ಮ ಬೆಂಬಲ ಬೇಡುತ್ತೇನೆ. ನಮ್ಮ ಕುಟುಂಬ ರಾಜಕೀಯವಾಗಿ ಬೆಳೆಯುವಲ್ಲಿ ಜಿಲ್ಲೆಯ ಜನತೆಯ ಆಶೀರ್ವಾದವನ್ನು ಸದಾ ಸ್ಮರಿಸುತ್ತೇವೆ ಎಂದರು.
ಮಾ.22 ರಂದು ನಾಮಪತ್ರ ಸಲ್ಲಿಸುತ್ತಿದ್ದು ಅರಸೀಕೆರೆ ಕ್ಷೇತ್ರದ ವ್ಯಾಪ್ತಿಯ ಎಲ್ಲ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ನನಗೆ ಆಶೀರ್ವದಿಸಬೇಕು ಎಂದ ಅವರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರವನ್ನು ಕೋರಿದರು.
ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ರೈತರ ಉಳಿವಿಗಾಗಿ ಪ್ರಾಣ ತ್ಯಾಗಮಾಡಲು ಸಿದ್ಧವಿರುವ ಕುಟುಂಬ ದೇವೇಗೌಡರದ್ದು. ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಲು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕಾಯಿತು. ಒಬ್ಬ ರೈತರ ಮಗನಿಗೆ ರೈತರ ಕಷ್ಟಗಳು ಅರಿಯಲು ಸಾಧ್ಯವೇ ಹೊರತು ದಿಲ್ಲಿಯಲ್ಲಿ ಕೂತು ಮಾತನಾಡುವ ನಾಯಕರಿಗಲ್ಲ ಎಂದರು.
ಮೋದಿ ಹಾಗೂ ದೇವೇಗೌಡರ ಕುಟುಂಬ ಈ ಎರಡು ವಿಷಯದ ಮೇಲೆ ಹಾಸನ ಲೋಕಸಭೆ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮತ ಕೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ದೇಶದ ರೈತರಿಗಾಗಿ ಮಾಡಿರುವ ಸಾಧನೆಯಾದರೂ ಏನು? ಕೇವಲ ಚುನಾವಣಾ ದೃಷ್ಟಿಯನ್ನಿಟ್ಟುಕೊಂಡು ರೈತರ ಖಾತೆಗಳಿಗೆ ವರ್ಷಕ್ಕೆ 6 ಸಾವಿರ ನೀಡುತ್ತೇನೆ ಎಂದು ಹೇಳಿರುವ ಮೋದಿಯವರಿಗೆ ರೈತರ ಸಮಸ್ಯೆಗಳನ್ನು ಅರಿಯುವ ಶಕ್ತಿ ಇಲ್ಲ.
ಕೇವಲ ದೇವೇಗೌಡರ ವಿರುದ್ಧ ಕುಟುಂಬ ರಾಜಕಾರಣ ಮಾಡುತ್ತಾ ಇದ್ದಾರೆ ಎಂದು ಹೇಳುವ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಮತದಾರರಿಂದ ಆಶೀರ್ವಾದ ಪಡೆದವರು ಮಾತ್ರ ಜನನಾಯಕರಾಗುತ್ತಾರೆ. ಇದನ್ನ ದೇವೇಗೌಡರ ಕುಟುಂಬವನ್ನು ವಿರೋಧಿಸುವವರು ಅರ್ಥ ಮಾಡಿಕೊಳ್ಳಲಿ. ಪಕ್ಷ ದ ಎಲ್ಲ ಮುಖಂಡರು, ಕಾರ್ಯಕರ್ತರು ಲೋಕಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು ಅರಸೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮುನ್ನಡೆ ದೊರಕಿಸಿ ಕೊಟ್ಟೇ ತೀರುವುದಾಗಿ ಭರವಸೆ ನೀಡಿದರು.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿಯ ಅಧಿಕಾರಾವಧಿಗೆ ಮೇ 23 ಕೊನೆ ದಿನ, ಬಿಜೆಪಿ ಪಕ್ಷ ದಿಂದ ರಾಜ್ಯಕ್ಕೆ ಟೋಪಿ ಹಾಕಿದ್ದಾರೆ ಹೊರತು ಯಾವುದೇ ಯೋಜನೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗುವ ಕಾರ್ಯಕ್ರಮ ಮಾಡಿದ್ದರು. ರಾಜ್ಯದ 186 ತಾಲೂಕುಗಳು ಬರಗಾಲದಿಂದ ತತ್ತರಿಸಿ ಹೋಗಿದ್ದರೂ 1 ರೂ.ನೀಡಿಲ್ಲ. ಸುಳ್ಳು ಆಶ್ವಾಸನೆಗಳನ್ನು ಹಾಗೂ ಭರವಸೆಗಳನ್ನು ನೀಡಿ ಜನತೆಯನ್ನು ಯಾಮಾರಿಸಿದ್ದೇ ಬಿಜೆಪಿ ಸರಕಾರದ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.
ನಗರಸಭೆ ಚುನಾವಣೆಯಲ್ಲಿ ಪಕ್ಷೇತರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮೇಲುಗಿರಿಗೌಡ ಪುಟ್ಟರಾಜು ಹಾಗೂ ಮಧುರ ಹರೀಶ್ ಜೆಡಿಎಸ್ ಸೇರ್ಪಡೆಯಾದರು. ತಾಲೂಕು ಜೆಡೆಎಸ್ ಅಧ್ಯಕ್ಷ ಬಿಳಿ ಚೌಡಯ್ಯ, ಕಾರಾರಯಧ್ಯಕ್ಷ ಅಡವಿಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಎಂ ಸಮೀವುಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್.ಅರುಣ್ಕುಮಾರ್, ಜಿಲ್ಲಾ ವಾಲ್ಮಿಕಿ ಸಮಾಜದ ಅಧ್ಯಕ್ಷ ಗೊಲ್ಲರಹಳ್ಳಿ ಹನುಮಪ್ಪ, ವತ್ಸಲಾ ಶೇಖರಪ್ಪ, ಲೀಲಾ ಧರ್ಮಶೇಖರ್, ಸ್ಥಳೀಯ ಯೋಜನಾ ಪ್ರಾಧಿಕಾರದ ಸದಸ್ಯ ಸುಬ್ರಹ್ಮಣ್ಯ ಬಾಬು, ತಾಪಂ ಅಧ್ಯಕ್ಷೆ ರೂಪ ಗುರುಮೂರ್ತಿ, ಉಪಾಧಕ್ಷೆ ಪ್ರೇಮ ಧರ್ಮಣ್ಣ, ಎಪಿಎಂಸಿ ಅಧ್ಯಕ್ಷ ಕುಮಾರ್, ಮುಖಂಡರಾದ ಗಂಡಸಿ ಗಂಗಾಧರ್, ಹನುಮಪ್ಪ, ಬಂಡೀಗೌಡರ ರಾಜಣ್ಣ, ಶಿವಮೂರ್ತಿ, ಒಕ್ಕಲಿಗ ಸಮಾಜದ ಎ.ಎಸ್.ರಂಗರಾಜು, ಕಾವ್ಯ, ಅನುಸೂಯ, ಗಿರೀಶ್, ಮಂಜು, ಟಿಪ್ಪು, ನಗರಸಭೆ ಸದಸ್ಯರಾದ ಬಿ.ಎನ್. ವಿದ್ಯಾಧರ್, ಗಣೇಶ್, ಸಿಕಂದರ್, ಚಂದ್ರಶೇಖರ್ ಉಪಸ್ಥಿತರಿದ್ದರು.
ನಗರದ ಜೇನುಕಲ್ಲು ರಸ್ತೆಯಲ್ಲಿರುವ ಸಿಂಧೂ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮ 60 ವರ್ಷಗಳ ರಾಜಕೀಯ ಕ್ಷೇತ್ರವನ್ನು ನನಗೆ ಧಾರೆ ಎರೆದುಕೊಡುವ ಮೂಲಕ ನನ್ನ ತಾತ ದೇವೇಗೌಡರು ಆಶೀರ್ವದಿಸಿ ಕಳುಹಿಸಿದ್ದಾರೆ. ಅವರಂತೆ ಜಿಲ್ಲೆಯ ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಸದಾ ಸಿದ್ಧನಿದ್ದು ನಿಮ್ಮ ಬೆಂಬಲ ಬೇಡುತ್ತೇನೆ. ನಮ್ಮ ಕುಟುಂಬ ರಾಜಕೀಯವಾಗಿ ಬೆಳೆಯುವಲ್ಲಿ ಜಿಲ್ಲೆಯ ಜನತೆಯ ಆಶೀರ್ವಾದವನ್ನು ಸದಾ ಸ್ಮರಿಸುತ್ತೇವೆ ಎಂದರು.
ಮಾ.22 ರಂದು ನಾಮಪತ್ರ ಸಲ್ಲಿಸುತ್ತಿದ್ದು ಅರಸೀಕೆರೆ ಕ್ಷೇತ್ರದ ವ್ಯಾಪ್ತಿಯ ಎಲ್ಲ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ನನಗೆ ಆಶೀರ್ವದಿಸಬೇಕು ಎಂದ ಅವರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಹಕಾರವನ್ನು ಕೋರಿದರು.
ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ರೈತರ ಉಳಿವಿಗಾಗಿ ಪ್ರಾಣ ತ್ಯಾಗಮಾಡಲು ಸಿದ್ಧವಿರುವ ಕುಟುಂಬ ದೇವೇಗೌಡರದ್ದು. ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಲು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕಾಯಿತು. ಒಬ್ಬ ರೈತರ ಮಗನಿಗೆ ರೈತರ ಕಷ್ಟಗಳು ಅರಿಯಲು ಸಾಧ್ಯವೇ ಹೊರತು ದಿಲ್ಲಿಯಲ್ಲಿ ಕೂತು ಮಾತನಾಡುವ ನಾಯಕರಿಗಲ್ಲ ಎಂದರು.
ಮೋದಿ ಹಾಗೂ ದೇವೇಗೌಡರ ಕುಟುಂಬ ಈ ಎರಡು ವಿಷಯದ ಮೇಲೆ ಹಾಸನ ಲೋಕಸಭೆ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮತ ಕೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ದೇಶದ ರೈತರಿಗಾಗಿ ಮಾಡಿರುವ ಸಾಧನೆಯಾದರೂ ಏನು? ಕೇವಲ ಚುನಾವಣಾ ದೃಷ್ಟಿಯನ್ನಿಟ್ಟುಕೊಂಡು ರೈತರ ಖಾತೆಗಳಿಗೆ ವರ್ಷಕ್ಕೆ 6 ಸಾವಿರ ನೀಡುತ್ತೇನೆ ಎಂದು ಹೇಳಿರುವ ಮೋದಿಯವರಿಗೆ ರೈತರ ಸಮಸ್ಯೆಗಳನ್ನು ಅರಿಯುವ ಶಕ್ತಿ ಇಲ್ಲ.
ಕೇವಲ ದೇವೇಗೌಡರ ವಿರುದ್ಧ ಕುಟುಂಬ ರಾಜಕಾರಣ ಮಾಡುತ್ತಾ ಇದ್ದಾರೆ ಎಂದು ಹೇಳುವ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಮತದಾರರಿಂದ ಆಶೀರ್ವಾದ ಪಡೆದವರು ಮಾತ್ರ ಜನನಾಯಕರಾಗುತ್ತಾರೆ. ಇದನ್ನ ದೇವೇಗೌಡರ ಕುಟುಂಬವನ್ನು ವಿರೋಧಿಸುವವರು ಅರ್ಥ ಮಾಡಿಕೊಳ್ಳಲಿ. ಪಕ್ಷ ದ ಎಲ್ಲ ಮುಖಂಡರು, ಕಾರ್ಯಕರ್ತರು ಲೋಕಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು ಅರಸೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮುನ್ನಡೆ ದೊರಕಿಸಿ ಕೊಟ್ಟೇ ತೀರುವುದಾಗಿ ಭರವಸೆ ನೀಡಿದರು.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿಯ ಅಧಿಕಾರಾವಧಿಗೆ ಮೇ 23 ಕೊನೆ ದಿನ, ಬಿಜೆಪಿ ಪಕ್ಷ ದಿಂದ ರಾಜ್ಯಕ್ಕೆ ಟೋಪಿ ಹಾಕಿದ್ದಾರೆ ಹೊರತು ಯಾವುದೇ ಯೋಜನೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗುವ ಕಾರ್ಯಕ್ರಮ ಮಾಡಿದ್ದರು. ರಾಜ್ಯದ 186 ತಾಲೂಕುಗಳು ಬರಗಾಲದಿಂದ ತತ್ತರಿಸಿ ಹೋಗಿದ್ದರೂ 1 ರೂ.ನೀಡಿಲ್ಲ. ಸುಳ್ಳು ಆಶ್ವಾಸನೆಗಳನ್ನು ಹಾಗೂ ಭರವಸೆಗಳನ್ನು ನೀಡಿ ಜನತೆಯನ್ನು ಯಾಮಾರಿಸಿದ್ದೇ ಬಿಜೆಪಿ ಸರಕಾರದ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.
ನಗರಸಭೆ ಚುನಾವಣೆಯಲ್ಲಿ ಪಕ್ಷೇತರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮೇಲುಗಿರಿಗೌಡ ಪುಟ್ಟರಾಜು ಹಾಗೂ ಮಧುರ ಹರೀಶ್ ಜೆಡಿಎಸ್ ಸೇರ್ಪಡೆಯಾದರು. ತಾಲೂಕು ಜೆಡೆಎಸ್ ಅಧ್ಯಕ್ಷ ಬಿಳಿ ಚೌಡಯ್ಯ, ಕಾರಾರಯಧ್ಯಕ್ಷ ಅಡವಿಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಎಂ ಸಮೀವುಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್.ಅರುಣ್ಕುಮಾರ್, ಜಿಲ್ಲಾ ವಾಲ್ಮಿಕಿ ಸಮಾಜದ ಅಧ್ಯಕ್ಷ ಗೊಲ್ಲರಹಳ್ಳಿ ಹನುಮಪ್ಪ, ವತ್ಸಲಾ ಶೇಖರಪ್ಪ, ಲೀಲಾ ಧರ್ಮಶೇಖರ್, ಸ್ಥಳೀಯ ಯೋಜನಾ ಪ್ರಾಧಿಕಾರದ ಸದಸ್ಯ ಸುಬ್ರಹ್ಮಣ್ಯ ಬಾಬು, ತಾಪಂ ಅಧ್ಯಕ್ಷೆ ರೂಪ ಗುರುಮೂರ್ತಿ, ಉಪಾಧಕ್ಷೆ ಪ್ರೇಮ ಧರ್ಮಣ್ಣ, ಎಪಿಎಂಸಿ ಅಧ್ಯಕ್ಷ ಕುಮಾರ್, ಮುಖಂಡರಾದ ಗಂಡಸಿ ಗಂಗಾಧರ್, ಹನುಮಪ್ಪ, ಬಂಡೀಗೌಡರ ರಾಜಣ್ಣ, ಶಿವಮೂರ್ತಿ, ಒಕ್ಕಲಿಗ ಸಮಾಜದ ಎ.ಎಸ್.ರಂಗರಾಜು, ಕಾವ್ಯ, ಅನುಸೂಯ, ಗಿರೀಶ್, ಮಂಜು, ಟಿಪ್ಪು, ನಗರಸಭೆ ಸದಸ್ಯರಾದ ಬಿ.ಎನ್. ವಿದ್ಯಾಧರ್, ಗಣೇಶ್, ಸಿಕಂದರ್, ಚಂದ್ರಶೇಖರ್ ಉಪಸ್ಥಿತರಿದ್ದರು.