ಆ್ಯಪ್ನಗರ

ಶಿಕ್ಷಣ ಜತೆಗೆ ಧಾರ್ಮಿಕ, ನೈತಿಕ ಮೌಲ್ಯ ಅಗತ್ಯ

ಅರಸೀಕೆರೆ: ಮಕ್ಕಳಿಗೆ ಶಿಕ್ಷ ಣದ ಜತೆಗೆ ಧಾರ್ಮಿಕ ಹಾಗೂ ನೈತಿಕ ಮೌಲ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಗುರುಗಳು ಮುಂದಾಗಬೇಕು ಎಂದು ಪ್ರಾಂಶುಪಾಲ ವಿಶ್ವನಾಥ್‌ ಬಿ.ಕೋಳಿವಾಡ ಅಭಿಪ್ರಾಯಪಟ್ಟರು.

Vijaya Karnataka 17 Jan 2019, 5:00 am
ಅರಸೀಕೆರೆ: ಮಕ್ಕಳಿಗೆ ಶಿಕ್ಷ ಣದ ಜತೆಗೆ ಧಾರ್ಮಿಕ ಹಾಗೂ ನೈತಿಕ ಮೌಲ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಗುರುಗಳು ಮುಂದಾಗಬೇಕು ಎಂದು ಪ್ರಾಂಶುಪಾಲ ವಿಶ್ವನಾಥ್‌ ಬಿ.ಕೋಳಿವಾಡ ಅಭಿಪ್ರಾಯಪಟ್ಟರು.
Vijaya Karnataka Web arasikere swami vivekanadan birth anniversery
ಶಿಕ್ಷಣ ಜತೆಗೆ ಧಾರ್ಮಿಕ, ನೈತಿಕ ಮೌಲ್ಯ ಅಗತ್ಯ


ನಗರದ ಅನಂತ್‌ ಇಂಟರ್‌ನ್ಯಾಷನಲ್‌ ಶಾಲೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ, ಮಾತೃದೇವೋಭವ, ಪಿತೃದೇವೋಭವ, ಸಂಕ್ರಾಂತಿ ಹಬ್ಬ ಕಾರ‍್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ಗುರುಹಿರಿಯರಿಗೆ ನಮಿಸುವ ಸಂಸ್ಕಾರವನ್ನು ಹೇಳಿಕೊಡುವ ಸ್ಥಿತಿಗೆ ನಮ್ಮ ವ್ಯವಸ್ಥೆ ಬಂದು ನಿಂತಿರುವುದು ವಿಷಾದನೀಯ. ಹಿಂದೆ ಗುರುಹಿರಿಯರೆಂದರೆ ಭಯದ ವಾತಾವರಣವಿತ್ತು. ಅವರು ಹೇಳಿದ್ದನ್ನು ಕೇಳುವ ಮೂಲಕ ಸರಿದಾರಿಯಲ್ಲಿ ನಡೆಯುತ್ತಿದ್ದರು. ಆ ನಿಟ್ಟಿನಲ್ಲಿ ಇಂದಿನ ಯುವ ಸಮುದಾಯ ಸಾಗಬೇಕು ಎಂದು ಹೇಳಿದರು.

ಮೈಸೂರು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಡಾ.ಟಿ.ಸಿ.ಪೂರ್ಣಿಮಾ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಕಲಿಸಲು ಶಿಕ್ಷ ಣ ಕ್ಷೇತ್ರವೂ ದೊಡ್ಡ ವೇದಿಕೆಯಾಗಿದೆ. ಪ್ರತಿ ಶಾಲೆಗಳಲ್ಲಿ ಇಂತಹ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.

ಎಸ್‌.ರಾಮಯ್ಯ ಎಜುಕೇಷನ್‌ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಆರ್‌.ಅನಂತಕುಮಾರ್‌ ಮಾತನಾಡಿ, ವೃದ್ದಾಪ್ಯದಲ್ಲಿ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರುವುದು ನೋವಿನ ಸಂಗತಿ. ಬಾಲ್ಯದಿಂದ ನಿಮ್ಮನ್ನು ಪ್ರೌಢಾವ್ಯವಸ್ಥೆವರೆಗೂ ಎಲ್ಲವನ್ನೂ ನೀಡಿ ಪೋಷಿಸುವ ತಂದೆ ತಾಯಿಯನ್ನು ವೃದ್ಧಾಪ್ಯದಲ್ಲಿ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದು ಎಂದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಶ್ರವಣ ಕುಮಾರ್‌ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಾಸನ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಶಾಲಾ ಪಠ್ಯಕ್ರಮದಲ್ಲಿ ಮಕ್ಕಳ ಕಲಿಕೆಗಾಗಿ ಫ್ರೆಂಚ್‌ ಭಾಷಾ ಕಲಿಕೆಯ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಕಾರ‍್ಯಕ್ರಮದಲ್ಲಿ ಟ್ರಸ್ಟಿ ಪ್ರಶಾಂತ್‌, ಪೋಷಕರು, ವಿದ್ಯಾರ್ಥಿಗಳು, ಶಿಕ್ಷ ಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ