ಆ್ಯಪ್ನಗರ

ಕಳವು ಆರೋಪಿ ಸೆರೆ: ಆಭರಣ ವಶ

ಅಂತರ್‌ ಜಿಲ್ಲಾ ಕಳ್ಳನನ್ನು ಬಂಧಿಸಿರುವ ಪೆನ್‌ಷನ್‌ ಮೊಹಲ್ಲಾ ಠಾಣೆ ಪೊಲೀಸರು ನಗರದ ಶಾಂತಿನಗರ ವ್ಯಾಪ್ತಿಯ ಎರಡು ಪ್ರತ್ಯೇಕ ಮನೆ ಕಳ್ಳತನ ಪ್ರಕರಣ ಭೇದಿಸಿ ಆಭರಣ ವಶಕ್ಕೆ ಪಡೆದಿದ್ದಾರೆ.

Vijaya Karnataka 29 Jun 2019, 5:00 am
ಹಾಸನ: ಅಂತರ್‌ ಜಿಲ್ಲಾ ಕಳ್ಳನನ್ನು ಬಂಧಿಸಿರುವ ಪೆನ್‌ಷನ್‌ ಮೊಹಲ್ಲಾ ಠಾಣೆ ಪೊಲೀಸರು ನಗರದ ಶಾಂತಿನಗರ ವ್ಯಾಪ್ತಿಯ ಎರಡು ಪ್ರತ್ಯೇಕ ಮನೆ ಕಳ್ಳತನ ಪ್ರಕರಣ ಭೇದಿಸಿ ಆಭರಣ ವಶಕ್ಕೆ ಪಡೆದಿದ್ದಾರೆ.
Vijaya Karnataka Web arrested for jewellery theft
ಕಳವು ಆರೋಪಿ ಸೆರೆ: ಆಭರಣ ವಶ


ಜನಾರ್ದನ(32) ಬಂಧಿತ ಆರೋಪಿ. ಅರಸೀಕೆರೆ ತಾಲೂಕು ತಿರುಪತಿಹಳ್ಳಿಯ ಈತನನ್ನು ಸಾಲಗಾಮೆ ರಸ್ತೆ ಸುಬೇದಾರ್‌ ವೃತ್ತದ ಬಳಿ ಶುಕ್ರವಾರ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಶಾಂತಿನಗರದ ಶಿವಕುಮಾರ್‌ ಎಂಬವರ ಮನೆಯ ಬೀರುವಿನಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಆಭರಣವನ್ನು ಜು.11 ರಂದು ಕಳವು ಮಾಡಲಾಗಿತ್ತು. ಇದೇ ಆರೋಪಿ ಜು.12 ರಂದು ಶಾಂತಿನಗರ ಬಡಾವಣೆ ಗಿಡ್ಡಮ್ಮ ಎಂಬವರ ಮನೆಯಲ್ಲಿ ನಾಲ್ಕು ಗ್ರಾಂ ತೂಕದ ಚಿನ್ನದ ಓಲೆಗಳನ್ನು ಕಳವು ಮಾಡಿದ್ದರ ಬಗ್ಗೆ ಪೆನ್‌ಷನ್‌ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಪತ್ತೆಗೆ ಎಸ್‌ಪಿ ಡಾ.ಎ.ಎನ್‌.ಪ್ರಕಾಶ್‌ಗೌಡ, ಎಎಸ್‌ಪಿ ನಂದಿನಿ ಮಾರ್ಗದರ್ಶನದಲ್ಲಿ ಎಸ್‌ಐ ಆರೋಕಿಯಪ್ಪ, ಕೃಷ್ಣಪ್ಪ ಮತ್ತು ಸಿಬ್ಬಂದಿಯನ್ನು ಒಳನ್ನೊಳಗೊಂಡ ತಂಡ ರಚಿಸಲಾಗಿತ್ತು. ಆರೋಪಿ ಈ ಹಿಂದೆ ಶಿವಮೊಗ್ಗ, ಕೊಡಗಿನ ಕುಶಾಲನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ