* ಪ್ರಕಾಶ್ ಜಿ. ಹಾಸನ
ಅರಸೀಕೆರೆ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ದಿನದಿಂದ ದಿನಕ್ಕೆ ಮಗ್ಗುಲು ಬದಲಿಸುತ್ತಿದೆ. ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆಂಬ ವಿಷಯವೇ ಚುನಾವಣಾ ಪೂರ್ವ ಕುತೂಹಲಕ್ಕೆ ಕಾರಣವಾಗಿದೆ. ''ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ,'' ಎಂದು ಶಿವಲಿಂಗೇಗೌಡರು ಆಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಹೀಗಾಗಿ ಅವರ ನಡೆ ಕಾಂಗ್ರೆಸ್ ಕಡೆ ಎಂಬ ಸಂಗತಿಯನ್ನು ದಳಪತಿಗಳು ಖಚಿತಪಡಿಸಿಕೊಂಡಿದ್ದಾರೆ.
ಹ್ಯಾಟ್ರಿಕ್ ಗೆಲುವಿನ ದಾಖಲೆ ಹೊಂದಿರುವ ಶಾಸಕ ಕೆಎಂ ಶಿವಲಿಂಗೇಗೌಡ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿ ಬರದ ನಾಡಿಗೆ ಕುಡಿಯುವ ನೀರು ತಂದ ಆಧುನಿಕ ಭಗೀರಥ ಎಂದು ಜನರಿಂದ ಪ್ರಶಂಸೆಗೆ ಪಾತ್ರರಾದವರು. ಹಾಗಾಗಿ ಕೆಎಂಶಿಯವರನ್ನು ಮಣಿಸುವುದು ಪ್ರತಿಪಕ್ಷಗಳಿಗೆ ಅಷ್ಟು ಸುಲಭದ ಕೆಲಸವಲ್ಲ. ಈ ಕಾರಣದಿಂದಲೇ ಅವರು ಜೆಡಿಎಸ್ ತೊರೆಯದಂತೆ ಎಷ್ಟೇ ಪ್ರಯತ್ನಪಟ್ಟರೂ ಪಕ್ಷದಲ್ಲಿನ ಆಂತರಿಕ ಕಲಹದ ಜತೆ ಪಕ್ಷದ ವರಿಷ್ಠ ಎಚ್ಡಿ ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಸನದಲ್ಲಿ ಈ ಹಿಂದೆ ನಡೆದ 'ಜನತಾ ಜಲಧಾರೆ' ಸಮಾವೇಶದಲ್ಲಿ ಬಹಿರಂಗವಾಗಿಯೇ ಕೆಎಂಶಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಗೌಡರು ಮತ್ತು ಕುಮಾರಣ್ಣನ ಆ ಒಂದು ಹೇಳಿಕೆ ಶಾಸಕ ಕೆಎಂ ಶಿವಲಿಂಗೇಗೌಡರನ್ನು ಪಕ್ಷದಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿತು. ''ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾಹಿತಿ ನೀಡದಂತೆ ಸಭೆ ನಡೆಸುತ್ತಾರೆ. ಈ ವಿಷಯದಲ್ಲಿ ತಾನೇನು ಉತ್ತರಿಸಬೇಕು. ಎಲ್ಲ ಕ್ಷೇತ್ರದವರು ಬರುತ್ತಾರೆ. ನಮ್ಮ ಕ್ಷೇತ್ರದವರ ನಿರ್ಲಕ್ಷ್ಯವೇ? ತಾನೊಬ್ಬನೇ ಸಭೆಗೆ ಬಂದರೆ ತನ್ನ ಬಗ್ಗೆ ಅವರುಗಳು ಏನು ತಿಳಿದುಕೊಳ್ಳಬೇಕು,'' ಎಂದು ಬಹಿರಂಗವಾಗಿಯೇ ಶಿವಲಿಂಗೇಗೌಡರು ಅಸಮಾಧಾನ ಹೊರಹಾಕಿದ್ದರು.
ರಾಜಕೀಯ ವೈರಿ-ಮಿತ್ರ!
ದೇವೇಗೌಡ ಮತ್ತು ಕುಮಾರಸ್ವಾಮಿ ಪಾಲಿನ ರಾಜಕೀಯ ವೈರಿ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಸದನದಲ್ಲೇ ಗುಣಗಾನ ಮಾಡಿದ್ದ ಶಾಸಕ ಶಿವಲಿಂಗೇಗೌಡರು ಜೆಡಿಎಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗೆ ಜೆಡಿಎಸ್ನಿಂದ ದೂರವಾಗುತ್ತಲೇ ಕಾಂಗ್ರೆಸ್ಗೆ ಹತ್ತಿರವಾಗುತ್ತಾ ಹೋದರು. ಆದರೆ, ಅವಧಿಗೆ ಮುನ್ನ ಕಾಂಗ್ರೆಸ್ಗೆ ಸೇರ್ಪಡೆಗೊಂಡರೆ ಶಾಸಕ ಸ್ಥಾನಕ್ಕೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ಜಾಣ್ಮೆಯಿಂದ ಹೆಜ್ಜೆ ಇರಿಸುತ್ತಿದ್ದಾರೆ ಎನ್ನಲಾಗಿದೆ.
ಶಾಸಕ ಕೆಎಂ ಶಿವಲಿಂಗೇಗೌಡರು ಮನಸ್ಸು ಮಾಡಿದರೆ ಜೆಡಿಎಸ್ನಲ್ಲೇ ಮುಂದುವರೆಯಬಹುದಾಗಿತ್ತಾದರೂ, ಒಡೆದ ಮನಸ್ಸು ಒಂದುಗೂಡುವುದು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಈಗಾಗಲೇ ಬಂದಿರುವ ಕಾರಣ ಕಾಂಗ್ರೆಸ್ ಕೈ ಹಿಡಿಯುವುದು ಬಹುತೇಕ ನಿಶ್ಚಿತವಾದಂತಾಗಿದೆ ಎಂದು ಅವರು ಆಪ್ತ ಮೂಲಗಳು ತಿಳಿಸಿವೆ.
ಭಾನುವಾರ ಜೆಡಿಎಸ್ ಸಭೆ, ಅಂದೇ ಅಭ್ಯರ್ಥಿ ಘೋಷಣೆ?
ಶಾಸಕ ಕೆಎಂ ಶಿವಲಿಂಗೇಗೌಡರು ಪಕ್ಷ ತೊರೆಯುವುದನ್ನು ಖಚಿತಪಡಿಸಿಕೊಂಡಿರುವ ಜೆಡಿಎಸ್, ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಮುಂದಾಗಿ ಫೆ.9 ರಂದು ಅರಸೀಕೆರೆಯಲ್ಲಿ ಪಕ್ಷದ ಕಚೇರಿಯನ್ನು ತೆರೆದಿದೆ. ಅರಸೀಕೆರೆಯಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತಿತರ ಮುಖಂಡರು ಫೆ.12 ರಂದು ಕಾರ್ಯಕರ್ತರ ಸಭೆ ನಡೆಸಿ, ಅಂದೇ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಾಸಕ ಕೆಎಂ ಶಿವಲಿಂಗೇಗೌಡರಿಗೆ ಬದಲಾಗಿ ಸಂಭಾವ್ಯ ಅಭ್ಯರ್ಥಿ ಬಾಣಾವರದ ಅಶೋಕ್ ಸಕ್ರಿಯರಾಗಿದ್ದು, ಅನ್ಯಪಕ್ಷದಲ್ಲಿ ಸಕ್ರಿಯವಾಗಿರುವವರ ಮೇಲೂ ಜೆಡಿಎಸ್ ದೃಷ್ಟಿ ನೆಟ್ಟಿದೆ.
ಸಂಸದರ ನಡೆ ಕುತೂಹಲ
ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರವಧಿ ಇನ್ನು ಒಂದು ವರ್ಷ ಇದೆ. ಹಾಗಾಗಿ ಅವರನ್ನೇ ಅರಸೀಕೆರೆ ಕ್ಷೇತ್ರದಿಂದ ಕಣಕ್ಕಿಳಿಸಿದರೆ ಹೇಗೆ ಎಂಬ ಚಿಂತನೆಯೊಂದು ಪಕ್ಷದಲ್ಲಿ ಕಂಡುಬರುತ್ತಿದೆ. ಜೆಡಿಎಸ್ನಿಂದ ಶಾಸಕ ಕೆಎಂ ಶಿವಲಿಂಗೇಗೌಡರನ್ನು ಕಟ್ಟಿಹಾಕುವಂತಹ ಪ್ರಬಲ ಕ್ಯಾಂಡಿಡೇಟ್ ಕಂಡುಬರುತ್ತಿಲ್ಲ. ಹೀಗಾಗಿ ಪ್ರಜ್ವಲ್ ಕಣಕ್ಕಳಿದರೂ ಆಶ್ಚರ್ಯವಿಲ್ಲ ಎಂಬ ಸಂಗತಿ ಮುನ್ನೆಲೆಗೆ ಬಂದಿದ್ದರೂ, ಫೆ 12ರ ಬಳಿಕವೇ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ.
ಅರಸೀಕೆರೆ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ದಿನದಿಂದ ದಿನಕ್ಕೆ ಮಗ್ಗುಲು ಬದಲಿಸುತ್ತಿದೆ. ಕ್ಷೇತ್ರದ ಶಾಸಕ ಕೆಎಂ ಶಿವಲಿಂಗೇಗೌಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆಂಬ ವಿಷಯವೇ ಚುನಾವಣಾ ಪೂರ್ವ ಕುತೂಹಲಕ್ಕೆ ಕಾರಣವಾಗಿದೆ.
ಹ್ಯಾಟ್ರಿಕ್ ಗೆಲುವಿನ ದಾಖಲೆ ಹೊಂದಿರುವ ಶಾಸಕ ಕೆಎಂ ಶಿವಲಿಂಗೇಗೌಡ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿ ಬರದ ನಾಡಿಗೆ ಕುಡಿಯುವ ನೀರು ತಂದ ಆಧುನಿಕ ಭಗೀರಥ ಎಂದು ಜನರಿಂದ ಪ್ರಶಂಸೆಗೆ ಪಾತ್ರರಾದವರು. ಹಾಗಾಗಿ ಕೆಎಂಶಿಯವರನ್ನು ಮಣಿಸುವುದು ಪ್ರತಿಪಕ್ಷಗಳಿಗೆ ಅಷ್ಟು ಸುಲಭದ ಕೆಲಸವಲ್ಲ. ಈ ಕಾರಣದಿಂದಲೇ ಅವರು ಜೆಡಿಎಸ್ ತೊರೆಯದಂತೆ ಎಷ್ಟೇ ಪ್ರಯತ್ನಪಟ್ಟರೂ ಪಕ್ಷದಲ್ಲಿನ ಆಂತರಿಕ ಕಲಹದ ಜತೆ ಪಕ್ಷದ ವರಿಷ್ಠ ಎಚ್ಡಿ ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಸನದಲ್ಲಿ ಈ ಹಿಂದೆ ನಡೆದ 'ಜನತಾ ಜಲಧಾರೆ' ಸಮಾವೇಶದಲ್ಲಿ ಬಹಿರಂಗವಾಗಿಯೇ ಕೆಎಂಶಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಗೌಡರು ಮತ್ತು ಕುಮಾರಣ್ಣನ ಆ ಒಂದು ಹೇಳಿಕೆ ಶಾಸಕ ಕೆಎಂ ಶಿವಲಿಂಗೇಗೌಡರನ್ನು ಪಕ್ಷದಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿತು. ''ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾಹಿತಿ ನೀಡದಂತೆ ಸಭೆ ನಡೆಸುತ್ತಾರೆ. ಈ ವಿಷಯದಲ್ಲಿ ತಾನೇನು ಉತ್ತರಿಸಬೇಕು. ಎಲ್ಲ ಕ್ಷೇತ್ರದವರು ಬರುತ್ತಾರೆ. ನಮ್ಮ ಕ್ಷೇತ್ರದವರ ನಿರ್ಲಕ್ಷ್ಯವೇ? ತಾನೊಬ್ಬನೇ ಸಭೆಗೆ ಬಂದರೆ ತನ್ನ ಬಗ್ಗೆ ಅವರುಗಳು ಏನು ತಿಳಿದುಕೊಳ್ಳಬೇಕು,'' ಎಂದು ಬಹಿರಂಗವಾಗಿಯೇ ಶಿವಲಿಂಗೇಗೌಡರು ಅಸಮಾಧಾನ ಹೊರಹಾಕಿದ್ದರು.
ರಾಜಕೀಯ ವೈರಿ-ಮಿತ್ರ!
ದೇವೇಗೌಡ ಮತ್ತು ಕುಮಾರಸ್ವಾಮಿ ಪಾಲಿನ ರಾಜಕೀಯ ವೈರಿ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಸದನದಲ್ಲೇ ಗುಣಗಾನ ಮಾಡಿದ್ದ ಶಾಸಕ ಶಿವಲಿಂಗೇಗೌಡರು ಜೆಡಿಎಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗೆ ಜೆಡಿಎಸ್ನಿಂದ ದೂರವಾಗುತ್ತಲೇ ಕಾಂಗ್ರೆಸ್ಗೆ ಹತ್ತಿರವಾಗುತ್ತಾ ಹೋದರು. ಆದರೆ, ಅವಧಿಗೆ ಮುನ್ನ ಕಾಂಗ್ರೆಸ್ಗೆ ಸೇರ್ಪಡೆಗೊಂಡರೆ ಶಾಸಕ ಸ್ಥಾನಕ್ಕೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ಜಾಣ್ಮೆಯಿಂದ ಹೆಜ್ಜೆ ಇರಿಸುತ್ತಿದ್ದಾರೆ ಎನ್ನಲಾಗಿದೆ.
ಶಾಸಕ ಕೆಎಂ ಶಿವಲಿಂಗೇಗೌಡರು ಮನಸ್ಸು ಮಾಡಿದರೆ ಜೆಡಿಎಸ್ನಲ್ಲೇ ಮುಂದುವರೆಯಬಹುದಾಗಿತ್ತಾದರೂ, ಒಡೆದ ಮನಸ್ಸು ಒಂದುಗೂಡುವುದು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಈಗಾಗಲೇ ಬಂದಿರುವ ಕಾರಣ ಕಾಂಗ್ರೆಸ್ ಕೈ ಹಿಡಿಯುವುದು ಬಹುತೇಕ ನಿಶ್ಚಿತವಾದಂತಾಗಿದೆ ಎಂದು ಅವರು ಆಪ್ತ ಮೂಲಗಳು ತಿಳಿಸಿವೆ.
ಭಾನುವಾರ ಜೆಡಿಎಸ್ ಸಭೆ, ಅಂದೇ ಅಭ್ಯರ್ಥಿ ಘೋಷಣೆ?
ಶಾಸಕ ಕೆಎಂ ಶಿವಲಿಂಗೇಗೌಡರು ಪಕ್ಷ ತೊರೆಯುವುದನ್ನು ಖಚಿತಪಡಿಸಿಕೊಂಡಿರುವ ಜೆಡಿಎಸ್, ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಮುಂದಾಗಿ ಫೆ.9 ರಂದು ಅರಸೀಕೆರೆಯಲ್ಲಿ ಪಕ್ಷದ ಕಚೇರಿಯನ್ನು ತೆರೆದಿದೆ. ಅರಸೀಕೆರೆಯಲ್ಲಿ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತಿತರ ಮುಖಂಡರು ಫೆ.12 ರಂದು ಕಾರ್ಯಕರ್ತರ ಸಭೆ ನಡೆಸಿ, ಅಂದೇ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶಾಸಕ ಕೆಎಂ ಶಿವಲಿಂಗೇಗೌಡರಿಗೆ ಬದಲಾಗಿ ಸಂಭಾವ್ಯ ಅಭ್ಯರ್ಥಿ ಬಾಣಾವರದ ಅಶೋಕ್ ಸಕ್ರಿಯರಾಗಿದ್ದು, ಅನ್ಯಪಕ್ಷದಲ್ಲಿ ಸಕ್ರಿಯವಾಗಿರುವವರ ಮೇಲೂ ಜೆಡಿಎಸ್ ದೃಷ್ಟಿ ನೆಟ್ಟಿದೆ.
ಯಾರು ಬಂದು ಚುನಾವಣೆಯಲ್ಲಿನಿಂತರೂ ನಾನು ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ 50 ಸಾವಿರ ಲೀಡ್ನಲ್ಲಿ ಗೆಲ್ಲುತ್ತೇನೆ. ಜನ ದೊಡ್ಡವರ ಮುಖ ನೋಡಿ ವೋಟ್ ಹಾಕಲ್ಲ.
ಸಂಸದರ ನಡೆ ಕುತೂಹಲ
ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರವಧಿ ಇನ್ನು ಒಂದು ವರ್ಷ ಇದೆ. ಹಾಗಾಗಿ ಅವರನ್ನೇ ಅರಸೀಕೆರೆ ಕ್ಷೇತ್ರದಿಂದ ಕಣಕ್ಕಿಳಿಸಿದರೆ ಹೇಗೆ ಎಂಬ ಚಿಂತನೆಯೊಂದು ಪಕ್ಷದಲ್ಲಿ ಕಂಡುಬರುತ್ತಿದೆ. ಜೆಡಿಎಸ್ನಿಂದ ಶಾಸಕ ಕೆಎಂ ಶಿವಲಿಂಗೇಗೌಡರನ್ನು ಕಟ್ಟಿಹಾಕುವಂತಹ ಪ್ರಬಲ ಕ್ಯಾಂಡಿಡೇಟ್ ಕಂಡುಬರುತ್ತಿಲ್ಲ. ಹೀಗಾಗಿ ಪ್ರಜ್ವಲ್ ಕಣಕ್ಕಳಿದರೂ ಆಶ್ಚರ್ಯವಿಲ್ಲ ಎಂಬ ಸಂಗತಿ ಮುನ್ನೆಲೆಗೆ ಬಂದಿದ್ದರೂ, ಫೆ 12ರ ಬಳಿಕವೇ ಸ್ಪಷ್ಟ ಚಿತ್ರಣ ದೊರೆಯುವ ಸಾಧ್ಯತೆ ಇದೆ.
60 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಬಸ್ ಪಂಕ್ಚರ್ ಆಗಿದೆ. ಓಲ್ಡ್ ಬಸ್ ಏರಿದವರು ಗುರಿಮುಟ್ಟಲ್ಲ.