ಆ್ಯಪ್ನಗರ

ಮಾನ ಹರಾಜು: ಫೇಸ್‌ಬುಕ್‌ ಫ್ರೆಂಡ್‌ ವಿರುದ್ಧ ದೂರು

ಪತಿಗೆ ಅಧ್ಯಾತ್ಮ ಚಿಂತನೆ, ಪತ್ನಿಗೆ ಪ್ರಿಯಕರನ ಆಕರ್ಷಣೆ... ಈ ಸಂಗತಿ ಬಹಿರಂಗಗೊಂಡು ಅನೈತಿಕ ಸಂಬಂಧಕ್ಕೆ ಬ್ರೇಕ್‌ ಬಿದ್ದಿದ್ದೇ ತಡ, ಆರೋಪಿಯು ಇದಕ್ಕೆ ಕಾರಣವಾದ ಆಕೆಯ ಕುಟುಂಬದ ಮಹಿಳೆಯರು, ಅವರ ಹೆಣ್ಣುಮಕ್ಕಳ ಫೋಟೊಗಳನ್ನು ಅಶ್ಲೀಲವಾಗಿ ಫೇಸ್‌ಬುಕ್‌ಗೆ ಹಾಕಿ ಮಾನ, ಮರ್ಯಾದೆಗೆ ಕುತ್ತು ತರುವ ಹಾಗೂ ನೆಮ್ಮದಿ ಕೆಡಿಸುವ ದುಷ್ಕೃತ್ಯಕ್ಕೆ ಕೈ ಹಾಕಿದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

Vijaya Karnataka 10 Jul 2019, 7:28 am
ಹಾಸನ: ಪತಿಗೆ ಅಧ್ಯಾತ್ಮ ಚಿಂತನೆ, ಪತ್ನಿಗೆ ಪ್ರಿಯಕರನ ಆಕರ್ಷಣೆ... ಈ ಸಂಗತಿ ಬಹಿರಂಗಗೊಂಡು ಅನೈತಿಕ ಸಂಬಂಧಕ್ಕೆ ಬ್ರೇಕ್‌ ಬಿದ್ದಿದ್ದೇ ತಡ, ಆರೋಪಿಯು ಇದಕ್ಕೆ ಕಾರಣವಾದ ಆಕೆಯ ಕುಟುಂಬದ ಮಹಿಳೆಯರು, ಅವರ ಹೆಣ್ಣುಮಕ್ಕಳ ಫೋಟೊಗಳನ್ನು ಅಶ್ಲೀಲವಾಗಿ ಫೇಸ್‌ಬುಕ್‌ಗೆ ಹಾಕಿ ಮಾನ, ಮರ್ಯಾದೆಗೆ ಕುತ್ತು ತರುವ ಹಾಗೂ ನೆಮ್ಮದಿ ಕೆಡಿಸುವ ದುಷ್ಕೃತ್ಯಕ್ಕೆ ಕೈ ಹಾಕಿದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.
Vijaya Karnataka Web Facebook


ಜಿಲ್ಲೆಯ ಗ್ರಾಮವೊಂದರ ಮಹಿಳೆಗೆ ಮದುವೆಯಾಗಿ 12 ವರ್ಷ ಕಳೆದಿದೆ. ಈಕೆಯ ಪತಿ ಸರಕಾರಿ ನೌಕರನೂ ಆಗಿದ್ದು, ಆಧ್ಯಾತ್ಮಿಕ ಚಟುವಟಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಪತಿ ಬೆಳಗ್ಗೆ ಮನೆಬಿಟ್ಟರೆ ಬರುವುದು ಸಂಜೆ, ಈ ಮಧ್ಯೆ ಈಕೆಗೆ ಫೇಸ್‌ಬುಕ್‌ನಲ್ಲಿ ಪರಿಚಿತನಾದ ವ್ಯಕ್ತಿ ತನ್ನ ಮೋಡಿಯ ಮಾತುಗಳಿಂದ ಅನೈತಿಕ ಸಂಬಂಧ ಬೆಳೆಸುವಷ್ಟರ ಮಟ್ಟಿಗೆ ಒಲವು ಗಳಿಸಿಕೊಂಡಿದ್ದ ಎನ್ನಲಾಗಿದೆ. ಕದ್ದುಮುಚ್ಚಿ ನಡೆಯುತ್ತಿದ್ದ ಅನೈತಿಕ ಸಂಬಂಧ, ಪ್ರವಾಸಕ್ಕೆ ಹೋಗುವಷ್ಟರ ಮಟ್ಟಿಗೆ ಮುಂದುವರೆದಿತ್ತು. ಈ ಸಂಗತಿ ಬಹಿರಂಗಗೊಂಡಿದ್ದೇ ತಡ ಕುಟುಂಬದ ಹಿರಿಯರು ಸೇರಿ ಮಹಿಳೆಗೆ ಬುದ್ಧಿಮಾತು ಹೇಳಿ ಅನೈತಿಕ ಸಂಬಂಧಕ್ಕೆ ಬ್ರೇಕ್‌ ಹಾಕಿದರು.

ಜಾಲತಾಣದಲ್ಲಿ ಅಶ್ಲೀಲ ಫೋಟೋ: ತನ್ನ ಅನೈತಿಕ ಸಂಬಂಧಕ್ಕೆ ಬ್ರೇಕ್‌ ಬಿದ್ದಿದ್ದೇ ತಡ, ಪ್ರಿಯತಮೆಯ ಮೊಬೈಲ್‌ನಿಂದ ತನ್ನ ಮೊಬೈಲ್‌ಗೆ ಆಕೆಗೆ ಗೊತ್ತಿಲ್ಲದಂತೆ ಈ ಹಿಂದೆ ಡೌನ್‌ಲೋಡ್‌ ಮಾಡಿಕೊಂಡಿದ್ದ ಪ್ರಿಯತಮೆಯ ಕುಟುಂಬ ಸದಸ್ಯರ ಮಹಿಳೆಯರು, ಹೆಣ್ಣುಮಕ್ಕಳ ಫೋಟೊಗಳನ್ನು ಆರೋಪಿ ಇದೀಗ ಅಶ್ಲೀಲವಾಗಿ ಚಿತ್ರಿಸಿ ಎಡಿಟ್‌ ಮಾಡಿ ಫೇಸ್‌ಬುಕ್‌ನಲ್ಲಿ ಹಾಕುವ ಮೂಲಕ ಮಾನ ಹರಾಜು ಹಾಕುವ ದುಷ್ಕೃತ್ಯಕ್ಕೆ ಇಳಿದಿದ್ದಾನೆ ಎಂದು ಕುಟುಂಬ ವರ್ಗದವರು ನೋವು ತೋಡಿಕೊಂಡಿದ್ದಾರೆ.

ಆತ್ಮಹತ್ಯೆ ಯತ್ನ: ಅನೈತಿಕ ಸಂಬಂಧ ಬೆಳಕಿಗೆ ಬರುತ್ತಿದ್ದಂತೆ ಗೃಹಿಣಿ ನಿದ್ರೆಮಾತ್ರೆ ಸೇವಿಸಿ ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದಳು ಎಂದು ಕುಟುಂಬ ವರ್ಗ ತಿಳಿಸಿದೆ. ತಾನು ಮಾಡಿದ್ದು ತಪ್ಪು ಎಂಬ ಅರಿವಾಗಿದೆ ಎಂದು ಎಲ್ಲರೆದುರು ತಪ್ಪೊಪ್ಪಿಕೊಂಡಿದ್ದಾಳೆ. ಆದರೆ ಪ್ರಿಯಕರ ಎಲ್ಲರಿಗೂ ಬುದ್ಧಿ ಕಲಿಸುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಫೋಟೊಗಳನ್ನು ಅಶ್ಲೀಲವಾಗಿಸಿ, ಗುರುತು, ಪರಿಚಯವೇ ಇಲ್ಲದ ವ್ಯಕ್ತಿಗಳೊಂದಿಗೆ ಜೋಡಿಸಿ ಪ್ರತಿನಿತ್ಯ ಅಪ್‌ಲೋಡ್‌ ಮಾಡುತ್ತಿರುವುದು ಕುಟುಂಬ ಸದಸ್ಯರ ನೆಮ್ಮದಿ, ನಿದ್ರೆ ಹಾಳು ಮಾಡಿದೆ.

ದೂರು ದಾಖಲು: ಈ ಸಂಬಂಧ ನಗರದ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಐ ಸತೀಶ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ