ಆ್ಯಪ್ನಗರ

ಹಾಸನ: ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ

ಬೆಂಗಳೂರಿನ ಶಾಂತಿನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಲಿಂಗೇಗೌಡ ಹಿರೀಸಾವೆ ಹೋಬಳಿಯ ಕಮರವಳ್ಳಿಯಲ್ಲಿ 12 ಎಕರೆ ಜಮೀನು ಹೊಂದಿದ್ದರು. ಹೀಗಾಗಿ ಗ್ರಾಮಕ್ಕೆ ಸಂಸಾರ ಸಮೇತ ಇಲ್ಲಿಗೆ ಬರುತ್ತಿದ್ದರು.

Vijaya Karnataka Web 9 Dec 2020, 7:12 pm
ಹಾಸನ/ ಹಿರೀಸಾವೆ: ಹಳೆಯ ವೈಷ್ಯಮ್ಯದಿಂದ ಭೀಕರವಾಗಿ ಇರಿತಕ್ಕೆ ಒಳಗಾಗಿದ್ದ ಬೆಂಗಳೂರಿನ ರೌಡಿಶೀಟರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಯಾಗಿರುವ ಪ್ರಕರಣ ಹಿರೀಸಾವೆ ಹೋಬಳಿಯ ಕಮರವಳ್ಳಿಯಲ್ಲಿ ನಡೆದಿದೆ.
Vijaya Karnataka Web ಕೊಲೆ
ಕೊಲೆ


ಬೆಂಗಳೂರಿನ ಶಾಂತಿನಗರದ ನಿವಾಸಿ, ಹಿರೀಸಾವೆ ಹೋಬಳಿಯ ಕಮರವಳ್ಳಿ ಗ್ರಾಮದ ದೊಡ್ಡೇಗೌಡ ಎಂಬುವವರ ಪುತ್ರ ಡಿ.ಲಿಂಗರಾಜು ಉ.ಲಿಂಗೇಗೌಡ (43) ಮೃತ ವ್ಯಕ್ತಿ.

ಬೆಂಗಳೂರಿನ ಶಾಂತಿನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಲಿಂಗೇಗೌಡ ಹಿರೀಸಾವೆ ಹೋಬಳಿಯ ಕಮರವಳ್ಳಿಯಲ್ಲಿ 12 ಎಕರೆ ಜಮೀನು ಹೊಂದಿದ್ದರು. ಹೀಗಾಗಿ ಗ್ರಾಮಕ್ಕೆ ಸಂಸಾರ ಸಮೇತ ಇಲ್ಲಿಗೆ ಬರುತ್ತಿದ್ದರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಂಸಾರ ಸಮೇತ ಜಮೀನಿನ ತೋಟದ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಮಕ್ಕಳಿಗೆ ಆನ್‌ಲೈನ್ ತರಗತಿ ಪ್ರಾರಂಭವಾಗಿದ್ದರಿಂದ ಪತ್ನಿ ಮತ್ತು ಮಕ್ಕಳು ಬೆಂಗಳೂರಿಗೆ ಹೋಗಿದ್ದು, ಇವರೊಬ್ಬರೇ ಮನೆಯಲ್ಲಿದ್ದರು.

ತಿಂಗಳ ಹಿಂದೆ ನಾಲ್ವರು ಅಪರಿಚಿತರು ಇವರ ತೋಟದ ಮನೆಗೆ ಬಂದಿದ್ದು, ಇಲ್ಲಿಯೇ ಊಟ ತಿಂಡಿ ಮಾಡಿ ಹೋಗಿದ್ದರು. 8ರಂದು ಮೃತರ ಅಣ್ಣನ ಮಗ ಸುದರ್ಶನ ಮತ್ತು ಮೃತ ಡಿ. ಲಿಂಗೇಗೌಡ ಇಬ್ಬರೂ ರಾತ್ರಿ ಊಟ ಮಾಡಿ 7.30ರವರೆಗೆ ಟಿವಿ ನೋಡಿಕೊಂಡಿದ್ದು ಮಲಗಿದ್ದರು.

ಸುದರ್ಶನ್ ಮಹಡಿ ಮೇಲೆ ಮಲಗಲು ತೆರಳಿದ್ದರು. ರಾತ್ರಿ 9.45ರ ಸಮಯದಲ್ಲಿ ಮನೆಯ ಬಾಗಿಲನ್ನು ಯಾರೋ ಜೋರಾಗಿ ಹೊಡೆದಂತೆ ಶಬ್ಧವಾಗಿದ್ದು, ಸುದರ್ಶನ ಮನೆಯ ಹೊರಗೆ ಬಂದರು. ಮನೆಯ ಮುಂದಿನ ರಸ್ತೆಯಲ್ಲಿ ಯಾರೋ ಕಾರಿನಲ್ಲಿ ಕೂಗಿಕೊಂಡು ಹೋದ ಶಬ್ದ ಕೇಳಿಸಿತು. ಅದೇ ಸಮಯಕ್ಕೆ ಯಾರೋ ಇಬ್ಬರು ಮೋಟಾರ್ ಬೈಕಿನಲ್ಲಿ ಹೆಲ್ಮೆಟ್ ಹಾಕಿದ್ದ ಇಬ್ಬರು ಮಚ್ಚಿನಿಂದ ಸುದರ್ಶನ್ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಮನೆಯೊಳಗೆ ಹೋಗಿ ನೀಡಿದಾಗ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ