ಆ್ಯಪ್ನಗರ

ಸಾಲ ಮರುಪಾವತಿಗೆ ಬ್ಯಾಂಕ್‌ ನೋಟಿಸ್‌: ರೈತರ ಪ್ರತಿಭಟನೆ

ಬ್ಯಾಂಕಿನಿಂದ ಪಡೆದ ಸಾಲವನ್ನು ಹಿಂತಿರುಗಿಸುವಂತೆ ರೈತರಿಗೆ ಬ್ಯಾಂಕ್‌ಗಳು ನೋಟಿಸ್‌ ನೀಡಿರುವುದನ್ನು ಖಂಡಿಸಿ ಹಾಗೂ ಸರಕಾರದ ಕ್ರಮ ವಿರೋಧಿಸಿ ನಗರದ ಎಪಿಎಂಸಿ ಕಚೇರಿ ಮುಂದೆ ನೋಟಿಸ್‌ ಪ್ರತಿಯನ್ನು ಸುಟ್ಟು ರೈತ ಸಂಘದ ಕಾರ‍್ಯಕರ್ತರು ಪ್ರತಿಭಟನೆ ನಡೆಸಿದರು.

Vijaya Karnataka 18 Jun 2019, 5:00 am
ಹಾಸನ : ಬ್ಯಾಂಕಿನಿಂದ ಪಡೆದ ಸಾಲವನ್ನು ಹಿಂತಿರುಗಿಸುವಂತೆ ರೈತರಿಗೆ ಬ್ಯಾಂಕ್‌ಗಳು ನೋಟಿಸ್‌ ನೀಡಿರುವುದನ್ನು ಖಂಡಿಸಿ ಹಾಗೂ ಸರಕಾರದ ಕ್ರಮ ವಿರೋಧಿಸಿ ನಗರದ ಎಪಿಎಂಸಿ ಕಚೇರಿ ಮುಂದೆ ನೋಟಿಸ್‌ ಪ್ರತಿಯನ್ನು ಸುಟ್ಟು ರೈತ ಸಂಘದ ಕಾರ‍್ಯಕರ್ತರು ಪ್ರತಿಭಟನೆ ನಡೆಸಿದರು.
Vijaya Karnataka Web HSN-HSN17N11


''ಸಾಲಮನ್ನಾ ಎಂದು ಸರಕಾರ ಹೇಳುತ್ತಿದ್ದು, ಅರಸೀಕೆರೆ ತಾಲೂಕಿನಲ್ಲಿ ಕೆನರಾ ಬ್ಯಾಂಕಿನ ಅಧಿಕಾರಿಗಳು ನ್ಯಾಯಾಲಯದ ಮೂಲಕ ರೈತರಿಗೆ ನೋಟಿಸ್‌ ಜಾರಿ ಮಾಡಿ, ಹಾಜರಾಗುವಂತೆ ಬೆದರಿಕೆ ಹಾಕುತ್ತಿದ್ದಾರೆ. ಸರಕಾರದ ಹೇಳಿಕೆಗೂ, ತಮಗೂ ಸಂಬಂಧವೇ ಇಲ್ಲದಂತೆ ಬ್ಯಾಂಕ್‌ನವರು ವರ್ತಿಸುತ್ತಿದ್ದಾರೆ,'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಕೋರ್ಟಿಗೆ ನಾವು ಯಾರು ಹಾಜರಾಗುವುದಿಲ್ಲ. ಕೋರ್ಟಿಗೂ ರೈತರು ಪಡೆದ ಸಾಲಕ್ಕೂ ಯಾವ ಸಂಬಂಧವೂ ಇಲ್ಲ. ಬ್ಯಾಂಕ್‌ ಮತ್ತು ಸರಕಾರಗಳು ಏನಾದರೂ ಮಾತನಾಡಿಕೊಳ್ಳಲಿ. ಈಗಾಗಲೇ ಸರಕಾರ ಸಾಲಮನ್ನಾ ಎಂದು ಹೇಳಿದ್ದು, ತಕ್ಷ ಣ ಜಾರಿಗೆ ತರಬೇಕು. ಜತೆಗೆ ಬ್ಯಾಂಕುಗಳಿಗೆ ಸರಿಯಾದ ಸೂಚನೆಗಳನ್ನು ಕೊಡಬೇಕು. ಇಲ್ಲವಾದರೇ ರೈತ ಸಂಘದಿಂದ ನಾವುಗಳು ಮುಂದೇನು ಮಾಡಬೇಕು,'' ಎಂದು ಸೋಮವಾರ ಸಭೆ ನಡೆಸಿ ತೀರ್ಮಾನ ಕೈಗೊಂಡಿರುವುದಾಗಿ ಎಚ್ಚರಿಸಿದರು.

ಬಾರದ ಪರಿಹಾರ: ''ಬಸವೇಗೌಡ ಎಂಬುವವರು ಕೈಸಾಲ ಮತ್ತು ಬ್ಯಾಂಕಿನ ಸಾಲಬಾಧೆಯನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡು 8 ತಿಂಗಳಾದರೂ ಇದುವರೆಗೂ ಸರಕಾರದಿಂದ ಯಾವ ಪರಿಹಾರ ಬಂದಿಲ್ಲ. ಅವರ ಕುಟುಂಬ ಸಂಕಷ್ಟದಲ್ಲಿ ಇದ್ದು, ಜೀವನ ಸಾಗಿಸುವುದೇ ಕಷ್ಟಕರವಾಗಿದೆ. ಸಾಲ ವಿಷಯದ ಎಲ್ಲಾ ದಾಖಲೆಯನ್ನು ನೀಡಿದರೂ, ಇನ್ನು ಪರಿಹಾರ ಕೊಡದೆ ಜಿಲ್ಲಾಡಳಿತ ಸತಾಯಿಸುತ್ತಿದೆ,'' ಎಂದು ದೂರಿದರು.

''ಬೆಳೆ ವಿಮೆ ಕೂಡ ಬಹಳ ರೈತರಿಗೆ ಸಿಕ್ಕಿರುವುದಿಲ್ಲ. ರೈತರ ಸಭೆಯಲ್ಲಿ ಈ ಬಗ್ಗೆಯೂ ಚರ್ಚಿಸಿದ್ದು, ಕೂಡಲೇ ಸರಕಾರ ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು,'' ಎಂದು ಮನವಿ ಮಾಡಿದರು.

ಎಪಿಎಂಸಿ ಮುಂದೆ ಬಿ.ಎಂ. ರಸ್ತೆಯ ಮಧ್ಯೆ ಪ್ರತಿಭಟನೆ ಮಾಡಿದ್ದರಿಂದ ಕೆಲ ಸಮಯ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಇದಕ್ಕೆ ಮೊದಲು ಸಭೆ ಸೇರಿ ರೈತರ ಮುಖ್ಯ ಸಮಸ್ಯೆಯ ಬಗ್ಗೆ ಚರ್ಚಿಸಿ ಬೇಡಿಕೆ ಈಡೇರದಿದ್ದರೆ ಉಗ್ರ ಪ್ರತಿಭಟನೆ ಮಾಡುವ ನಿರ್ಧಾರಕೈಗೊಂಡರು.

ಜಿಲ್ಲಾ ರೈತ ಮುಖಂಡ ಕೊಟ್ಟೂರ್‌ ಶ್ರೀನಿವಾಸ್‌, ಬಳ್ಳೂರ್‌ ಸ್ವಾಮೀಗೌಡ, ಶ್ರೀಕಂಠ ದೊಡ್ಡೇರಿ, ಮಲ್ಲೇಶ್‌, ಯೋಗಣ್ಣ, ಹೊಳೆನರಸೀಪುರದ ರುದ್ರೇಗೌಡ, ಚನ್ನರಾಯಪಟ್ಟಣದ ಸುರೇಶ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ