ಆ್ಯಪ್ನಗರ

ಹಾಸನದಲ್ಲಿ ಪುರಸಭೆ ಅಧಿಕಾರಿಗಳ ದಾಳಿ: ಗೋಮಾಂಸ ವಶ, 8 ಗೋವು ರಕ್ಷಣೆ

ಹಾಸನ ಜಿಲ್ಲೆಯ ಬೇಲೂರಿನಲ್ಲಿ ಅನಧಿಕೃತ ಗೋಮಾಂಸ ಮಳಿಗೆ ಮೇಲೆ ಪುರಭೆಯ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಗೋಮಾಂಸವನ್ನು ವಶಪಡಿಸಿಕೊಂಡು, 8 ಹಸುಗಳನ್ನು ರಕ್ಷಿಸಲಾಗಿದೆ.

Vijaya Karnataka Web 20 Sep 2019, 5:12 pm
ಬೇಲೂರು: ಪಟ್ಟಣದ ದಾವೂದ್‌ ಸಾಹೇಬ್‌ ಬೀದಿಯಲ್ಲಿಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಗೋವುಗಳನ್ನು ರಕ್ಷಿಸಿ ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ 11ರ ಸುಮಾರಿನಲ್ಲಿನಡೆಸಿದ ದಾಳಿ ವೇಳೆ 6 ಗೋವುಗಳು ಹಾಗೂ 2 ಕರುಗಳನ್ನು ಕಟ್ಟಿಹಾಕಿದ್ದು ಪತ್ತೆಯಾಯಿತು. ಜತೆಗೆ 70 ಕೆ.ಜಿ.ಗೋಮಾಂಸ ದೊರೆತಿದೆ.
Vijaya Karnataka Web beef


ಹಾಸನದಲ್ಲಿ ಅಕ್ರಮ ಗೋಮಾಂಸ ಮಳಿಗೆ ಮೇಲೆ ದಾಳಿ

ವಿವರ: ಕಳೆದ ಎರಡು ದಿನದ ಹಿಂದೆಯಷ್ಟೆ ದಾಳಿ ನಡೆಸಿ ಮುಸ್ತಾಫ ಬೀದಿಯಲ್ಲಿಗೋಮಾಂಸದ ಕೊಬ್ಬನ್ನು ವಶಪಡಿಸಿಕೊಂಡಿದ್ದ ಪುರಸಭೆ ಅಧಿಕಾರಿಗಳು ಶುಕ್ರವಾರ ದಾವೂದ್‌ಸಾಹೇಬ್‌ ರಸ್ತೆಯಲ್ಲಿನ ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ಸುಳಿವು ದೊರೆತು ಮಾರಾಟಗಾರ ನಾಪತ್ತೆಯಾಗಿದ್ದಾನೆ.

ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಬದ್ಧ: ಬೊಮ್ಮಾಯಿ
ಗೋವುಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು ಮಾಂಸ ಮಾರಾಟ ಮಾಡುತ್ತಿದ್ದ ಮನೆಯ ಮಾಲೀಕ ಅಸ್ಲಂಪಾಷ ವಿರುದ್ಧ ಪೊಲೀಸರಿಗೆ ಪುರಸಭೆ ಅಧಿಕಾರಿಗಳು ದೂರು ಸಲ್ಲಿಸಿದ್ದಾರೆ. ಜತೆಗೆ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವಂತೆ ಸೆಸ್ಕ್‌ ಎಂಜಿನಿಯರ್‌ಗೆ ಪತ್ರ ಬರೆದಿದ್ದಾರೆ ಮತ್ತು ಮನೆಯ ನೀರು, ಒಳಚರಂಡಿ ಸಂಪರ್ಕ ಕಡಿತಗೊಳಿಸಿದ್ದಾರೆ. ದಾಳಿಯ ವೇಳೆ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್‌, ಆರಕ್ಷಕ ಉಪನಿರೀಕ್ಷಕ ಅಜಯಕುಮಾರ್‌, ಆರೋಗ್ಯಾಧಿಕಾರಿ ವೆಂಕಟೇಶ್‌, ಪಶುವೈದ್ಯಾಧಿಕಾರಿ ಅಸ್ಲಂಪಾಷ ಪುರಸಭ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ