ಆ್ಯಪ್ನಗರ

ಬೇಲೂರು: ಕುಟುಂಬ ರಾಜಕಾರಣಕ್ಕಾಗಿ ಮಹಾಘಟ ಬಂಧನ್‌

ಬೇಲೂರು: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರೀಯತೆ ತಡೆಗೆ ಸಣ್ಣಪುಟ್ಟ ಪಕ್ಷ ಗಳು ಒಂದಾಗಿ ಮಹಾಘಟ ಬಂಧನ್‌ ರಚಿಸಲಾಗಿದೆಯೇ ಹೊರತು ದೇಶದ ಪ್ರಗತಿಗಲ್ಲ ಎಂದು ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಟೀಕಿಸಿದರು.

Vijaya Karnataka 12 Apr 2019, 5:00 am
ಬೇಲೂರು: ಪ್ರಧಾನಿ ನರೇಂದ್ರ ಮೋದಿಯವರ ಜನಪ್ರೀಯತೆ ತಡೆಗೆ ಸಣ್ಣಪುಟ್ಟ ಪಕ್ಷ ಗಳು ಒಂದಾಗಿ ಮಹಾಘಟ ಬಂಧನ್‌ ರಚಿಸಲಾಗಿದೆಯೇ ಹೊರತು ದೇಶದ ಪ್ರಗತಿಗಲ್ಲ ಎಂದು ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಟೀಕಿಸಿದರು.
Vijaya Karnataka Web beluru b j puttaswamy allegation mahaghata bandhan
ಬೇಲೂರು: ಕುಟುಂಬ ರಾಜಕಾರಣಕ್ಕಾಗಿ ಮಹಾಘಟ ಬಂಧನ್‌


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷ ಗಳು ರಚನೆ ಮಾಡಿಕೊಂಡಿರುವ ಘಟ ಬಂಧನವು ತಮ್ಮ ಮಕ್ಕಳನ್ನು ರಾಜಕಾರಣದಲ್ಲಿ ವಿಸ್ತರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅಷ್ಟೇ. ಬರೀ ಮಕ್ಕಳು-ಮೊಮ್ಮಕ್ಕಳಿಂದ ದೇಶವನ್ನು ನಡೆಸಲು ಸಾಧ್ಯವೇ? ಪ್ರಧಾನಿ ನರೇಂದ್ರ ಮೋದಿಯವರು ದೇಶವೇ ತನ್ನ ಪರಿವಾರ ಎಂದು ಸಾರಿ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಆದರೆ, ಕುಟುಂಬ ರಾಜಕೀಯ ನಡೆಸುವ ಪಕ್ಷಗಳಿಗಿಂತ ಬಿಜೆಪಿಗೆ ಪೂರ್ಣ ಬೆಂಬಲ ಕೊಡಬೇಕು ಎಂದು ಕೋರಿದರು.

ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿವೆ. ಮುಖ್ಯಮಂತ್ರಿಗಳು ಪುತ್ರ ವ್ಯಾವೋಹದಿಂದ ಮಂಡ್ಯದಲ್ಲಿಯೇ ಠಿಕಾಣಿ ಹಾಕಿದ್ದಾರೆ. ಹಾಸನ, ತುಮಕೂರು ಹಾಗೂ ಮಂಡ್ಯದಲ್ಲಿ ಪ್ರಜ್ಞಾವಂತ ಮತದಾರರು ಈ ಬಾರಿ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮಂಗಳ ಹಾಡುತ್ತಾರೆ. ತುಮಕೂರು ಹಾಗೂ ಹಾಸನದಲ್ಲಿ ತಮ್ಮ ಪಕ್ಷ ದ ಅಭ್ಯರ್ಥಿಗಳ ಗೆಲುವು ನಿಶ್ಚಿತ. ರಾಜ್ಯದಲ್ಲಿ 23ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.

ತಾನು ಸಚಿವನಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಕ್ಕೆ ವಿಶೇಷ ಸವಲತ್ತು ಕಲ್ಪಿಸಿಕೊಡಲು ಶ್ರಮಿಸಿದ್ದೇನೆ. ತಮ್ಮ ಪಕ್ಷ ವು ಜಾತ್ಯತೀತ ತತ್ತ್ವದಡಿ ರೂಪಿಸಿರುವ ಯೋಜನೆಗಳ ಅನುಷ್ಠಾನವನ್ನು ಜಾತ್ಯತೀತವಾಗಿ ಮಾಡುತ್ತಿದೆ. ಆದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಗಳು ಜಾತಿ, ಧರ್ಮಗಳನ್ನು ಛಿದ್ರಿಸಿ ಸೌಲಭ್ಯಗಳನ್ನು ನೀಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹವಾಗಿದೆ ಎಂದು ಟೀಕಿಸಿದರು.

ರಾಜ್ಯ ಬಿಜೆಪಿ ಹಿಂದುಳಿದ ವರ್ಗ ವಿಭಾಗದ ಕಾರ‍್ಯದರ್ಶಿ ಇ.ಎಚ್‌.ಲಕ್ಷ ್ಮಣ್‌, ಜಿಲ್ಲಾ ವಿಭಾಗ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ತಾಲೂಕು ವಿಭಾಗ ಘಟಕದ ಅಧ್ಯಕ್ಷ ದೇವರಾಜು, ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ