ಆ್ಯಪ್ನಗರ

ಬೇಲೂರು: ಹಲ್ಮಿಡಿ ಗ್ರಾಮ ಅಭಿವೃದ್ಧಿಗೆ ಸರಕಾರ ಮುಂದಾಗಲಿ

ಬೇಲೂರು: ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ತಾಲೂಕಿನ ಹಲ್ಮಿಡಿ ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಸಂಘಟನೆಗಳು ಮುಂದಾಗಬೇಕು ಎಂದು ಮಹಾರಾಷ್ಟ್ರದ ಶಿರಡಿ ಶ್ರೀ ಸಾಯಿಬಾಬಾ ಮಂದಿರದ ಸದ್ಗುರು ಶ್ರೀಗುರುಮೂರ್ತಿ ಗುರೂಜಿ ತಿಳಿಸಿದರು.

Vijaya Karnataka 17 Mar 2019, 5:00 am
ಬೇಲೂರು: ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ತಾಲೂಕಿನ ಹಲ್ಮಿಡಿ ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿ ರೂಪಿಸಲು ಸಂಘಟನೆಗಳು ಮುಂದಾಗಬೇಕು ಎಂದು ಮಹಾರಾಷ್ಟ್ರದ ಶಿರಡಿ ಶ್ರೀ ಸಾಯಿಬಾಬಾ ಮಂದಿರದ ಸದ್ಗುರು ಶ್ರೀಗುರುಮೂರ್ತಿ ಗುರೂಜಿ ತಿಳಿಸಿದರು.
Vijaya Karnataka Web beluru development to demand halmidi village
ಬೇಲೂರು: ಹಲ್ಮಿಡಿ ಗ್ರಾಮ ಅಭಿವೃದ್ಧಿಗೆ ಸರಕಾರ ಮುಂದಾಗಲಿ


ಹಲ್ಮಿಡಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಪ್ರತಿಕೃತಿ ಮಂಟಪ ವೀಕ್ಷಿಸಿದ ನಂತರ ಮಾತನಾಡಿದ ಅವರು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನವನ್ನು ತಂದುಕೊಡುವಲ್ಲಿ ಪ್ರಧಾನ ಪ್ರಾತ್ರ ವಹಿಸಿದ ಶಿಲಾ ಶಾಸನ ದೊರೆತ ಗ್ರಾಮವನ್ನು ಸರಕಾರ ಸಮರ್ಪಕವಾಗಿ ಗಮನಿಸದೇ ಇರುವುದು ವಿಷಾದನೀಯ. ಕೇವಲ ಸರಕಾರ ಮಾತ್ರವೇ ಈ ಕೆಲಸವನ್ನು ಮಾಡಬೇಕೆಂದಿಲ್ಲ. ಪ್ರತಿಯೊಬ್ಬ ಕನ್ನಡಿಗರು ಮತ್ತು ಕನ್ನಡ ಸಂಘಟನೆಗಳು ಸಂಘಟಿತರಾಗಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಬೇಕು ಎಂದರು.

ಪ್ರಸಿದ್ಧ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಿ ಪ್ರತಿಯೊಬ್ಬ ಕನ್ನಡಿಗರು, ಕನ್ನಡಾಭಿಮಾನಿಗಳು ಈ ತಾಣವನ್ನು ಭೇಟಿ ಮಾಡುವಂತೆ ಪ್ರಚಾರ, ಪ್ರಸಾರ ಮಾಡಬೇಕು. ಸರಕಾರ ಹಲವಾರು ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿರುವುದನ್ನು ನಾವು ಕಾಣುತ್ತಿದ್ದೇವೆ. ಇಲ್ಲಿ ಯಾವುದೇ ಆ ರೀತಿಯ ಕ್ರಮಗಳು ಕೈಗೊಳ್ಳದಿರುವುದು ಆಶ್ಚರ್ಯವಾಗಿದೆ. ಯಾವುದೇ ರಾಜಕಾರಣವನ್ನು ನಡೆಸದೆ ಗ್ರಾಮವನ್ನು ಸರಕಾರ ದತ್ತು ತೆಗೆದುಕೊಂಡು ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು. ಇದರೊಂದಿಗೆ ಸಂಘ ಸಂಸ್ಥೆಗಳು, ಮಠ ಮಾನ್ಯಗಳು ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.

ಹಲ್ಮಿಡಿ ಗ್ರಾಮಾಭಿವೃದ್ಧಿ ಟ್ರಸ್ಟ್‌ (ಅಧ್ಯಕ್ಷ ಹಾಗೂ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್‌.ಬಿ.ಮದನ್‌ ಗೌಡ ಗ್ರಾಮದ ಇತಿಹಾಸವನ್ನು ತಿಳಿಸಿಕೊಟ್ಟರು. ಟ್ರಸ್ಟ್‌ ಕಾರ್ಯದರ್ಶಿ ಚನ್ನೇಗೌಡ, ಶಿರಡಿಯ ಸಾಯಿಬಾಬಾ ಮಂದಿರದ ಕಾರ್ಯದರ್ಶಿ ಶಿವಾನಂದ, ಗ್ರಾಮಸ್ಥರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ