ಬೇಲೂರು: ತಾಲೂಕಿನ ಹಳೇಬೀಡಿನ ಬಸದಿಹಳ್ಳಿಯಲ್ಲಿರುವ ಶಾಂತಿನಾಥ ತೀರ್ಥಂಕರರ ಮೂರ್ತಿಗೆ ಭಾನುವಾರ ಮಸ್ತಕಾಭಿಷೇಕ ಅದ್ಧೂರಿಯಾಗಿ ನೆರವೇರಿತು.
20ಅಡಿ ಎತ್ತರದ ಮೂರ್ತಿಗೆ ಜೈನ ಸಮುದಾಯ, ಶೀತಲ್ ಜೈನ್ ಚಾರಿಟಬಲ್ ಟ್ರಸ್ಟ್, ಆದಿನಾಥ ಭಗವಾನ್ ದಿಗಂಬರ್ ಜೈನ್ ಕ್ಷೇತ್ರ ಚಾರಿಟಬಲ್ ಟ್ರಸ್ಟ್, ಹಳೇಬೀಡು ಮಾದೀಹಳ್ಳಿ ಹೋಬಳಿ ಜೈನ ಸಮಾಜ, ದಿಗಂಬರ ಜೈನ್ ಸಮಾಜ ಸಹಯೋಗದಲ್ಲಿ ಮಸ್ತಕಾಭಿಷೇಕ ಆಯೋಜಿಸಲಾಗಿತ್ತು. ವಿವಿಧ ಚೂರ್ಣಗಳಿಂದ ತಯಾರಿಸಲಾಗಿದ್ದ ಕಷಾಯದೊಂದಿಗೆ ಅಭಿಷೇಕ ಮಾಡಲಾಯಿತು.
ಸಾನ್ನಿಧ್ಯ ವಹಿಸಿದ್ದ ವೀರಸಾಗರ ಮಹಾರಾಜ್ ಆಶೀರ್ವಚನ ನೀಡಿ, ಮನುಷ್ಯ ಅಂಧ ಸ್ವಾಭಿಮಾನಿಯಾಗಿ ಜೀವನ ನಡೆಸಿಕೊಂಡು ಸಂಸಾರದಲ್ಲಿ ಜಂಜಾಟದೊಂದಿಗೆ ತೊಳಲಾಡುತ್ತಿದ್ದಾನೆ. ಮಾನವರು ಶರೀರ ಪ್ರೀತಿ ತೊರೆದು ಆತ್ಮ ಸಾಕ್ಷ ರತೆಯನ್ನು ಹೊಂದಿದಾಗಲಷ್ಟೇ ಶಾಂತಿಯನ್ನು ಕಾಣಲು ಸಾಧ್ಯ ಎಂದರು.
ಜೈನರ ಗುತ್ತಿ ಟ್ರಸ್ಟ್ ಅಧ್ಯಕ್ಷ ಹೊಂಗೆರೆ ದೇವೇಂದ್ರ, ಬಾಬಣ್ಣ, ರಾಜಶೇಖರ್, ರೈತ ಮುಖಂಡ ಗಡಿ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು.
ಜೈನ್ ಸಮಾಜದ ಮುಖಂಡರಾದ ವಿಜಯಕುಮಾರ್ ದಿನಕರ್, ಸಜ್ಜನ್ ಜೈನ್,, ಜಿನಚಂದ್ರ, ಕಾಂತರಾಜ್, ಅಶಿಕ್ ಕುಮಾರ್, ಸುಮತಿ ಕುಮಾರ್, ಮಹಾವೀರ್, ಮಂಜುನಾಥ್, ದೇವೇಂದ್ರ, ಇದ್ದರು.
20ಅಡಿ ಎತ್ತರದ ಮೂರ್ತಿಗೆ ಜೈನ ಸಮುದಾಯ, ಶೀತಲ್ ಜೈನ್ ಚಾರಿಟಬಲ್ ಟ್ರಸ್ಟ್, ಆದಿನಾಥ ಭಗವಾನ್ ದಿಗಂಬರ್ ಜೈನ್ ಕ್ಷೇತ್ರ ಚಾರಿಟಬಲ್ ಟ್ರಸ್ಟ್, ಹಳೇಬೀಡು ಮಾದೀಹಳ್ಳಿ ಹೋಬಳಿ ಜೈನ ಸಮಾಜ, ದಿಗಂಬರ ಜೈನ್ ಸಮಾಜ ಸಹಯೋಗದಲ್ಲಿ ಮಸ್ತಕಾಭಿಷೇಕ ಆಯೋಜಿಸಲಾಗಿತ್ತು. ವಿವಿಧ ಚೂರ್ಣಗಳಿಂದ ತಯಾರಿಸಲಾಗಿದ್ದ ಕಷಾಯದೊಂದಿಗೆ ಅಭಿಷೇಕ ಮಾಡಲಾಯಿತು.
ಸಾನ್ನಿಧ್ಯ ವಹಿಸಿದ್ದ ವೀರಸಾಗರ ಮಹಾರಾಜ್ ಆಶೀರ್ವಚನ ನೀಡಿ, ಮನುಷ್ಯ ಅಂಧ ಸ್ವಾಭಿಮಾನಿಯಾಗಿ ಜೀವನ ನಡೆಸಿಕೊಂಡು ಸಂಸಾರದಲ್ಲಿ ಜಂಜಾಟದೊಂದಿಗೆ ತೊಳಲಾಡುತ್ತಿದ್ದಾನೆ. ಮಾನವರು ಶರೀರ ಪ್ರೀತಿ ತೊರೆದು ಆತ್ಮ ಸಾಕ್ಷ ರತೆಯನ್ನು ಹೊಂದಿದಾಗಲಷ್ಟೇ ಶಾಂತಿಯನ್ನು ಕಾಣಲು ಸಾಧ್ಯ ಎಂದರು.
ಜೈನರ ಗುತ್ತಿ ಟ್ರಸ್ಟ್ ಅಧ್ಯಕ್ಷ ಹೊಂಗೆರೆ ದೇವೇಂದ್ರ, ಬಾಬಣ್ಣ, ರಾಜಶೇಖರ್, ರೈತ ಮುಖಂಡ ಗಡಿ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು.
ಜೈನ್ ಸಮಾಜದ ಮುಖಂಡರಾದ ವಿಜಯಕುಮಾರ್ ದಿನಕರ್, ಸಜ್ಜನ್ ಜೈನ್,, ಜಿನಚಂದ್ರ, ಕಾಂತರಾಜ್, ಅಶಿಕ್ ಕುಮಾರ್, ಸುಮತಿ ಕುಮಾರ್, ಮಹಾವೀರ್, ಮಂಜುನಾಥ್, ದೇವೇಂದ್ರ, ಇದ್ದರು.