ಆ್ಯಪ್ನಗರ

ಬಿಜೆಪಿ ಸಂಭ್ರಮಾಚರಣೆ

ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಬಿಜೆಪಿ ಘಟಕವು ಅವರ ಭಾವಚಿತ್ರ ಹಾಗೂ ಬಿಜೆಪಿ ಪಕ್ಷ ದ ಧ್ವಜದೊಂದಿಗೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದರು.

Vijaya Karnataka 28 Jul 2019, 5:00 am
ಬೇಲೂರು: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಬಿಜೆಪಿ ಘಟಕವು ಅವರ ಭಾವಚಿತ್ರ ಹಾಗೂ ಬಿಜೆಪಿ ಪಕ್ಷ ದ ಧ್ವಜದೊಂದಿಗೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದರು.
Vijaya Karnataka Web HSN-HSN27BLR1


ಪಕ್ಷ ದ ಕಾಫಿ ಪ್ರಕೋಷ್ಟ ಸದಸ್ಯ ಜೆ.ಕೆ.ಕುಮಾರ್‌ ಮತ್ತು ರಾಜ್ಯ ಬಿಜೆಪಿ ಪರಿಶಿಷ್ಟ ವರ್ಗಗಳ ಮೋರ್ಚಾ ಕಾರ್ಯದರ್ಶಿ ಪರ್ವತಯ್ಯ ಮಾತನಾಡಿ, ಚುನಾವಣೆಯಲ್ಲಿ ಜನಾದೇಶವನ್ನು ಹೊಂದಿದ್ದರೂ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಗಳ ಅಪವಿತ್ರ ಮೈತ್ರಿಯಿಂದಾಗಿ ಪಕ್ಷ ಅಧಿಕಾರ ಗಳಿಸಲಾಗಲಿಲ್ಲ. ಈ ದೋಸ್ತಿಗಳ ಆಡಳಿತದಲ್ಲಿ ಅಧಿಕಾರ ದಾಹದೊಂದಿಗೆ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಅಲ್ಲದೇ ಸ್ವಜನ ಪಕ್ಷ ಪಾತ ಹಾಗೂ ಭ್ರಷ್ಟಾಚಾರವೂ ನಡೆಯಿತು. ರಾಜ್ಯದ ಹಿತವನ್ನೇ ಮರೆತಿದ್ದರು. ಪಕ್ಷ ದೊಳಗಿನ ಅಸಮಾಧಾನ ಮತ್ತು ಇತರೇ ಕಾರಣಗಳಿಂದಾಗ ಆಡಳಿತವೂ ಕುಂಠಿತಗೊಂಡಿತ್ತು. ಇದೀಗ ತಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಂದಿನ ದಿನಗಳಲ್ಲಿ ಜನ ನಿರೀಕ್ಷೆಗೆ ಸ್ಪಂದಿಸಿ ಕಾರ್ಯನಿರ್ವಹಣೆ ಮಾಡಲು ಪಕ್ಷ ಸನ್ನದ್ಧವಾಗಿದೆ ಎಂದು ತಿಳಿಸಿದರು.

ಲೋಕಸಭೆಯ ಭಾರಿ ಪರಾಭವದ ಹಿನ್ನೆಲೆಯಲ್ಲಿ ಈ ದೋಸ್ತಿಗಳು ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ, ನೈತಿಕ ಹೊಣೆಗಾರಿಕೆಯೊಂದಿಗೆ ರಾಜೀನಾಮೆ ನೀಡಬೇಕಾಗಿತ್ತು. ಹಾಗೆ ಮಾಡದೇ ಅವಿಶ್ವಾಸದೊಂದಿಗೆ ಅಧಿಕಾರದಿಂದ ಇಳಿಯಬೇಕಾಯಿತೆಂದು ತಿಳಿಸಿದರು. ತಮ್ಮ ಪಕ್ಷ ವು ಸುಭದ್ರ ಸರಕಾರವನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿದರು.

ಬಿಜೆಪಿ ಘಟಕದ ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಗಣೇಶ್‌, ಉಪಾಧ್ಯಕ್ಷ ಕೋಟೆ ಶ್ರೀನಿವಾಸ್‌, ಮಧು, ಅರೇಹಳ್ಳಿ ಶಿವನ್ಣ, ರವಿ, ಕೇಬಲ್‌ ರಾಜಣ್ಣ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ