ಆ್ಯಪ್ನಗರ

ಉತ್ತರದಲ್ಲಿ ರಾಮಮಂದಿರ, ದಕ್ಷಿಣದಲ್ಲಿ ಶಬರಿಮಲೆ ವಿಷಯ ಇಟ್ಟು ಬಿಜೆಪಿ ರಾಜಕೀಯ: ದೇವೇಗೌಡರು

ಬಿಜೆಪಿ ಐದು ವರ್ಷ ಅಭಿವೃದ್ಧಿ ಮಾಡಿದ್ದರೆ ಶ್ರೀರಾಮಂದಿರ ವಿಷಯ ಪ್ರಸ್ತಾಪಿಸುತ್ತಿರಲಿಲ್ಲ. ಕೇವಲ ಚುನಾವಣೆಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದು ಟೀಕಿಸಿದರು. ಉತ್ತರದಲ್ಲಿ ರಾಮಮಂದಿರ, ದಕ್ಷಿಣದಲ್ಲಿ ಶಬರಿಮಲೆ ವಿಷಯ ಇಟ್ಟು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು. ಸಚಿವ ಸಂಪುಟ ವಿಸ್ತರಣೆಯಲ್ಲಿ ಜೆಡಿಎಸ್‌ನಲ್ಲಿ ಯಾವುದೇ‌ ಗೊಂದಲವಿಲ್ಲ. ಕಾಂಗ್ರೆಸ್ ದೊಡ್ಡ ಪಕ್ಷ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಸಿದ್ದರಾಮಯ್ಯ ದಕ್ಷತೆಯಿಂದ ಆಡಳಿತ ನಡೆಸಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದರು.

Vijaya Karnataka Web 8 Dec 2018, 4:00 pm
ಹಾಸನ: ಬಿಜೆಪಿ ಐದು ವರ್ಷ ಅಭಿವೃದ್ಧಿ ಮಾಡಿದ್ದರೆ ಶ್ರೀರಾಮಂದಿರ ವಿಷಯ ಪ್ರಸ್ತಾಪಿಸುತ್ತಿರಲಿಲ್ಲ. ಕೇವಲ ಚುನಾವಣೆಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದು ಟೀಕಿಸಿದರು. ಉತ್ತರದಲ್ಲಿ ರಾಮಮಂದಿರ, ದಕ್ಷಿಣದಲ್ಲಿ ಶಬರಿಮಲೆ ವಿಷಯ ಇಟ್ಟು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.
Vijaya Karnataka Web DEVEGOWDA


ನೋಟ್ ಬ್ಯಾನ್‌ನಿಂದ ಕಪ್ಪು ಹಣ ಬಂದಿಲ್ಲ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಸಿಬಿಐ ಅನ್ನು ಮುಗಿಸಿದ್ದು, ರಿಸರ್ವ್ ಬ್ಯಾಂಕ್ ತನ್ನ ವಶಕ್ಕೆ ಪಡೆಯಲು ಯತ್ನಿಸಿದ್ದೇ ಕೇಂದ್ರ ಸರಕಾರದ ಸಾಧನೆಗಳು ಎಂದು ಜರಿದರು.

ಮುಂದೆ ಬಿಜೆಪಿ ಸರ್ಕಾರ ಬರುವುದಿಲ್ಲ ಎಂದು ಅನುಮಾನ ಬಂದಿದೆಯಾ? ಧರ್ಮಗಳ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬದುಕಲಿಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಪ್ರಾರಂಭಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯ ಕೊಲೆ ನಡೆದ ದಿನ, ಅಲ್ಲಿನ ಸಿಎಂ‌ ಕಬಡ್ಡಿ ಪಂದ್ಯ ನೋಡಲು ಹೋಗಿದ್ದಾರೆ ಎಂದು ಗೌಡರು ಟೀಕಿಸಿದರು.

ನಾಳೆ ದಿಲ್ಲಿಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಎಲ್ಲ ಪಕ್ಷಗಳ ಸಭೆ ಕರೆದಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ ಕೆಲವು ಕಡೆ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಬಂದರೆ, ಕೆಲವು ಕಡೆ ತೀವ್ರ ಪೈಪೋಟಿ ಇದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದ್ದಾರೆ.

ಮೋದಿ ಅವರ ಅಬ್ಬರದ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಿರುಸಿನ ಪ್ರಚಾರ ನೋಡಿದ್ದೇನೆ. ಸಂಪೂರ್ಣವಾಗಿ ಒಂದು ಪಕ್ಷ ಜಯಗಳಿಸಿದರೆ ಮುಂದಿನ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಗೌಡರು ನುಡಿದರು. ರಾಜಸ್ಥಾನ ಹೊರತುಪಡಿಸಿ ಉಳಿದೆಡೆ ಬಿಜೆಪಿ ಪಕ್ಷಕ್ಕೆ ಪ್ರಬಲ ಸ್ಫರ್ಧೆಯಿದೆ. ಐದು ರಾಜ್ಯಗಳಲ್ಲೂ ಯಾವ ಪಕ್ಷವೂ ಕ್ಲೀನ್ ಸ್ವೀಪ್ ಮಾಡಲ್ಲ ಎಂದು ಗೌಡರು ಭವಿಷ್ಯ ನುಡಿದರು. ಮೋದಿ, ರಾಹುಲ್ ಗಾಂಧಿ ಇಬ್ಬರೂ ಒನ್ ಮ್ಯಾನ್ ಶೋ ಪ್ರದರ್ಶಿಸುತ್ತಿದ್ದಾರೆ ಎಂದು ಗೌಡರು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ ಜೆಡಿಎಸ್‌ನಲ್ಲಿ ಯಾವುದೇ‌ ಗೊಂದಲವಿಲ್ಲ. ಕಾಂಗ್ರೆಸ್ ದೊಡ್ಡ ಪಕ್ಷ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಸಿದ್ದರಾಮಯ್ಯ ದಕ್ಷತೆಯಿಂದ ಆಡಳಿತ ನಡೆಸಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದರು. ಸಮ್ಮಿಶ್ರ ಸರಕಾರ ಮಂಡ್ಯ, ಹಾಸನಕ್ಕೆ ಮಾತ್ರ ಸೀಮಿತ ಎನ್ನುತ್ತಾರೆ. ಕೇವಲ ಒಕ್ಕಲಿಗರ ಅಭಿವೃದ್ಧಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಕೀಳುಮಟ್ಟದ ಟೀಕೆ ಮಾಡುತ್ತಿದ್ದಾರೆ. ರಾಜ್ಯದ ಜನತೆ ಸರ್ಕಾರದ ಮೇಲೆ ನಂಬಿಕೆ ಇಡಬೇಕು ಎಂದು ಎಚ್.ಡಿ.ದೇವೇಗೌಡರು ಮನವಿ ಮಾಡಿದರು.

ಇನ್ನು, ಡಿ.19 ರಂದು ಮಮತಾ ಬ್ಯಾನರ್ಜಿ ಕೋಲ್ಕತದಲ್ಲಿ ಬೃಹತ್ ರ‍್ಯಾಲಿ ನಡೆಸುತ್ತಿದ್ದಾರೆ. ನನಗೆ ಆಹ್ವಾನ ನೀಡಿದ್ದಾರೆ ರ‍್ಯಾಲಿಯಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ. ಯಾವ ಪಕ್ಷದವರು ಕರೆದರೂ‌ ಹೋಗುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ