ಆ್ಯಪ್ನಗರ

ನಾವು ಪಾಂಡವರು, ಗೆಲುವು ಖಚಿತ: ಶಾಸಕ ರವಿ

ಈ ಬಾರಿ ಚುನಾವಣೆ ರಾಜಕೀಯ ಕುರುಕ್ಷೇತ್ರ. ರಾಜ್ಯದಲ್ಲಿ ಕೌರವರ ಆಡಳಿತ ಇದೆ. ಮುಂದೆ ಕುರುಕ್ಷೇತ್ರ ಇದೆ.

Vijaya Karnataka Web 21 Jan 2018, 5:13 pm
ಹಾಸನ: ಈ ಬಾರಿ ಚುನಾವಣೆ ರಾಜಕೀಯ ಕುರುಕ್ಷೇತ್ರ. ರಾಜ್ಯದಲ್ಲಿ ಕೌರವರ ಆಡಳಿತ ಇದೆ. ಮುಂದೆ ಕುರುಕ್ಷೇತ್ರ ಇದೆ, ನಾವು ಪಾಂಡವರು,ಅವರು ಕೌರವರು. ಸರಕಾರ ಗೋರಕ್ಷಕರ ವಿರುದ್ಧವಾಗಿದೆ. ಕೃಷ್ಣ ಗೋಪಾಲಕನಾಗಿದ್ದು ಸಿದ್ದರಾಮಯ್ಯ ಕೃಷ್ಣನ‌ ವಿರೋಧಿ. ಹಾಗಾಗಿ ನಾವೇ ಪಾಂಡವರು. ನಮ್ಮ ಗೆಲುವು ಖಚಿತ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
Vijaya Karnataka Web bjp win next election said mla ravi
ನಾವು ಪಾಂಡವರು, ಗೆಲುವು ಖಚಿತ: ಶಾಸಕ ರವಿ


ಹಾಸನದಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಬದಲಾವಣೆಯ ಅವಶ್ಯಕತೆ ಇದೆ. ಬಿಜೆಪಿ ಗೆಲುವಿಗೆ ಎಲ್ಲರೂ ಶ್ರಮಿಸಿ ಎಂದರು.

ಕಾಂಗ್ರೆಸ್ ಇರುವ ಕಡೆಯೆಲ್ಲ ಬಿಜೆಪಿ ಇದೆ, ಕಾಂಗ್ರೆಸ್ ವಿರುದ್ದ ದೇಶದಲ್ಲಿ ಜನಾಭಿಪ್ರಾಯ ಇದೆ. ಕರ್ನಾಟಕದಲ್ಲಿ ಬಿಜೆಪಿ 150 ಸೀಟು ಗೆಲ್ಲಲಿದೆ. ಅತಂತ್ರ ಸರಕಾರ ಖಂಡಿತಾ ಆಗುವುದಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್‌ನವರು ಜಾತಿ ,ಹಣದಿಂದ ರಾಜಕೀಯ ಮಾಡುತ್ತಿದ್ದಾರೆ. ರಾಮನಾಥ್ ಕೋವಿಂದ್ ದಲಿತ ಸಮಾಜದ ಅತ್ಯಂತ‌ ಬಡ ಕುಟುಂಬದಿಂದ ಬಂದು ರಾಷ್ಟ್ರಪತಿಯಾದರು. ಇದು ಬಿಜೆಪಿಯಿಂದ ಮಾತ್ತ ಸಾಧ್ಯ. ಹಾಸನದಲ್ಲಿ ಪದೇ ಪದೆ ಜೆಡಿಎಸ್ ಗೆಲುವಿನಿಂದ ನಿಮಗೇನು ಸಿಕ್ಕಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ