ಪ್ರಕಾಶ್ ಜಿ. ಹಾಸನ
ಹಾಸನ: ನದಿಗಳ ಸಂರಕ್ಷಣೆಗಾಗಿ ಹಲವು ಆಂದೋಲನಗಳು ಈಗಾಗಲೇ ಆರಂಭವಾಗಿವೆ. ನದಿಗಳ ಸ್ವಚ್ಛತೆಗಾಗಿ ಜನ ಜಾಗೃತಿ ನಡೆಯುತ್ತಿರುವ ಈ ಹೊತ್ತಿನಲ್ಲಿ ನಗರದ ಸಮೀಪವೇ ಇರುವ ಯಗಚಿ ನದಿಯಂಗಳದಲ್ಲಿ ಮಾಟ, ಮಂತ್ರದಂತಹ ವಾಮಾಚಾರ ವಿಜೃಂಭಿಸುತ್ತಿದ್ದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತ ಗಮನಿಸದೆ ಇರುವುದು ಅಚ್ಚರಿಯ ಸಂಗತಿಯಾಗಿದೆ. ಜಿಲ್ಲೆಯ ಮಟ್ಟಿಗೆ ಹೇಮಾವತಿ ಅಣೆಕಟ್ಟೆಯನ್ನು ಹೊರತುಪಡಿಸಿದರೆ ಶೇ.10ರಷ್ಟು ಯಗಚಿ ನದಿ ನೀರಿನ ಮೇಲೆ ಹೆಚ್ಚು ಜನ ಅವಲಂಬಿತರಾಗಿದ್ದಾರೆ. ಕೃಷಿಗೂ ಬಳಕೆಯಾಗುತ್ತಿದೆ. ಇಂತಹ ನದಿಯ ಸ್ಥಿತಿಯನ್ನು ಒಮ್ಮೆ ನೋಡಿದರೆ ಜನ ಸಾಮಾನ್ಯರು ಬೇಸರಗೊಳ್ಳದೆ ಇರರು. ನಗರದ ಕಂದಲಿ ಸಮೀಪ ಹಾದು ಹೋಗಿರುವ ಯಗಚಿ ನದಿ ದಂಡೆಯಲ್ಲಿ ನದಿಯ ಉದ್ದಗಲಕ್ಕೂ ವಾಮಾಚಾರಕ್ಕೆ ಬಳಸುವ ಮಡಕೆ, ಕುಡಕೆ, ನಿಂಬೆಹಣ್ಣು, ಬಣ್ಣ, ಬಣ್ಣದ ಕುಂಕುಮ, ರಾಶಿ, ರಾಶಿ ಹೂ ಇತ್ಯಾದಿ ಪರಿಕರಗಳು ರಾರಾಜಿಸುತ್ತಿವೆ.
ಮಾಟ - ಮಂತ್ರಕ್ಕೆ ಒಳಗಾದ ವ್ಯಕ್ತಿ ಹೇಗಿರುತ್ತಾನೆ..? ಕಂಡುಹಿಡಿಯೋದು ಹೇಗೆ..?
ಆಧುನಿಕತೆ ಎಷ್ಟೇ ಬೆಳೆದರೂ ವಾಮಾಚಾರದಂತಹ ಕೃತ್ಯಗಳು ಮೌಢ್ಯಕ್ಕೆ ಇಂದಿಗೂ ಸಾಕ್ಷಿ ಎನ್ನುವಂತಿದೆ. ಬೆಂಗಳೂರು- ಮಂಗಳೂರು ಮುಖ್ಯರಸ್ತೆಯಲ್ಲಿರುವ ಸೇತುವೆ ಕೆಳ ಭಾಗದಲ್ಲಿ ಮಾಟ ಮಂತ್ರಕ್ಕೆ ಬಳಸುವ ನಿಂಬೆಕಾಯಿ, ಕುಂಕುಮ, ಕರ್ಪೂರ, ದೇವರ ಫೋಟೋ, ದಾರ, ಅರಿಶಿನ, ರವಿಕೆ, ತೆಂಗಿನಕಾಯಿ, ಮೆಣಸಿನಕಾಯಿಗಳೇ ರಾರಾಜಿಸುತ್ತಿವೆ. ನದಿ ಪಕ್ಕದ ಕಲ್ಲುಗಳ ಮೇಲೆ ವಿಚಿತ್ರ ಪೂಜೆಗಳು ನಡೆದಿರುವ ಕುರುಹುಗಳು ದಿನೇದಿನೆ ಹೆಚ್ಚುತ್ತಿವೆ. ಪೂಜೆಗೆ ಬಳಸುವ ಸಾಮಾನುಗಳನ್ನು ನದಿಗೆ ಎಸೆಯುತ್ತಿರುವುದರಿಂದ ನದಿಯೊಡಲು ಕಲುಷಿತಗೊಂಡಿದೆ.
ದೇವರ ಗಾಜಿನ ಫೋಟೋಗಳನ್ನು ನದಿಗೆ ಎಸೆಯುತ್ತಿರುವುದರಿಂದ ನೀರಿನಲ್ಲಿ ಹೆಜ್ಜೆ ಇರಿಸಿದರೆ ಗಾಜಿನ ಚೂರುಗಳೇ ತುಂಬಿದೆ. ಹಾಸನ, ಚಿಕ್ಕಮಗಳೂರು ಮತ್ತು ಬೇಲೂರು ತಾಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸುವ ನದಿಗೆ ಈ ದುಸ್ಥಿತಿ ಬಂದಿರುವುದು ಶೋಚನೀಯವೇ ಸರಿ.
ಯಗಚಿ ನದಿ ದಂಡೇಲಿ ವಾಮಾಚಾರ ಪಿಡುಗು ರಾಷ್ಟ್ರೀಯ ಹೆದ್ದಾರಿ ನಡುವೆ ಹಾದು ಹೋಗಿರುವ ಕಂದಲಿ ಸಮೀಪದ ಯಗಚಿ ನದಿ ಬಳಿ ಹಗಲು -ರಾತ್ರಿ ಎನ್ನದೆ ವಾಮಾಚಾರ ನಡೆಯುವುದರಿಂದ ಯಾರೊಬ್ಬರು ಇತ್ತ ಕಡೆ ಸುಳಿಯುವುದಿಲ್ಲ. ಹಾಗಾಗಿ ಈ ಪ್ರದೇಶದಲ್ಲಿ ಮದ್ಯ ಸೇವನೆ ಹಾಗೂ ಇನ್ನಿತರ ಅನೈತಿಕ ಚಟುವಟಿಕೆ ಹೆಚ್ಚಾಗುತ್ತಿದೆ. ಮುಖ್ಯರಸ್ತೆಯ ಪಕ್ಕದಲ್ಲಿ ಇರುವ ಈ ಖಾಲಿ ಜಾಗದಲ್ಲಿ ವಾಹನ ನಿಲ್ಲಿಸಿಕೊಂಡು ಮದ್ಯಪಾನ ಮಾಡುತ್ತಿರುವುದು ಸಾಮಾನ್ಯವಾಗಿದೆ. ರಾತ್ರಿ ವೇಳೆ ಇಲ್ಲಿ ಹೋಗಲು ಭಯಪಡುವ ವಾತಾವರಣ ಇದೆ.
ಕಂದಲಿ ಸುತ್ತಲಿನ ಗ್ರಾಮಗಳ ಜನರು ತಮ್ಮ ಜಾನುವಾರುಗಳನ್ನು ಇಲ್ಲಿಗೆ ತಂದು ನೀರು ಕುಡಿಸುತ್ತಿದ್ದರು. ಆದರೆ ಮಾಟ ಮಂತ್ರದ ಹಾವಳಿ ಹೆಚ್ಚಾದ ಪರಿಣಾಮ ಈ ಕಡೆಗೆ ಜನರು ಬರಲು ಹೆದರುತ್ತಿದ್ದಾರೆ. ಸೇತುವೆಯಿಂದ ಎರಡು ಕಿ.ಮೀ. ದೂರ ಕ್ರಿಮಿಸಿ ದನಕರುಗಳಿಗೆ ನೀರು ಕುಡಿಸಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ. ಇದಲ್ಲದೆ ಅಪ್ಪಿ ತಪ್ಪಿ ಇಲ್ಲಿ ನೀರು ಕುಡಿಸಿದರೆ ಎಲ್ಲಿ ಜಾನುವಾರುಗಳು ಮೃತಪಡುತ್ತವೊ ಅನ್ನುವ ಭಯ ಅವರಲ್ಲಿಇದೆ. ದಿನಕಳೆದಂತೆ ಸೇತುವೆ ಕೆಳಗೆ ಕಾಣಿಸುತ್ತಿರುವ ವಾಮಾಚಾರದ ಸಾಮಗ್ರಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿದಿನ ರಾತ್ರಿ ಕತ್ತಲಾಗುತ್ತಿದ್ದಂತೆ ಬರುವ ಜನರು ಮಾಟ ಮಂತ್ರದ ಸರಕುಗಳನ್ನು ಅಲ್ಲಿ ಎಸೆಯುತ್ತಿದ್ದಾರೆ. ಯಗಚಿ ಜಲಾಶಯದಿಂದ ಹೇಮಾವತಿಗೆ ಸಂಪರ್ಕ ಕಲ್ಪಿಸುವ ಯಗಚಿ ನದಿಯಲ್ಲಿ ಮಳೆಯ ಹಿನ್ನೆಲೆಯಲ್ಲಿ ಒಂದಿಷ್ಟು ನೀರಿನ ಸಂಗ್ರಹವಿದೆ.
ಹಾಸನ: ನದಿಗಳ ಸಂರಕ್ಷಣೆಗಾಗಿ ಹಲವು ಆಂದೋಲನಗಳು ಈಗಾಗಲೇ ಆರಂಭವಾಗಿವೆ. ನದಿಗಳ ಸ್ವಚ್ಛತೆಗಾಗಿ ಜನ ಜಾಗೃತಿ ನಡೆಯುತ್ತಿರುವ ಈ ಹೊತ್ತಿನಲ್ಲಿ ನಗರದ ಸಮೀಪವೇ ಇರುವ ಯಗಚಿ ನದಿಯಂಗಳದಲ್ಲಿ ಮಾಟ, ಮಂತ್ರದಂತಹ ವಾಮಾಚಾರ ವಿಜೃಂಭಿಸುತ್ತಿದ್ದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತ ಗಮನಿಸದೆ ಇರುವುದು ಅಚ್ಚರಿಯ ಸಂಗತಿಯಾಗಿದೆ.
ಮಾಟ - ಮಂತ್ರಕ್ಕೆ ಒಳಗಾದ ವ್ಯಕ್ತಿ ಹೇಗಿರುತ್ತಾನೆ..? ಕಂಡುಹಿಡಿಯೋದು ಹೇಗೆ..?
ಆಧುನಿಕತೆ ಎಷ್ಟೇ ಬೆಳೆದರೂ ವಾಮಾಚಾರದಂತಹ ಕೃತ್ಯಗಳು ಮೌಢ್ಯಕ್ಕೆ ಇಂದಿಗೂ ಸಾಕ್ಷಿ ಎನ್ನುವಂತಿದೆ. ಬೆಂಗಳೂರು- ಮಂಗಳೂರು ಮುಖ್ಯರಸ್ತೆಯಲ್ಲಿರುವ ಸೇತುವೆ ಕೆಳ ಭಾಗದಲ್ಲಿ ಮಾಟ ಮಂತ್ರಕ್ಕೆ ಬಳಸುವ ನಿಂಬೆಕಾಯಿ, ಕುಂಕುಮ, ಕರ್ಪೂರ, ದೇವರ ಫೋಟೋ, ದಾರ, ಅರಿಶಿನ, ರವಿಕೆ, ತೆಂಗಿನಕಾಯಿ, ಮೆಣಸಿನಕಾಯಿಗಳೇ ರಾರಾಜಿಸುತ್ತಿವೆ. ನದಿ ಪಕ್ಕದ ಕಲ್ಲುಗಳ ಮೇಲೆ ವಿಚಿತ್ರ ಪೂಜೆಗಳು ನಡೆದಿರುವ ಕುರುಹುಗಳು ದಿನೇದಿನೆ ಹೆಚ್ಚುತ್ತಿವೆ. ಪೂಜೆಗೆ ಬಳಸುವ ಸಾಮಾನುಗಳನ್ನು ನದಿಗೆ ಎಸೆಯುತ್ತಿರುವುದರಿಂದ ನದಿಯೊಡಲು ಕಲುಷಿತಗೊಂಡಿದೆ.
ದೇವರ ಗಾಜಿನ ಫೋಟೋಗಳನ್ನು ನದಿಗೆ ಎಸೆಯುತ್ತಿರುವುದರಿಂದ ನೀರಿನಲ್ಲಿ ಹೆಜ್ಜೆ ಇರಿಸಿದರೆ ಗಾಜಿನ ಚೂರುಗಳೇ ತುಂಬಿದೆ. ಹಾಸನ, ಚಿಕ್ಕಮಗಳೂರು ಮತ್ತು ಬೇಲೂರು ತಾಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸುವ ನದಿಗೆ ಈ ದುಸ್ಥಿತಿ ಬಂದಿರುವುದು ಶೋಚನೀಯವೇ ಸರಿ.
ಯಗಚಿ ನದಿ ದಂಡೇಲಿ ವಾಮಾಚಾರ ಪಿಡುಗು ರಾಷ್ಟ್ರೀಯ ಹೆದ್ದಾರಿ ನಡುವೆ ಹಾದು ಹೋಗಿರುವ ಕಂದಲಿ ಸಮೀಪದ ಯಗಚಿ ನದಿ ಬಳಿ ಹಗಲು -ರಾತ್ರಿ ಎನ್ನದೆ ವಾಮಾಚಾರ ನಡೆಯುವುದರಿಂದ ಯಾರೊಬ್ಬರು ಇತ್ತ ಕಡೆ ಸುಳಿಯುವುದಿಲ್ಲ. ಹಾಗಾಗಿ ಈ ಪ್ರದೇಶದಲ್ಲಿ ಮದ್ಯ ಸೇವನೆ ಹಾಗೂ ಇನ್ನಿತರ ಅನೈತಿಕ ಚಟುವಟಿಕೆ ಹೆಚ್ಚಾಗುತ್ತಿದೆ. ಮುಖ್ಯರಸ್ತೆಯ ಪಕ್ಕದಲ್ಲಿ ಇರುವ ಈ ಖಾಲಿ ಜಾಗದಲ್ಲಿ ವಾಹನ ನಿಲ್ಲಿಸಿಕೊಂಡು ಮದ್ಯಪಾನ ಮಾಡುತ್ತಿರುವುದು ಸಾಮಾನ್ಯವಾಗಿದೆ. ರಾತ್ರಿ ವೇಳೆ ಇಲ್ಲಿ ಹೋಗಲು ಭಯಪಡುವ ವಾತಾವರಣ ಇದೆ.
ಕಂದಲಿ ಸುತ್ತಲಿನ ಗ್ರಾಮಗಳ ಜನರು ತಮ್ಮ ಜಾನುವಾರುಗಳನ್ನು ಇಲ್ಲಿಗೆ ತಂದು ನೀರು ಕುಡಿಸುತ್ತಿದ್ದರು. ಆದರೆ ಮಾಟ ಮಂತ್ರದ ಹಾವಳಿ ಹೆಚ್ಚಾದ ಪರಿಣಾಮ ಈ ಕಡೆಗೆ ಜನರು ಬರಲು ಹೆದರುತ್ತಿದ್ದಾರೆ. ಸೇತುವೆಯಿಂದ ಎರಡು ಕಿ.ಮೀ. ದೂರ ಕ್ರಿಮಿಸಿ ದನಕರುಗಳಿಗೆ ನೀರು ಕುಡಿಸಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ. ಇದಲ್ಲದೆ ಅಪ್ಪಿ ತಪ್ಪಿ ಇಲ್ಲಿ ನೀರು ಕುಡಿಸಿದರೆ ಎಲ್ಲಿ ಜಾನುವಾರುಗಳು ಮೃತಪಡುತ್ತವೊ ಅನ್ನುವ ಭಯ ಅವರಲ್ಲಿಇದೆ. ದಿನಕಳೆದಂತೆ ಸೇತುವೆ ಕೆಳಗೆ ಕಾಣಿಸುತ್ತಿರುವ ವಾಮಾಚಾರದ ಸಾಮಗ್ರಿಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿದಿನ ರಾತ್ರಿ ಕತ್ತಲಾಗುತ್ತಿದ್ದಂತೆ ಬರುವ ಜನರು ಮಾಟ ಮಂತ್ರದ ಸರಕುಗಳನ್ನು ಅಲ್ಲಿ ಎಸೆಯುತ್ತಿದ್ದಾರೆ. ಯಗಚಿ ಜಲಾಶಯದಿಂದ ಹೇಮಾವತಿಗೆ ಸಂಪರ್ಕ ಕಲ್ಪಿಸುವ ಯಗಚಿ ನದಿಯಲ್ಲಿ ಮಳೆಯ ಹಿನ್ನೆಲೆಯಲ್ಲಿ ಒಂದಿಷ್ಟು ನೀರಿನ ಸಂಗ್ರಹವಿದೆ.