ಹಾಸನ: ಮುಂದಿನ ಎರಡುವರ್ಷ ತಾನೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ದೃಢ ವಿಶ್ವಾಸ ವ್ಯಕ್ತಪಡಿಸಿದರು.ಹಾಸನ ಜಿಲ್ಲೆಯ ಜಿಪಂ ಹೊಯ್ಸಳ ಸಭಾಂಗಣದಲ್ಲಿ ಕೊರೊನಾ ಹಾಗೂ ಜಿಲ್ಲೆಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಉಸ್ತುವಾರಿ ಅರುಣ್ಸಿಂಗ್ ಅವರೇ ಸಿಎಂ ಎರಡುವರ್ಷ ಇರುತ್ತಾರೆ, ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಬಳಿಕ ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. ಅರುಣ್ಸಿಂಗ್ ತಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ತಮ್ಮ ಜವಾಬ್ದಾರಿ ಹೆಚ್ಚಿಸಿದೆ, ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್ಶಾ ಅವರು ತನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಪೂರಕವಾಗಿ ಇನ್ನಷ್ಟು ಶಕ್ತಿ ಮೀರಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಬಿಎಸ್ವೈ ನಮ್ಮ ನಾಯಕರು, ಸಿಎಂ ಆಗಿ ಮುಂದುವರಿಯುತ್ತಾರೆ, ಅಶ್ವತ್ಥ ನಾರಾಯಣ
ಒಂದು ವರ್ಷದಿಂದ ಕೊರೊನಾ ದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು,ಇದರ ನಡುವೆ ಎರಡು ಪ್ಯಾಕೇಜ್ ಘೋಷಿಸುವ ಜತೆಗೆ ನೀರಾವರಿಗೂ ಆದ್ಯತೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಥಮ ಜಿಲ್ಲೆಯಾಗಿ ಹಾಸನ ಆಯ್ಕೆ ಮಾಡಿಕೊಂಡು ಕೋವಿಡ್ ಪ್ರಗತಿ ಪರಿಶೀಲಿಸಿದ್ದೇನೆ ಎಂದರು. ದೊಡ್ಡ ಪ್ರಮಾಣದಲ್ಲಿ ಲಸಿಕೆ ಕಳುಹಿಸಿದರೆ ಮೂರನೇ ಅಲೆ ತಪ್ಪಿಸಬಹುದು ಎಂದು ಶಾಸಕ ಮಿತ್ರರು ತಿಳಿಸಿದ್ದಾರೆ, ಸಚಿವ ಡಾ.ಸು‘ಕರ್ ಅವರೊಂದಿಗೆ ಚರ್ಚಿಸಿ ಲಸಿಕೆ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿಗೆ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡುವುದಾಗಿ ‘ಭರವಸೆ ನೀಡಿದರು. ಕಾಡಾನೆ ಸಮಸ್ಯೆ ನಿವಾರಣೆಗೆ ಹಾಸನ-ಕೊಡಗು ಗಡಿ‘ಗದಲ್ಲಿ ಶಾಶ್ವತ ರೈಲ್ವೆಬ್ಯಾರಿಕೇಡ್ ಅಳವಡಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಕ್ರಮ ಕೈಗೊಳ್ಳಲಾಗುವುದು.ಕೊರೊನಾ ಕಾರಣದಿಂದ ಎತ್ತಿನಹೊಳೆ ಯೋಜನೆ ಕಾಮಗಾರಿ ಕುಂಠಿತಗೊಂಡಿತ್ತು, ಪರಿಹಾರಕ್ಕೆ 199 ಕೋಟಿ ಹಣದ ಲಭ್ಯತೆ ಇದೆ, ಕಾಮಗಾರಿಗೆ ವೇಗ ನೀಡುವುದಾಗಿ ತಿಳಿಸಿದರು.
ಬಿಎಸ್ವೈ ನಮ್ಮ ನಾಯಕರು, ಸಿಎಂ ಆಗಿ ಮುಂದುವರಿಯುತ್ತಾರೆ, ಅಶ್ವತ್ಥ ನಾರಾಯಣ
ಒಂದು ವರ್ಷದಿಂದ ಕೊರೊನಾ ದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು,ಇದರ ನಡುವೆ ಎರಡು ಪ್ಯಾಕೇಜ್ ಘೋಷಿಸುವ ಜತೆಗೆ ನೀರಾವರಿಗೂ ಆದ್ಯತೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಥಮ ಜಿಲ್ಲೆಯಾಗಿ ಹಾಸನ ಆಯ್ಕೆ ಮಾಡಿಕೊಂಡು ಕೋವಿಡ್ ಪ್ರಗತಿ ಪರಿಶೀಲಿಸಿದ್ದೇನೆ ಎಂದರು. ದೊಡ್ಡ ಪ್ರಮಾಣದಲ್ಲಿ ಲಸಿಕೆ ಕಳುಹಿಸಿದರೆ ಮೂರನೇ ಅಲೆ ತಪ್ಪಿಸಬಹುದು ಎಂದು ಶಾಸಕ ಮಿತ್ರರು ತಿಳಿಸಿದ್ದಾರೆ, ಸಚಿವ ಡಾ.ಸು‘ಕರ್ ಅವರೊಂದಿಗೆ ಚರ್ಚಿಸಿ ಲಸಿಕೆ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿಗೆ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡುವುದಾಗಿ ‘ಭರವಸೆ ನೀಡಿದರು. ಕಾಡಾನೆ ಸಮಸ್ಯೆ ನಿವಾರಣೆಗೆ ಹಾಸನ-ಕೊಡಗು ಗಡಿ‘ಗದಲ್ಲಿ ಶಾಶ್ವತ ರೈಲ್ವೆಬ್ಯಾರಿಕೇಡ್ ಅಳವಡಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಕ್ರಮ ಕೈಗೊಳ್ಳಲಾಗುವುದು.ಕೊರೊನಾ ಕಾರಣದಿಂದ ಎತ್ತಿನಹೊಳೆ ಯೋಜನೆ ಕಾಮಗಾರಿ ಕುಂಠಿತಗೊಂಡಿತ್ತು, ಪರಿಹಾರಕ್ಕೆ 199 ಕೋಟಿ ಹಣದ ಲಭ್ಯತೆ ಇದೆ, ಕಾಮಗಾರಿಗೆ ವೇಗ ನೀಡುವುದಾಗಿ ತಿಳಿಸಿದರು.