ಆ್ಯಪ್ನಗರ

ಬಸ್‌ಗಳ ಮುಖಾಮುಖಿ ಡಿಕ್ಕಿ: ಚಾಲಕ ಸಾವು

ಎರಡು ಕೆಎಸ್‌ಆರ್‌ಟಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ ಜೆಎಸ್‌ಎಸ್‌ ಶಾಲೆ ಬಳಿ ಬೆಳಗಿನ ಜಾವ 3.30ರಲ್ಲಿ ಸಂಭವಿಸಿದೆ.

Vijaya Karnataka 11 May 2019, 5:00 am
ಹಾಸನ: ಎರಡು ಕೆಎಸ್‌ಆರ್‌ಟಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಕಲೇಶಪುರ ತಾಲೂಕಿನ ಜೆಎಸ್‌ಎಸ್‌ ಶಾಲೆ ಬಳಿ ಬೆಳಗಿನ ಜಾವ 3.30ರಲ್ಲಿ ಸಂಭವಿಸಿದೆ.
Vijaya Karnataka Web bus accident driver killed
ಬಸ್‌ಗಳ ಮುಖಾಮುಖಿ ಡಿಕ್ಕಿ: ಚಾಲಕ ಸಾವು


ಕುಂದಾಪುರ ಮೂಲದ ಪ್ರಭಾಕರ್‌ ಮೃತರು. ಕುಂದಾಪುರದಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್‌ಗಳ ನಡುವೆ ಸಕಲೇಶಪುರ ತಾಲೂಕು ಬಾಗೆಯ ಜೆಎಸ್‌ಎಸ್‌ ಶಾಲೆ ಎದುರು ಡಿಕ್ಕಿಯಾಗಿದೆ. ಪರಿಣಾಮ ಕುಂದಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್‌ನ ಚಾಲಕ ಪ್ರಭಾಕರ್‌ ಸ್ಥಳದಲ್ಲೇ ಮೃತಪಟ್ಟರು.

ಪ್ರಯಾಣಿಕರಾದ ನಿಕಿತ್‌, ಅಗರ್‌ವಾಲ್‌, ಮಧುಸೂಧನ್‌, ಅನುಷ, ಶ್ವೇತ ಹಾಗೂ ಇತರರಿಗೆ ಹಾಗೂ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ನಲ್ಲಿದ್ದ ಚಾಲಕ ಯೋಗರಾಜ್‌, ಪ್ರಯಾಣಿಕರಾದ ಮೀನ, ಸಂಜೀವ, ಬಾಲಕೃಷ್ಣ,ಕುಮಾರ, ಕಿಶೋರ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು , ಸಕಲೇಶಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆದಿದ್ದಾರೆ. ಮೃತ ಪ್ರಭಾಕರ್‌ ಅವರಿದ್ದ ಬಸ್‌ನ ಮತ್ತೊಬ್ಬ ಚಾಲಕ ರಾಜೇಶ್‌ ಕೊಟ್ಟ ದೂರಿನ ಮೇಲೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ