ಆ್ಯಪ್ನಗರ

ಸಾರಿಗೆ ಬಸ್‌ ಹರಿದು ವಿದ್ಯಾರ್ಥಿನಿ ಗಂಭೀರ ಗಾಯ

ಆಸ್ಪತ್ರೆಗೆ ದಾಖಲಾಗಿರುವ ತಂದೆಗೆ ತಿಂಡಿ ತೆಗೆದುಕೊಂಡು ಹೋಗುವಾಗ ನಗರದ ಕೆಎಸ್‌ಆರ್‌ಟಿಸಿ ಹೊಸ ಬಸ್‌ ನಿಲ್ದಾಣದ ಮುಂಭಾಗ ಸಾರಿಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಯುವತಿ ಗಂಭೀರ ಗಾಯಗೊಂಡಿದ್ದಾಳೆ.

Vijaya Karnataka 2 Aug 2019, 5:00 am
ಹಾಸನ: ಆಸ್ಪತ್ರೆಗೆ ದಾಖಲಾಗಿರುವ ತಂದೆಗೆ ತಿಂಡಿ ತೆಗೆದುಕೊಂಡು ಹೋಗುವಾಗ ನಗರದ ಕೆಎಸ್‌ಆರ್‌ಟಿಸಿ ಹೊಸ ಬಸ್‌ ನಿಲ್ದಾಣದ ಮುಂಭಾಗ ಸಾರಿಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಯುವತಿ ಗಂಭೀರ ಗಾಯಗೊಂಡಿದ್ದಾಳೆ.
Vijaya Karnataka Web bus hits college girl
ಸಾರಿಗೆ ಬಸ್‌ ಹರಿದು ವಿದ್ಯಾರ್ಥಿನಿ ಗಂಭೀರ ಗಾಯ


ಕೆ.ಎಚ್‌.ಬಿ ಬಡಾವಣೆಯ ನಿವಾಸಿ ಲಕ್ಷ್ಮೇಗೌಡ ಅವರ ಪುತ್ರಿ ರೇಷ್ಮ (26) ಗಾಯಾಳು ಯುವತಿ.

ಹಾಸನದ ಅಲಾನ ಕಾಫಿ ಕ್ಯೂರಿಂಗ್‌ನಲ್ಲಿ ಲಕ್ಷ್ಮೇಗೌಡ ಅವರು ಕೆಲಸ ನಿರ್ವಹಿಸುವಾಗ ಮಷಿನ್‌ ಬಿದ್ದು ಗಂಭೀರ ಗಾಯಗೊಂಡಿದ್ದರು. ಹೀಗಾಗಿ ಇವರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ಕೆ.ಎಚ್‌.ಬಿ ಬಡಾವಣೆಯ ತಮ್ಮ ನಿವಾಸದಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿರುವ ತಂದೆಗೆ ಬೆಳಗ್ಗಿನ ತಿಂಡಿ ತೆಗೆದುಕೊಂಡು ರೇಷ್ಮ ರಸ್ತೆ ದಾಟುತ್ತಿದ್ದಾಗ ನಿಲ್ದಾಣದಿಂದ ವೇಗವಾಗಿ ಬಂದ ಬಸ್‌ ಡಿಕ್ಕಿ ಹೊಡೆದಿದೆ. ಘಟನೆಯಿಂದ ಯುವತಿಯ ದೇಹದ ಅರ್ಧಭಾಗ ನಜ್ಜುಗುಜ್ಜಾಗಿದ್ದು, ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಸೆಣಸಾಡುತ್ತಿದ್ದಾಳೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಬಸ್‌ ಚಾಲಕ ಘಟನೆ ಬಳಿಕ ಪರಾರಿಯಾಗಿದ್ದಾನೆ. ಬಡಾವಣೆ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್‌ ವಶಪಡಿಸಿದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಚಾಲಕ ಅತಿವೇಗ ಹಾಗೂ ನಿರ್ಲಕ್ಷ ್ಯದಿಂದ ಬಸ್‌ ಚಾಲನೆ ಮಾಡಿದ್ದೇ ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ