ಆ್ಯಪ್ನಗರ

ಹಾಸನ: ರಾಜಕೀಯದ ಪ್ರತಿಷ್ಠೆಯ ಕಣವಾದ ಬಸ್ ಸಂಚಾರಕ್ಕೆ ಬಿತ್ತು ಬ್ರೇಕ್!

ರಸ್ತೆ ರಾಷ್ಟ್ರೀಕರಣವಾದ ನಂತರ ಪ್ರತಿ ಗ್ರಾಮಕ್ಕೂ ಬಸ್ ಸಂಚಾರದ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕೆಲಸ. ಹಾಗಾಗಿ ಗ್ರಾಮಸ್ಥರ ಮನವಿ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಈ ಗ್ರಾಮಗಳಿಗೆ ದಶಕಗಳ ನಂತರ ಬಸ್ ಬಿಡಲಾಗಿತ್ತು. ಆದರೆ ಬಸ್ ಸಂಚಾರ ಮಾಡುವಲ್ಲಿಯೂ ರಾಜಕೀಯ ರೂಪ ಪಡೆದು ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಎರಡು ದಿನಗಳ ಕಾಲ ಸಂಚಾರ ಮಾಡಿದ ಬಸ್‌ಗಳು ಸಂಸ್ಥೆಗೆ ಉತ್ತಮ ಆದಾಯವನ್ನು ಕೂಡಾ ತಂದಿತ್ತು. ಆದರೆ ಸಂಚಾರ ಮಾಡಿದ ಎರಡೇ ದಿನದಲ್ಲಿ ಬಸ್ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.

Edited byನಿಖಿಲ್\u200c ಕುಲಕರ್ಣಿ | Vijaya Karnataka Web 21 Apr 2022, 6:49 pm

ಹೈಲೈಟ್ಸ್‌:

  • ಹಾನಸದಲ್ಲಿ ರಾಜಕೀಯ ಪ್ರತಿಷ್ಠೆಗೆ ಬಸ್ ಸಂಚಾರ ಸ್ಥಗಿತ.
  • ಹಾಸನ ವಿಭಾಗದ ವಿವಿಧ ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ವತಿಯಯಿಂದ ಬಸ್ ಸಂಚಾರ.
  • ಸಚಿವ ಗೋಪಾಲಯ್ಯ ಆದೇಶದ ಮೇಲೆ ಬಸ್ ಸಂಚಾರ ಆರಂಭಿಸಿದ್ದ ಕೆಎಸ್‌ಆರ್‌ಟಿಸಿ.
  • ನಾನೇ ಬಸ್ ಸಂಚಾರ ಉದ್ಘಾಟನೆ ಮಾಡುವುದಾಗಿ ಪಟ್ಟು ಹಿಡಿದಿರುವ ಶಾಸಕ ಬಾಲಕಷ್ಣ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Bus Service
ಬಸ್ ಸರ್ವೀಸ್‌ಗೆ ಬ್ರೇಕ್
ಹಾಸನ: ರಸ್ತೆ ರಾಷ್ಟ್ರೀಕರಣವಾದ ನಂತರ ಪ್ರತಿ ಗ್ರಾಮಕ್ಕೂ ಬಸ್ ಸಂಚಾರದ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕೆಲಸ. ಹಾಗಾಗಿ ಗ್ರಾಮಸ್ಥರ ಮನವಿ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಈ ಗ್ರಾಮಗಳಿಗೆ ದಶಕಗಳ ನಂತರ ಬಸ್ ಬಿಡಲಾಗಿತ್ತು. ಆದರೆ ಬಸ್ ಸಂಚಾರ ಮಾಡುವಲ್ಲಿಯೂ ರಾಜಕೀಯ ರೂಪ ಪಡೆದು ಸಂಚಾರಕ್ಕೆ ಬ್ರೇಕ್ ಬಿದ್ದಿದೆ.
ಹೌದು, ಹಾಸನ ವಿಭಾಗದ ಚನ್ನರಾಯಪಟ್ಟಣದಿಂದ ಗೊಮ್ಮಟನಗರಿ ಶ್ರವಣಬೆಳಗೂಳ ಮಾರ್ಗವಾಗಿ ಪರಮ, ದಿಡಗ, ಊಳಿಗೆರೆ, ಬೂಕ, ಮಾರ್ಗವಾಗಿ ಹಿರೀಸಾವೆ ತಲುಪಲು ಕಳೆ ಮೂರು ದಿನಗಳ ಹಿಂದೆ ಗ್ರಾಮಸ್ಥರ ಮನವಿ ಮೇರೆಗೆ ಪರಮ ಗ್ರಾಮದಿಂದ ಬಸ್‌ಗೆ ಪೂಜೆ ಸಲ್ಲಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಎರಡು ದಿನಗಳ ಕಾಲ ಸಂಚಾರ ಮಾಡಿದ ಬಸ್‌ಗಳು ಸಂಸ್ಥೆಗೆ ಉತ್ತಮ ಆದಾಯವನ್ನು ಕೂಡಾ ತಂದಿತ್ತು. ಆದರೆ ಸಂಚಾರ ಮಾಡಿದ ಎರಡೇ ದಿನದಲ್ಲಿ ಬಸ್ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.

ರಾಜಕೀಯ ಪ್ರತಿಷ್ಠೆಯ ಕಣವಾದ ಬಸ್ ಸಂಚಾರ ಪ್ರಕರಣ:

ಈ ಗ್ರಾಮಕ್ಕೆ ಬಸ್ ಬಿಡುವಂತೆ ಶಾಸಕ ಸಿಎನ್ ಬಾಲಕೃಷ್ಣ ಅವರಿಗೆ ಹಿಂದೆ ಹತ್ತಾರು ಬಾರಿ ಈ ಗ್ರಾಮದ ಜನರು, ಜೆಡಿಎಸ್ ಕಾರ್ಯಕರ್ತರು ಮನವಿ ಸಲ್ಲಿಸಿದರು. ಆದರೆ ಇದಕ್ಕೆ ಮನ್ನಣೆ ನೀಡದ ಶಾಸಕರು ಕೇವಲ ಭರವಸೆ ನೀಡುತ್ತಿದ್ದರು ಎಂಬ ಆಪಾದನೆ ಕೇಳಿ ಬಂದಿದೆ. ಇದರಿಂದ ಸಿಡಿದೆದ್ದ ಗ್ರಾಮಸ್ಥರು ಹಾಗೂ ಗ್ರಾಮದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಒಳಗೊಂಡಂತೆ ಪಕ್ಷಾತೀತವಾಗಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.


ಗ್ರಾಮಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸೋಮವಾರದಿಂದ ಈ ಗ್ರಾಮಗಳಿಗೆ ಬಸ್ ಸಂಚಾರ ಮಾಡಬೇಕೆಂದು ಆದೇಶ ನೀಡಿದ್ದರಿಂದ, ಕೆಎಸ್‌ಆರ್‌ಟಿಸಿ ಸಂಸ್ಥೆ ಕಳೆದ ಸೋಮವಾರ ಬಸ್ ಸಂಚಾರವನ್ನ ಗ್ರಾಮಸ್ಥರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಆರಂಭ ಮಾಡಿತ್ತು.

ಬಸ್ ಸಂಚಾರ ಆರಂಭ ಗೊಂಡ ಹಿನ್ನೆಲೆಯಲ್ಲಿ ಗ್ರಾಮದ ಪಕ್ಷಾತೀತ ಕಾರ್ಯಕರ್ತರು ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಾರದ ಬಗ್ಗೆ ಫೋಟೋಗಳನ್ನು ಹಂಚಿಕೊಂಡು ಸರ್ಕಾರಕ್ಕೆ ಧನ್ಯವಾದ ಹೇಳಿದ್ದರು.

ಬಸ್ ಸಂಚಾರ ಆರಂಭಿಸಿದ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಹಿನ್ನಲೆನಲ್ಲಿ ಶಾಸಕ ಬಾಲಕೃಷ್ಣ ಬಸ್ ಸಂಚಾರವನ್ನು ನಿಲ್ಲಿಸುವಂತೆ ಹಾಗೂ ಮುಂದಿನ ಸೋಮವಾರ ಖುದ್ದು ನಾನೇ ಮತ್ತೆ ಬಸ್ ಸಂಚಾರ ಆರಂಭಿಸುವುದಾಗಿ ಪಟ್ಟು ಹಿಡಿದಿದ್ದಾರೆ.

ಮೈಸೂರಿನಲ್ಲಿ ಡಬಲ್‌ ಡೆಕ್ಕರ್‌ ಬಸ್‌ ಸೇವೆ, ಟಿಕೆಟ್‌ ದರ ಕಡಿತ
ಕಳೆದೆರಡು ದಿನಗಳಿಂದ ಸಂಸ್ಥೆಗೆ ಉತ್ತಮ ಆದಾಯ ತಂದು ಕೊಡುತ್ತಿದ್ದ ಸಂಚಾರಕ್ಕೆ ಈಗ ಬ್ರೇಕ್ ಬಿದ್ದಿದ್ದು, ಈ ವಿಚಾರವನ್ನ ಜಿಲ್ಲಾ ಉಸ್ತುವಾರಿ ಹಾಗೂ ಸಾರಿಗೆ ಸಚಿವರ ಗಮನಕ್ಕೆ ತರುತ್ತೇನೆ ಎಂದರು ಶಾಸಕರ ಬಳಿ ಒಮ್ಮೆ ಮಾತನಾಡುತ್ತಿರುವ ಮಹಿಳಾ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಮತ್ತು ಇವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿಯ ಮುಖಂಡರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ