ಆ್ಯಪ್ನಗರ

ಬೈಕ್‌ಗೆ ಕಾರು ಡಿಕ್ಕಿ: ಸವಾರನಿಗೆ ತೀವ್ರಗಾಯ

ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ತೀವ್ರಗಾಯಗೊಂಡಿವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ವಾಟೇಹಳ್ಳಿ ಬಸ್‌ನಿಲ್ದಾಣದ ಬಳಿ ನಡೆದಿದೆ.

Vijaya Karnataka 23 Sep 2019, 5:00 am
ಅರೇಹಳ್ಳಿ (ಬೇಲೂರು): ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ತೀವ್ರಗಾಯಗೊಂಡಿವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ವಾಟೇಹಳ್ಳಿ ಬಸ್‌ನಿಲ್ದಾಣದ ಬಳಿ ನಡೆದಿದೆ.
Vijaya Karnataka Web car collides with bike rider seriously injured
ಬೈಕ್‌ಗೆ ಕಾರು ಡಿಕ್ಕಿ: ಸವಾರನಿಗೆ ತೀವ್ರಗಾಯ


ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದ ಮಂಜುನಾಥ್‌(30) ಹಾಗೂ ರವಿ(27) ಭಾನುವಾರ ಸಂಜೆ ವೈಯಕ್ತಿಕ ಕೆಲಸದ ನಿಮಿತ್ತ ಅರೇಹಳ್ಳಿಗೆ ಬೈಕ್‌ನಲ್ಲಿ ಬಂದಿದ್ದು, ನಂತರ ವಾಟೇಹಳ್ಳಿ ಮಾರ್ಗವಾಗಿ ಊರಿಗೆ ವಾಪಸಾಗುತ್ತಿದ್ದರು. ಆದರೆ ವಾಟೇಹಳ್ಳಿ ಗ್ರಾಮದ ಬಸ್‌ನಿಲ್ದಾಣದ ಮುಂದಿರುವ ತಿರುವಿನ ಬಳಿ ಸಕಲೇಶಪುರ ಕಡೆಯಿಂದ ವಾಟೇಹಳ್ಳಿ ಮಾರ್ಗವಾಗಿ ಬರುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮಂಜುನಾಥ್‌ ತೀವ್ರ ಗಾಯಗೊಂಡರು. ಹಿಂಬದಿ ಸವಾರ ರವಿಯೂ ಗಾಯಗೊಂಡಿದ್ದು, ತಕ್ಷಣ ಇಬ್ಬರನ್ನೂ ಆಂಬ್ಯುಲೆನ್ಸ್‌ನಲ್ಲಿಕರೆದೊಯ್ದು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ