ಆ್ಯಪ್ನಗರ

ನಾಳೆ ಹಾಸನಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ: ಸಚಿವ ರೇವಣ್ಣ

''ನನಗೆ ನನ್ನ ಜಿಲ್ಲೆಯ ಅಭಿವೃದ್ಧಿ ಮುಖ್ಯ. 10 ವರ್ಷಗಳಿಂದ ಅಭಿವೃದ್ಧಿ ಕಾಣದ ಜಿಲ್ಲೆ ಅಭಿವೃದ್ಧಿಯೇ ನನ್ನ ಗುರಿ'' ಎಂದು ಸಚಿವ ರೇವಣ್ಣ ಹೇಳಿದ್ದಾರೆ.

Vijaya Karnataka Web 30 Nov 2018, 1:11 pm
ಹಾಸನ: ''ಜಿಲ್ಲೆಗೆ ನಾಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಸಿ.ಎಂ ಕುಮಾರಸ್ವಾಮಿ ಭೇಟಿ ನೀಡಲಿದ್ದು, 1865 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗೆ ಚಾಲ‌ನೆ ನೀಡಲಿದ್ದಾರೆ'' ಎಂದು ಪತ್ರಿಕಾಗೊಷ್ಠಿಯಲ್ಲಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ. ಅಲ್ಲದೆ,'' ಅಪರೇಶನ್ ಕಮಲದಿಂದ ಸರಕಾರಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಸರಕಾರ 5 ವರ್ಷ ಸಧೃಡವಾಗಿರುತ್ತೆ'' ಎಂದು ಸಹ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vijaya Karnataka Web h d revanna


ಅಲ್ಲದೆ, ''ಅದನ್ನೆಲ್ಲ ಸಿ.ಎಂ ಕುಮಾರಸ್ವಾಮಿ, ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನೋಡಿಕೊಳ್ಳುತ್ತಾರೆ. ನನಗೆ ನನ್ನ ಜಿಲ್ಲೆಯ ಅಭಿವೃದ್ಧಿ ಮುಖ್ಯ. 10 ವರ್ಷಗಳಿಂದ ಅಭಿವೃದ್ಧಿ ಕಾಣದ ಜಿಲ್ಲೆ ಅಭಿವೃದ್ಧಿಯೇ ನನ್ನ ಗುರಿ'' ಎಂದು ಸಚಿವ ರೇವಣ್ಣ ಹೇಳಿದ್ದಾರೆ. ಇನ್ನೊಂದೆಡೆ, ಜಿಲ್ಲಾ ಕಾಂಗ್ರೆಸ್ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ರೇವಣ್ಣ, ''ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ಬೇಡಿಕೆಗಳನ್ನೆಲ್ಲಾ ಈಡೇರಿಸಿದ್ದೇನೆ. ದೂರು ನೀಡಿದ್ದರೆ ಸಿದ್ದರಾಮಯ್ಯ, ಪರಮೇಶ್ವರ್ ಕರೆದು ಕೇಳಲಿ ಉತ್ತರ ನೀಡುತ್ತೇನೆ'' ಎಂದು ಹಾಸನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.

ಇನ್ನು, ಹಾಸನ ನಗರವನ್ನು ಕಡಗಣನೆ ಮಾಡುತ್ತಿರುವ ಬಗ್ಗೆ ಶಾಸಕರ ಆರೋಪದ ಬಗ್ಗೆ ಮಾತನಾಡಿದ ಸಚಿವರು, ''ಹಕ್ಕುಚ್ಯುತಿ ಮಂಡನೆ ಮಾಡಿದರೆ ಸಂತೋಷ. ಅದಕ್ಕೆ ಉತ್ತರ ನೀಡಲು ಸಿದ್ದನಿದ್ದೇನೆ'' ಎಂದು ಹಾಸನ ನಗರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂಬ ಶಾಸಕ ಪ್ರೀತಂ ಗೌಡ ಹೇಳಿಕೆಗೆ ರೇವಣ್ಣ ಗರಂ ಆಗಿ ಉತ್ತರ ನೀಡಿದ್ದಾರೆ. ಜತೆಗೆ, '' 50 ಕೋಟಿ ರೂ ವೆಚ್ಚದ ಕೆಲಸ ಕ್ಷೇತ್ರದಲ್ಲಿ ನಡೆಯುತ್ತಿದೆ. ಪ್ರೀತಂ ಗೌಡರು ಆಕಸ್ಮಿಕ ಶಾಸಕರಾಗಿದ್ದಾರೆ. ವಿಷಯ ತಿಳಿಯದೇ ಮಾತನಾಡುತ್ತಾರೆ. ಉದ್ಯೋಗ ಸೃಷ್ಟಿ ಬಗ್ಗೆ ಮಾತನಾಡುವ ಅವರು ಮೋದಿ, ಸುಧಾಮೂರ್ತಿ ಜೊತೆ ಚರ್ಚಿಸಲಿ. ಹಾಸನದಲ್ಲಿ 40 ಸಾವಿರ ಉದ್ಯೋಗ ಸೃಷ್ಟಿಮಾಡಿದ್ದೇವೆ. ಎಲ್ಲವನ್ನೂ ರೇವಣ್ಣನೇ ಮಾಡಲಿ‌ ಎನ್ನುವ ಬದಲು ಅವರೂ ಕೆಲಸ ಮಾಡಲಿ'' ಎಂದು ಶಾಸಕ ಪ್ರೀತಂ ಗೌಡ ಹೇಳಿಕೆಗೆ ಸಚಿವ ರೇವಣ್ಣ ಟಾಂಗ್ ನೀಡಿದ್ದಾರೆ.

ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಹೆಚ್.ಡಿ.ರೇವಣ್ಣ

ಹಾಸನ:
ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ವಾಪಸ್ ಹೋಗುವಾಗ ರೇವಣ್ಣಗೆ ಜಿಲ್ಲೆಯಲ್ಲಿ ಟ್ರಾಫಿಕ್ ಕಿರಿಕಿರಿಯ ಅನುಭವವಾಗಿದೆ. ಸಚಿವ ರೇವಣ್ಣ ಕಾರು ಚಲಿಸುವಾಗ ರೈಲ್ವೆ ಗೇಟ್ ಬಂದ್ ಆದ ಕಾರಣ 15 ನಿಮಿಷ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಟ್ರಾಫಿಕ್ ಜಾಮ್‌ನಲ್ಲಿ ಸಚಿವರು ಸಿಲುಕಿಕೊಂಡವರನ್ನು ಕಂಡ ಜನರು, ''ರೈಲ್ವೆ ಮೇಲ್ಸೇತುವೆ ಇಲ್ಲದೆ ನಿತ್ಯ ‌ಸಾಮಾನ್ಯ‌ ಜನರಿಗೆ ತೊಂದರೆಯಾಗುತ್ತಿದೆ. ಆದರಿಂದು ಸಚಿವರೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆಂದು'' ಗೇಲಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ