ಆ್ಯಪ್ನಗರ

ಮಳೆ ಹಾನಿ ಪರಿಹಾರಕ್ಕೆ ಕೇಂದ್ರ ಬಿಡಿಗಾಸೂ ಕೊಟ್ಟಿಲ್ಲ: ರೇವಣ್ಣ

ಮಳೆ ಹಾಗೂ ಭೂಕುಸಿತಗಳಿಂದಾಗಿ ಆದ ಭಾರೀ ನಷ್ಟವನ್ನು ಭರಿಸಲು ಕೇಂದ್ರ ಸರಕಾರ ಇದುವರೆಗೆ ಬಿಡಿಗಾಸೂ ಕೊಟ್ಟಿಲ್ಲ ಎಂದು ಲೋಕೋಪಯೋಗಿ ಖಾತೆ ಸಚಿವ ಎಚ್‌.ಡಿ ರೇವಣ್ಣ ದೂರಿದರು.

Vijaya Karnataka Web 29 Aug 2018, 4:29 pm
ಹಾಸನ: ಮಳೆ ಹಾಗೂ ಭೂಕುಸಿತಗಳಿಂದಾಗಿ ಆದ ಭಾರೀ ನಷ್ಟವನ್ನು ಭರಿಸಲು ಕೇಂದ್ರ ಸರಕಾರ ಇದುವರೆಗೆ ಬಿಡಿಗಾಸೂ ಕೊಟ್ಟಿಲ್ಲ ಎಂದು ಲೋಕೋಪಯೋಗಿ ಖಾತೆ ಸಚಿವ ಎಚ್‌.ಡಿ ರೇವಣ್ಣ ದೂರಿದರು.
Vijaya Karnataka Web Revanna New


ಸ್ಥಳೀಯ ಸಂಸ್ಥೆ ಚುನಾವಣೆ ನಂತರ ಜಿಲ್ಲೆಯ 3 ತಾಲೂಕಿನ ಮಳೆ ಹಾನಿ‌ ಪ್ರದೇಶಕ್ಕೆ ಭೇಟಿ ನೀಡುವುದಾಗಿ ಲೋಕೋಪಯೋಗಿ ಖಾತೆ ಸಚಿವ ಎಚ್‌.ಡಿ ರೇವಣ್ಣ ಹೇಳಿದರು.

'ನನ್ನ ಇಲಾಖೆ ವ್ಯಾಪ್ತಿಯಲ್ಲೇ 300 ಕೋಟಿಗೂ ಅಧಿಕ ನಷ್ಟವಾಗಿದೆ. 8 ರಿಂದ 10 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. ಪರಿಹಾರ ನೀಡುವಲ್ಲಿ ಕೇಂದ್ರ ರಾಜಕೀಯ ಮಾಡಬಾರದು. ಈ ವೇಳೆಗೆ 500 ಕೋಟಿ ರೂ ಬಿಡುಗಡೆ ಮಾಡಬೇಕಿತ್ತು. ರಾಜ್ಯ ಸರಕಾರ ‌2 ಸಾವಿರ ಕೋಟಿ ನೆರವು ಕೇಳಿದ್ದರೂ‌ ಬಿಡಿಗಾಸು ಕೊಟ್ಟಿಲ್ಲ' ಎಂದು ರೇವಣ್ಣ ದೂರಿದರು. ರಾಜ್ಯ ಬಿಜೆಪಿ ಸಂಸದರು, ಕೇಂದ್ರ ಸಚಿವರು ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದರು.

ಶಿರಾಡಿ ಘಾಟ್‌ನಲ್ಲಿ ಭಾರೀ ವಾಹನ ಸಂಚಾರ 6 ತಿಂಗಳು ಅಸಾಧ್ಯ:
ಮಳೆ ನಿಲ್ಲುವ ವರೆಗೂ ಶಿರಾಡಿ ಘಾಟ್ ದುರಸ್ತಿ ಕಾಮಗಾರಿ ಕಷ್ಟಸಾಧ್ಯ. ಈ ಮಾರ್ಗದಲ್ಲಿ ಸುಮಾರು 20 ಕಡೆ ಭೂಮಿ ಕುಸಿದಿದೆ. 6 ತಿಂಗಳ ವರೆಗೂ ಭಾರೀ ವಾಹನ ಓಡಾಟ ಸಾಧ್ಯವೇ ಇಲ್ಲ ಎಂದು ರೇವಣ್ಣ ತಿಳಿಸಿದರು.

ಪ್ರವಾಹ ಸಂತ್ರಸ್ತರಿಗೆ ಬಿಸ್ಕಿಟ್ ಪ್ಯಾಕೆಟ್ ಎಸೆದ ಸಚಿವ ರೇವಣ್ಣ

ಹಾಸನ ಬಿಜೆಪಿ ಶಾಸಕರಿಗೆ ಅಭಿವೃದ್ಧಿ ಏನೆಂಬುದೇ ಗೊತ್ತಿಲ್ಲ. ನಿನ್ನೆ ಮೊನ್ನೆ ಬಂದು ಏನೂ ತಿಳಿಯದೆ ಮಾತನಾಡಬಾರದು ಎಂದು ಶಾಸಕ ಪ್ರೀತಂಗೌಡ ಅವರಿಗೆ ರೇವಣ್ಣ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ