ಆ್ಯಪ್ನಗರ

ಇವ್ರುಗೆ ಅವ್ರು, ಅವ್ರುಗೆ ಇವ್ರು ಚಾಕು ಹಾಕಿದ್ರು: ಕೆ.ಎಸ್‌.ಈಶ್ವರಪ್ಪ

ಜೆಡಿಎಸ್‌ನವರಿಗೆ ಕಾಂಗ್ರೆಸ್‌ನವರು, ಕಾಂಗ್ರೆಸ್‌ನವರಿಗೆ ಜೆಡಿಎಸ್‌ನವರು ಚಾಕು ಹಾಕಿದ್ದರಿಂದ ಅಪವಿತ್ರ ಮೈತ್ರಿ ಸರಕಾರ ಉರುಳಿಬಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

Vijaya Karnataka 22 Sep 2019, 5:00 am
ಮಂಡ್ಯ: ಜೆಡಿಎಸ್‌ನವರಿಗೆ ಕಾಂಗ್ರೆಸ್‌ನವರು, ಕಾಂಗ್ರೆಸ್‌ನವರಿಗೆ ಜೆಡಿಎಸ್‌ನವರು ಚಾಕು ಹಾಕಿದ್ದರಿಂದ ಅಪವಿತ್ರ ಮೈತ್ರಿ ಸರಕಾರ ಉರುಳಿಬಿತ್ತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.
Vijaya Karnataka Web cheating gather ks eshwarappa
ಇವ್ರುಗೆ ಅವ್ರು, ಅವ್ರುಗೆ ಇವ್ರು ಚಾಕು ಹಾಕಿದ್ರು: ಕೆ.ಎಸ್‌.ಈಶ್ವರಪ್ಪ


ಮಂಡ್ಯ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುವ ಹಿನ್ನಲೆಯಲ್ಲಿಎಲ್ಲಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿರಾಜ್ಯದಲ್ಲಿಬಿಜೆಪಿ ಶಕ್ತಿ ಏನೆಂಬುದು ಈಗಾಗಲೇ ವಿರೋಧಿಗಳಿಗೆ ಗೊತ್ತಾಗಿದೆ. ಅದು ಅಷ್ಟಕ್ಕೆ ನಿಲ್ಲುವುದಿಲ್ಲ. ಉಪಚುನಾವಣೆಯಲ್ಲೂನಮ್ಮ ಗೆಲುವು ಮರುಕಳಿಸಲಿದೆ. ಅನರ್ಹ ಶಾಸಕರ ಭವಿಷ್ಯ ಸುಪ್ರೀಂಕೋರ್ಟ್‌ ತೀರ್ಮಾನಿಸುತ್ತದೆ. ಈ ಬಗ್ಗೆ ಏನೂ ಹೇಳುವುದಿಲ್ಲ. ಸುಪ್ರೀಂಕೋರ್ಟ್‌ನಲ್ಲಿಅವರಿಗೆ ಗೆಲುವು ಸಿಗುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ತೀರ್ಪು ತಪ್ಪೆಂಬುದು ಜನರ ಅಭಿಪ್ರಾಯ ಆಗಿದೆ. ಇದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕುರಿತು ಚರ್ಚೆ ನಡೆಸಲಾಗುವುದು. ಆನಂತರ ಕಾರ್ಯಕರ್ತರ ಒಪ್ಪಿಗೆ ಪಡೆದು ಅಭ್ಯರ್ಥಿ ಫೈನಲ… ಮಾಡಲಾಗುವುದು ಎಂದರು.

ಬಿಜೆಪಿ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಮೃದು ಧೋರಣೆ ವಿಚಾರದ ಬಗ್ಗೆ ಕೇಳಿದ ವರದಿಗಾರರ ಪ್ರಶ್ನೆಗೆ ಉತ್ತರಿಸಿ, ಕುಮಾರಸ್ವಾಮಿ ಯಾವ ಸಂದರ್ಭದಲ್ಲಿಯಾರ ಪರ ಇರುತ್ತಾರೋ ಅವರಿಗೆ ಗೊತ್ತಿಲ್ಲ? ಕಾಂಗ್ರೆಸ್‌ ಜತೆಯೇ ಇದ್ದುಕೊಂಡು ಚಾಕು ಹಾಕ್ತಾರೆ. ಕುಮಾರಸ್ವಾಮಿ ಬಿಜೆಪಿ ಜತೆಗೆ ಬಂದರೂ ಸ್ವಾಗತಿಸಿ ಬಾರಪ್ಪಾ ಅಂತ ಕರ್ಕೋತೀವಿ ಎಂದು ಛೇಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ