ಆ್ಯಪ್ನಗರ

7ರಿಂದ ಹಾಸನದಲ್ಲಿ ಸಿಐಟಿಯು ಕೌನ್ಸಿಲ್‌ ಸಭೆ

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಆ.7ರಿಂದ 10ರವರೆಗೆ ಸಿಐಟಿಯು ಅಖಿಲ ಭಾರತ ಜನರಲ್‌ ಕೌನ್ಸಿಲ್‌ ಸಭೆ ಆಯೋಜಿಸಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಧರ್ಮೇಶ್‌ ತಿಳಿಸಿದರು.

Vijaya Karnataka 4 Aug 2019, 5:00 am
ಹಾಸನ: ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಆ.7ರಿಂದ 10ರವರೆಗೆ ಸಿಐಟಿಯು ಅಖಿಲ ಭಾರತ ಜನರಲ್‌ ಕೌನ್ಸಿಲ್‌ ಸಭೆ ಆಯೋಜಿಸಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಧರ್ಮೇಶ್‌ ತಿಳಿಸಿದರು.
Vijaya Karnataka Web citu council meeting on 7
7ರಿಂದ ಹಾಸನದಲ್ಲಿ ಸಿಐಟಿಯು ಕೌನ್ಸಿಲ್‌ ಸಭೆ


''ಭಾರತದ ಕೇಂದ್ರ ಕಾರ್ಮಿಕ ಸಂಘಟನೆಯಾದ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು)ನ ಅತ್ಯುನ್ನತ ಸಮಿತಿಯಾದ ಅಖಿಲ ಭಾರತ ಜನರಲ್‌ ಕೌನ್ಸಿಲ್‌ನ ಸಭೆಯನ್ನು ನಡೆಸಲಾಗುತ್ತಿದೆ. ಈ ಸಭೆಗೆ ದೇಶದ ಎಲ್ಲಾ ರಾಜ್ಯಗಳಿಂದ ಸುಮಾರು 450 ಕಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಸಭೆಯ ಕೊನೆಯ ದಿನವಾದ ಆ.10ರಂದು ಕಾರ್ಮಿಕರ ಬೃಹತ್‌ ರಾರ‍ಯಲಿ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ,'' ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

''ಸಾರ್ವಜನಿಕ ಬಹಿರಂಗ ಸಭೆ ಆ.10ರಂದು ಶನಿವಾರ ನಗರದ ಹಾಸನಂಬ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಬೆಳಗ್ಗೆ 11ಕ್ಕೆ ಹೇಮಾವತಿ ಪ್ರತಿಮೆ ಮುಂಭಾಗದಿಂದ ಕೆಂಪು ಸಮವಸ್ತ್ರದಲ್ಲಿ ಆಕರ್ಷಕ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದ ಪ್ರಮುಖ ಭಾಷಣಕಾರರಾಗಿ ಕಾಮ್ರೇಡ್‌ ಡಾ.ಕೆ.ಹೇಮಲತಾ, ತಪನ್‌ ಸೇನ್‌, ಎಸ್‌.ವರಲಕ್ಷ್ಮಿ, ಮೀನಾಕ್ಷಿ ಸುಂದರಂ, ಧರ್ಮೇಶ್‌ ಭಾಗವಹಿಸಲಿದ್ದಾರೆ,'' ಎಂದರು.

''ದೇಶದಲ್ಲಿ ಬಂಡವಾಳದ ಪರವಾದ ಆರ್ಥಿಕ ನೀತಿಗಳನ್ನು ಅತ್ಯಂತ ಆಕ್ರಮಣಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರಕಾರ ದೇಶದ ಕೈಗಾರಿಕೆ ಮತ್ತು ಆರ್ಥಿಕ ವಲಯಗಳ ಮೇಲೆ ತನ್ನ ಬಲಪಂಥೀಯ ದಾಳಿ ಆರಂಭಿಸಿದೆ. ನೀತಿ ಆಯೋಗ ಬಿಡುಗಡೆ ಮಾಡಿರುವ ಹೊಸ ಸರಕಾರ 100 ದಿನಗಳ ಗುರಿಯಲ್ಲಿ ದೇಶದ ಆರ್ಥಿಕತೆಯ ಆಧಾರ ಸ್ತಂಭಗಳಾದ ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕ್‌, ವಿಮೆ ಇನ್ನಿತರೆ ಹಣಕಾಸು ವಲಯಗಳ ಖಾಸಗೀಕರಣಗೊಳಿಸಲು ನಿರ್ಧರಿಸಿದೆ,'' ಎಂದು ದೂರಿದರು.

ನವೀನ್‌, ಎಂ.ಬಿ.ಪುಷ್ಪ, ಅರವಿಂದ್‌, ಕರಿಯಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ