ಆ್ಯಪ್ನಗರ

ಮೈತ್ರಿ ಪಕ್ಷದ ಶಾಸಕ-ಸಚಿವರ ಮಧ್ಯೆ ಮಾತಿನ ಚಕಮಕಿ

ಕಳೆದ ಹತ್ತು ವರ್ಷದಿಂದ ಹಾಸನ ಜಿಲ್ಲೆಗೆ ಏನೂ ಕೆಲಸ ಆಗಿಲ್ಲ ಎಂಬ ಸಚಿವ ರೇವಣ್ಣ ಅವರ ಮಾತಿನಿಂದ ಕೆರಳಿದ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.

Vijaya Karnataka 2 Feb 2019, 12:09 am
ಹಾಸನ: ಕಳೆದ ಹತ್ತು ವರ್ಷದಿಂದ ಹಾಸನ ಜಿಲ್ಲೆಗೆ ಏನೂ ಕೆಲಸ ಆಗಿಲ್ಲ ಎಂಬ ಸಚಿವ ರೇವಣ್ಣ ಅವರ ಮಾತಿನಿಂದ ಕೆರಳಿದ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.
Vijaya Karnataka Web clash between the mla and the minister
ಮೈತ್ರಿ ಪಕ್ಷದ ಶಾಸಕ-ಸಚಿವರ ಮಧ್ಯೆ ಮಾತಿನ ಚಕಮಕಿ


ಶುಕ್ರವಾರ ಹಾಸನ ಜಿಲ್ಲಾ ಪಂಚಾಯಿತಿಯ ಹೊಯ್ಸಳ ಸಭಾಂಗಣದಲ್ಲಿ ಬರ ಅಧ್ಯಯನ ಸಮಿತಿ ಅಧ್ಯಕ್ಷರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂತಹದ್ದೊಂದು ಪ್ರಸಂಗ ನಡೆಯಿತು.

‘‘ಈ ಹಿಂದೆ ನಮ್ಮ ಸಿದ್ದರಾಮಯ್ಯ ಸರಕಾರದಲ್ಲಿಯೂ ಕೆಲಸವಾಗಿದೆ. ನೀವು ಹಾಗೆ ಹೇಳಬೇಡಿ,’’ ಎಂದು ಕೈ ಶಾಸಕ ಗೋಪಾಲಸ್ವಾಮಿ ಅವರು ರೇವಣ್ಣ ವಿರುದ್ಧ ಗರಂ ಆದರು.

‘‘ಏನು ಕೆಲಸ ಆಗಿದೆ ಹೇಳಿ,’’ ಎಂದು ಏರು ಧ್ವನಿಯಲ್ಲೇ ಸಚಿವ ರೇವಣ್ಣ ಕೇಳುತ್ತಿದ್ದಂತೆ, ‘‘ಹಾಸನದಲ್ಲಿ ಬೇಕಾದಷ್ಟು ಕೆಲಸ ಆಗಿದೆ,’’ ಎಂದು ಶಾಸಕರು ಪ್ರತ್ಯುತ್ತರ ನೀಡಿದರು.

‘‘ಬರೀ ಎಂಜಿನಿಯರಿಂಗ್ ಕಾಲೇಜು ಡೋರ್ ರಿಪೇರಿ ಮಾಡಲೂ ನಿಮ್ಮಿಂದ ಆಗಿಲ್ಲ,’’ ಎಂದು ಆಕ್ರೋಶ ವ್ಯಕ್ತಪಡಿಸಿದ ರೇವಣ್ಣ, ‘‘ ನಿಮ್ಮ ಅವಧಿಯಲ್ಲಿ ಕಾಲೇಜು ಮುಚ್ಚೋ ಹಾಗಾಗಿದೆ,’’ ಎಂದು ಕಿಡಿಕಾರಿದರು.

‘‘ನಮ್ಮ ಸರಕಾರದ ಅವಧಿಯಲ್ಲಿಯೂ ಕೆಲಸ ಆಗಿದೆ. ನೀವ್ಯಾಕೆ ಆಗಿಲ್ಲಾ ಅಂತೀರಾ. ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿಯೂ ಕೆರೆ ತುಂಬಿಸೋ ಯೋಜನೆ ಸೇರಿದಂತೆ ಹಲವು ಯೋಜನೆ ಜಾರಿಯಾಗಿದೆ,’’ ಎಂದು ಪರಿಷತ್ ಸದಸ್ಯ ಗೋಪಾಲಸ್ವಾಮಿ ವಾಗ್ವಾದಕ್ಕಿಳಿದರು.

‘‘ರೇವಣ್ಣರಿಗೆ ಇನ್ನೂ ಹೆಚ್ಚಿನ ಕೆಲಸ ಆಗಬೇಕಿತ್ತು ಅನ್ನೊ ಆಸೆ ಇದೆ ಅನ್ಸುತ್ತೆ,’’ ಎಂದು ಸಚಿವ ಕೃಷ್ಣ ಭೈರೇಗೌಡ ಜಗಳಕ್ಕೆ ತೇಪೆ ಹಚ್ಚಿದರು.
‘‘ರೀ ಪ್ರೀತಂ ನೀನು ಜಗಳ ಹಚ್ಚಿ ತಮಾಷೆ ನೋಡ್ತೀಯಪ್ಪಾ,’’ ಎಂದು ಬಿಜೆಪಿ ಶಾಸಕ ಪ್ರೀತಂಗೆ ಸಚಿವ ಭೈರೇಗೌಡ ಕಾಲೆಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ